ಶಾಂತಚಿತ್ತ ರಹಾನೆ: ಆಸೀಸ್ ನಾಯಕನ ಪ್ರಶಂಸೆ
Team Udayavani, Mar 25, 2017, 10:35 AM IST
ಧರ್ಮಶಾಲಾ: ಅಂತಿಮ ಟೆಸ್ಟ್ ಪಂದ್ಯ ದಲ್ಲಿ ಭಾರತ ತಂಡದ “ಸಂಭಾವ್ಯ ನಾಯಕ’ನಾಗಿ ಗುರುತಿಸಲ್ಪಟ್ಟಿರುವ ಆಜಿಂಕ್ಯ ರಹಾನೆ, ಶಾಂತಚಿತ್ತದಿಂದ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯ ನಾಯಕ ಸ್ಟೀವನ್ ಸ್ಮಿತ್ ಹೇಳಿದ್ದಾರೆ. ಈ ವಿಷಯದಲ್ಲಿ ಅವರು ವಿರಾಟ್ ಕೊಹ್ಲಿಗಿಂತ ಉತ್ತಮ ಎಂದೂ ಪ್ರಶಂಸಿಸಿದ್ದಾರೆ. ಇದರೊಂದಿಗೆ ಸ್ಮಿತ್ ಮತ್ತೂಮ್ಮೆ ಕೊಹ್ಲಿ ಮೇಲೆರಗಿದ್ದು ಸ್ಪಷ್ಟವಾಗಿತ್ತು!
ಭಾರತ ತಂಡ ವಿರಾಟ್ ಕೊಹ್ಲಿ ಅವರ ಸಂಭಾವ್ಯ ಗೈರನ್ನು ಎಷ್ಟರ ಮಟ್ಟಿಗೆ ತಾಳಿಕೊಂಡೀತು ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಮಿತ್, “ಏನೂ ಆಗುವುದಿಲ್ಲ. ಭಾರತ ಮಾಮೂಲು ಸ್ಥಿತಿಯಲ್ಲೇ ಇರಲಿದೆ. ಆಗ ಅಜಿಂಕ್ಯ ರಹಾನೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಅವರು ನಾಯಕತ್ವವನ್ನು ಚೆನ್ನಾಗಿಯೇ ನಿಭಾಯಿಸಿದ್ದರು. ಇಲ್ಲಿಯೂ ರಹಾನೆ ಸಮರ್ಥ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬಲ್ಲರೆಂಬ ವಿಶ್ವಾಸವಿದೆ…’ ಎಂದು ಸ್ಮಿತ್ ಹೇಳಿದರು.
“ಅಜಿಂಕ್ಯ ರಹಾನೆ ಹೆಚ್ಚು ಶಾಂತಚಿತ್ತ ಸ್ವಭಾವದವರು. ಮೈದಾನದಲ್ಲಿ ಎಲ್ಲವನ್ನೂ ಸಾವಧಾನದಿಂದ, ತಣ್ಣನೆಯ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬಲ್ಲರು. ಅವರು ಹೆಚ್ಚು ಭಾವುಕರಲ್ಲ. ಪಂದ್ಯವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಲ್ಲ ಗುಣ ಅವರು. ನಾನು ಅವರೊಂದಿಗೆ ಕೆಲವೇ ಪಂದ್ಯಗಳಲ್ಲಿ ಆಡಿ ಇದನ್ನೆಲ್ಲ ಹೇಳುತ್ತಿದ್ದೇನೆ. ಅಕಸ್ಮಾತ್ ವಿರಾಟ್ ಕೊಹ್ಲಿ ಈ ಪಂದ್ಯದಿಂದ ಹೊರಗುಳಿದರೂ ಭಾರತ ಯೋಗ್ಯ ನಾಯಕತ್ವವನ್ನೇ ಪಡೆಯಲಿದೆ…’ ಎಂದರು.
ಸ್ಟೀವನ್ ಸ್ಮಿತ್ ಅವರ ಈ ಹೊಗಳಿಕೆಗೆ ಇನ್ನೊಂದು ಕಾರಣವೂ ಇದೆ. ರಹಾನೆ ಮತ್ತು ಸ್ಮಿತ್ ಐಪಿಎಲ್ನಲ್ಲಿ ಒಂದೇ ತಂಡದ ಪರ ಆಡುತ್ತಾರೆ. ಅದು ಪುಣೆ ಟೀಮ್. ಈ ಬಾರಿ ಸ್ಮಿತ್ ಪುಣೆ ತಂಡದ ನಾಯಕನೂ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ