ದುರಂತ ಸಾವಿನಿಂದ ವಿಂಡೀಸ್‌ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಪಾರು

ಸಿಪಿಎಲ್‌ ಟಿ20: ಬ್ಯಾಟ್‌ ಮಾಡುತ್ತಿದ್ದಾಗ ಬಲಗಿವಿ ಬಳಿ ಬಡಿದ ಚೆಂಡು

Team Udayavani, Sep 13, 2019, 9:45 PM IST

russel

ಕಿಂಗ್‌ಸ್ಟನ್‌: ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಆಗಾಗ ದುರಂತಗಳ ಸದ್ದು ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಕಾರಣ ಅಲ್ಲಿ ಬಳಸುವ ಅತ್ಯಂತ ಗಟ್ಟಿಯಾದ ಚರ್ಮದ ಚೆಂಡು. ಆ ಚೆಂಡಿನೇಟಿಗೆ ಸಿಕ್ಕಿ ಸಮೀಪದರಲ್ಲಿ ವಿಂಡೀಸ್‌ನ ಖ್ಯಾತ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನಡೆದಿದ್ದು ವೆಸ್ಟ್‌ ಇಂಡೀಸ್‌ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ. ಈ ಘಟನೆ ಆರಂಭಿಕ ಹಂತದಲ್ಲಿ 2014ರಲ್ಲಿ ಮೃತಪಟ್ಟ ಆಸ್ಟ್ರೇಲಿಯದ ಫಿಲಿಪ್‌ ಹ್ಯೂಸ್‌ ನೆನಪನ್ನು ಬರಿಸಿತ್ತು!

ಆಗಿದ್ದೇನು?: ಜಮೈಕಾ ತಲ್ಲವಾಸ್‌ ಹಾಗೂ ಸೈಂಟ್‌ ಲೂಸಿಯ ಜೂಕ್ಸ್‌ ತಂಡದ ನಡುವೆ ಸಿಪಿಎಲ್‌ ಟಿ20 ಪಂದ್ಯ ಗುರುವಾರ ನಡೆಯುತ್ತಿತ್ತು. ಜಮೈಕಾ ಪರ ಆಂಡ್ರೆ ರಸೆಲ್‌ ಕ್ರೀಸ್‌ನಲ್ಲಿದ್ದರು. ಅವರಿನ್ನೂ ಖಾತೆ ತೆರೆದಿರಲಿಲ್ಲ. ಸೈಂಟ್‌ ಲೂಸಿಯ ತಂಡದ ಹಾರ್ಡಸ್‌ ವಿಲೊjàನ್‌ 14ನೆ ಓವರ್‌ ಎಸೆಯುತ್ತಿದ್ದರು.

ವಿಲೊjàನ್‌ ಎಸೆದ ವೇಗದ ಅರೆ ಪಿಚ್‌ ಎಸೆತವೊಂದು ರಸೆಲ್‌ರನ್ನು ವಂಚಿಸಿ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿಯಿತು. ನಂತರ ಅದು ಅವರ ಬಲಗಿವಿ ಬಳಿ ಹೆಲ್ಮೆಟ್‌ನಲ್ಲಿ ಸಿಕ್ಕಿಕೊಂಡಿತು. ಕೂಡಲೇ ರಸೆಲ್‌ ಕುಸಿದುಬಿದ್ದರು. ನಂತರ ಇತರೆ ಆಟಗಾರರು ಬಂದಾಗ ರಸೆಲ್‌ ಎದ್ದು ನಿಲ್ಲಲು ಯಶಸ್ವಿಯಾದರು. ಆದರೆ ಅವರನ್ನು ಮೈದಾನದ ಸಿಬ್ಬಂದಿ ಸ್ಟ್ರೆಚರ್‌ನಲ್ಲಿ ಹೊರ ಸಾಗಿಸಿದರು. ಕೂಡಲೇ ಸಿಟಿ ಸ್ಕ್ಯಾನ್‌ ಮಾಡಿಸಲಾಯಿತು. ಅಲ್ಲಿನ ವರದಿಗಳ ಪ್ರಕಾರ ಗಂಭೀರವಾದ ಯಾವುದೇ ಅಪಾಯಗಳಿಲ್ಲದೇ ರಸೆಲ್‌ ಪಾರಾಗಿದ್ದರು. ಆದರೆ ರಸೆಲ್‌ ಪಂದ್ಯವಾಡದೇ ಹೊಟೇಲ್‌ನಲ್ಲಿ ವಿಶ್ರಾಂತಿ ಪಡೆದರು. ಅವರು ಸದ್ಯ ಯಾವಾಗ ಕ್ರೀಸ್‌ಗೆ ಮರಳುತ್ತಾರೆಂದು ಕಾದು ನೋಡಬೇಕು.

ಏನದು ಫಿಲಿಪ್‌ ಹ್ಯೂಸ್‌ ದುರಂತ?
ಫಿಲಿಪ್‌ ಹ್ಯೂಸ್‌ ಆಸ್ಟ್ರೇಲಿಯದ ಖ್ಯಾತ ಎಡಗೈ ಆಟಗಾರ. 2014ರ ನವೆಂಬರ್‌ 25ರಂದು ಅವರು ಶೆಫೀಲ್ಡ್‌ ಶೀಲ್ಡ್‌ನಲ್ಲಿ ಸೌಥ್‌ ಆಸ್ಟ್ರೇಲಿಯ ಪರ ಆಡುತ್ತಿದ್ದರು. ನ್ಯೂಸೌತ್‌ ವೇಲ್ಸ್‌ ಬೌಲರ್‌ ಶಾನ್‌ ಅಬೊಟ್‌ ಎಸೆತವೊಂದು ಅವರ ಕುತ್ತಿಗೆ ಬಳಿ ಬಲವಾಗಿ ಬಡಿಯಿತು. ಕೂಡಲೇ ಅವರು ಕುಸಿದುಬಿದ್ದರು. ಪಂದ್ಯವನ್ನು ತಕ್ಷಣ ನಿಲ್ಲಿಸಲಾಯಿತು. ಶೆಫೀಲ್ಡ್‌ ಶೀಲ್ಡ್‌ನ ಇತರೆ ಪಂದ್ಯಗಳೂ ನಿಂತುಹೋದವು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆದರೆ ಮೆದುಳಿನ ಸ್ತಂಭನ ಸಂಭವಿಸಿದ್ದರಿಂದ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನ.27ರ ಬೆಳಗ್ಗೆ ಮೃತಪಟ್ಟರು.

ಹ್ಯೂಸ್‌ರನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ, ಅವರು ಧರಿಸಿದ್ದ ಹೆಲ್ಮೆಟ್‌ ಮೇಲುತಲೆಗೆ ಮಾತ್ರ ರಕ್ಷಣೆ ನೀಡುವ ರೀತಿಯಲ್ಲಿತ್ತು. ಚೆಂಡು ಬಡಿದಿದ್ದು ಹೆಲ್ಮೆಟ್‌ನ ರಕ್ಷಣೆಯಿಲ್ಲದ ಎಡಗಿವಿಗೆ.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.