ಅಚ್ರೇಕರ್ ಗೆ ಸಿಗಲಿಲ್ಲ ಸರಕಾರಿ ಗೌರವ
Team Udayavani, Jan 5, 2019, 12:30 AM IST
ಮುಂಬಯಿ: ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ನಿಧನದ ಬೆನ್ನಲ್ಲೇ ವಿವಾದ ಎದ್ದಿದೆ. ಮಹಾರಾಷ್ಟ್ರ ಸರಕಾರ ಅಚ್ರೇಕರ್ ಅವರನ್ನು ನಿರ್ಲಕ್ಷಿಸಿದೆ ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಟೀಕಿಸಿದ್ದಾರೆ.
ದ್ರೋಣಾಚಾರ್ಯ, ಪದ್ಮಶ್ರೀ ಪ್ರಶಸ್ತಿ ವಿಜೇತ ಕ್ರಿಕೆಟ್ ಗುರುವಿಗೆ ಅಂತ್ಯ ಸಂಸ್ಕಾರದ ವೇಳೆ ಸರಕಾರದ ವತಿಯಿಂದ ನೀಡಬೇಕಾದ ಕನಿಷ್ಠ ಗೌರವವನ್ನೂ ನೀಡಿಲ್ಲ ಎಂದು ರಾಜ್ ಠಾಕ್ರೆ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಸರಕಾರ, ಸಂಹನದ ಕೊರತೆಯಿಂದ ಹೀಗಾಗಿದೆ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದೆ.