2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್ ಕಮಲ್
Team Udayavani, Aug 16, 2022, 7:30 AM IST
ಚೆನ್ನೈ: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ 4 ಪದಕ ಗೆದ್ದು, 40ನೇ ವರ್ಷದಲ್ಲೂ ಅಮೋಘ ಸಾಧನೆಗೈದ ಟಿಟಿಪಟು ಅಚಂತ ಶರತ್ ಕಮಲ್ ಒಲಿಂಪಿಕ್ಸ್ ಗ್ಲೋರಿಯೊಂದಿಗೆ ವೃತ್ತಿಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದಿದ್ದಾರೆ.
ಕಳೆದ 20 ವರ್ಷಗಳಿಂದಲೂ ಉನ್ನತ ಮಟ್ಟದ ಪ್ರದರ್ಶನ ನೀಡುತ್ತಲೇ ಇರುವ ಅಚಂತ ಶರತ್ ಕಮಲ್, ತಮ್ಮ ಕ್ರೀಡಾ ಬದುಕಿನಲ್ಲಿ ಇನ್ನೂ ಒಲಿಂಪಿಕ್ಸ್ ಪದಕ ಗೆದ್ದಿಲ್ಲ. ಈಗಿನ ಬರ್ಮಿಂಗ್ಹ್ಯಾಮ್ ಗೇಮ್ಸ್ ಸಾಧನೆ ಕಂಡಾಗ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕದ ಬಾಗಿಲು ತೆರೆದೀತು ಎಂಬುದು ಅವರ ನಂಬಿಕೆ.
“ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ನನ್ನ ಬದುಕಿನ ಶ್ರೇಷ್ಠ ಕ್ರೀಡಾಕೂಟ. ಈವರೆಗೆ ನಾನು ಒಂದೇ ಕೂಟದಲ್ಲಿ 3 ಪದಕ ಗೆದ್ದಿರಬಹುದು, ಆದರೆ 4 ಪದಕ ಜಯಿಸಿದ್ದು ಇದೇ ಮೊದಲು. ಸದ್ಯ ನಿವೃತ್ತಿ ನಿರ್ಧಾರ ಮಾಡಿಲ್ಲ. ನನ್ನ ಪದಕಗಳ ಹಸಿವು ಇನ್ನೂ ಇಂಗಿಲ್ಲ. ಫಿಟ್ನೆಸ್ ಎಂಬುದು ನಮ್ಮ ಪಾಲಿನ ಕೀ. ಇದನ್ನು ಕಾಪಾಡಿಕೊಂಡರೆ ಒಲಿಂಪಿಕ್ಸ್ ಅರ್ಹತೆ ಅಸಾಧ್ಯವಲ್ಲ. ಪ್ಯಾರಿಸ್ ತಂಡ ಸ್ಪರ್ಧೆಗೆ ಅರ್ಹತೆ ಸಂಪಾದಿಸಿದ್ದೇ ಆದಲ್ಲಿ ಪದಕವೊಂದನ್ನು ಗೆಲ್ಲುವುದು ಖಚಿತ’ ಎಂಬ ದೃಢ ವಿಶ್ವಾಸ ಶರತ್ ಕಮಲ್ ಅವರದು.
ಹಂತ ಹಂತದ ಪ್ರಕ್ರಿಯೆ
“ಇದೊಂದು ಹಂತ ಹಂತದ ಪ್ರಕ್ರಿಯೆ. ಮೊದಲು ನಾವು ಕಾಮನ್ವೆಲ್ತ್ ಗೇಮ್ಸ್ ಹಂತ ತಲುಪಿದೆವು. ಮುಂದಿನದು ಏಷ್ಯಾಡ್. ಅನಂತರವೇ ಒಲಿಂಪಿಕ್ಸ್ ಸರದಿ. ಗೇಮ್ಸ್ ಚಿನ್ನಕ್ಕಾಗಿ ನಾನು 16 ವರ್ಷ ಕಾದೆ. 2006ರ ಬಳಿಕ ಇದು ಒಲಿದದ್ದು ಮೊನ್ನೆಯಷ್ಟೆ. 2006ರಲ್ಲಿ ನಾನು ಚಿಕ್ಕವ. ರ್ಯಾಂಕಿಂಗ್ 130ರಷ್ಟು ಕೆಳ ಮಟ್ಟದಲ್ಲಿತ್ತು. ನನ್ನ ಮೇಲೆ ಯಾವುದೇ ನಿರೀಕ್ಷೆ ಇರಲಿಲ್ಲ. ಈ ಬಾರಿ ನಿರೀಕ್ಷೆ ವಿಪರೀತವಾಗಿತ್ತು. ದೇಶದಲ್ಲಿ ಟಿಟಿ ಜನಪ್ರಿಯತೆ ಹೆಚ್ಚುತ್ತಿದೆ. ಯುವ ಜನಾಂಗದ ಮೇಲೆ ನಮ್ಮ ಸಾಧನೆ ಖಂಡಿತವಾಗಿಯೂ ಪ್ರಭಾವ ಬೀರಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಅಚಂತ ಶರತ್ ಕಮಲ್.
“ನಾನೀಗ 38ನೇ ರ್ಯಾಂಕಿಂಗ್ ಹೊಂದಿದ್ದೇನೆ.ನನಗಿಂತ ಉನ್ನತ ರ್ಯಾಂಕಿಂಗ್ನ ಜಿ. ಸಥಿಯನ್ (36) ನಮ್ಮಲ್ಲೇ ಇದ್ದಾರೆ. ಇಷ್ಟು ಮೇಲ್ಮಟ್ಟದ ರ್ಯಾಂಕಿಂಗ್ ಆಟಗಾರರನ್ನು ನಮ್ಮ ದೇಶ ಯಾವತ್ತೂ ಹೊಂದಿರಲಿಲ್ಲ’ ಎಂಬ ಖುಷಿ ಶರತ್ ಕಮಲ್ ಅವರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ