ವಿಮಾನದಲ್ಲಿ ಅಭಿಮಾನ ಮೆರೆದ ಅನಿಲ್ ಕುಂಬ್ಳೆ
Team Udayavani, Oct 11, 2018, 6:00 AM IST
ಬೆಂಗಳೂರು: ಇದು ವಿಮಾನ ಪ್ರಯಾಣದ ವೇಳೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಭಿಮಾನಿಯೊಬ್ಬರೊಂದಿಗೆ ಬೆರೆತು ಅವರ ಹೃದಯ ಗೆದ್ದ ಘಟನೆ. ಸ್ವತಃ ಅಭಿಮಾನಿ ಸೋಹಿನಿ ಎಂಬವರು ಇದನ್ನು ಬಹಳ ಸಂತಸದಿಂದ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಸೋಹಿನಿ ಬೆಂಗಳೂರಿನಿಂದ ಮುಂಬಯಿಗೆ ವಿಮಾನದಲ್ಲಿ ಪಯಣಿಸುತ್ತಿದ್ದರು. ಇದೇ ವಿಮಾನದಲ್ಲಿ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಇರುವುದನ್ನು ಗಮನಿಸಿದ ಸೋಹಿನಿ, ಬಹಳ ಖುಷಿಯಿಂದ ಟ್ವೀಟ್ ಮಾಡುತ್ತಾರೆ. “ಲೆಜೆಂಡ್ರಿ ಅನಿಲ್ ಕುಂಬ್ಳೆ ಕೂಡ ಇದೇ ವಿಮಾನದಲ್ಲಿದ್ದಾರೆ. ಅವರ ಬಳಿ ಹೋಗಿ, ಅವರು ನಮಗೆ ಕೊಡಿಸಿದ ಕ್ರಿಕೆಟಿನ ಎಲ್ಲ ಸಂತಸ, ಗೆಲುವು ಹಾಗೂ ಸ್ಮರಣೀಯ ಕ್ಷಣಗಳಿಗೆ ದೊಡ್ಡದೊಂದು ಕೃತಜ್ಞತೆ ಸಲ್ಲಿಸಬೇಕೆಂದು ಅನಿಸುತ್ತಿದೆ. ಮುಖ್ಯವಾಗಿ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ಬೌಲಿಂಗ್ ನಡೆಸಿದ ಆ ಗಳಿಗೆಯನ್ನೊಮ್ಮೆ ಅವರೊಂದಿಗೆ ಸ್ಮರಿಸಿಕೊಳ್ಳಬೇಕೆನಿಸಿದೆ. ಆದರೇಕೋ ಹಿಂಜರಿಕೆ ಆಗುತ್ತಿದೆ’ ಎಂಬುದಾಗಿ ಹೇಳಿಕೊಳ್ಳುತ್ತಾರೆ.
ಇದನ್ನು ಗಮನಿಸಿದ ಅನಿಲ್ ಕುಂಬ್ಳೆ, ಕೂಡಲೇ ಆ ಅಭಿಮಾನಿಯ ಟ್ವೀಟ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. “ದಯವಿಟ್ಟು ವಿಮಾನ ಟೇಕ್ಆಫ್ ಆದೊಡನೆ ನನ್ನ ಬಳಿ ಬನ್ನಿ’ ಎಂದು ಆಹ್ವಾನ ನೀಡುತ್ತಾರೆ. ನುಡಿದಂತೆ ನಡೆದುಕೊಳ್ಳುತ್ತಾರೆ. ಸೋಹಿನಿ ಅವರ ಬೋರ್ಡಿಂಗ್ ಪಾಸ್ ಮೇಲೆ ಹಸ್ತಾಕ್ಷರ ನೀಡುತ್ತಾರೆ. “ಥ್ಯಾಂಕ್ಯೂ ಅನಿಲ್ ಕುಂಬ್ಳೆ, ವಿನಮ್ರತೆಯನ್ನು ನಿಮ್ಮಿಂದ ಕಲಿಯಬೇಕಿದೆ’ ಎಂದು ಲೆಜೆಂಡ್ರಿ ಕ್ರಿಕೆಟಿಗನ ಹಸ್ತಾಕ್ಷರದ ಬೋರ್ಡಿಂಗ್ ಪಾಸ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೀಗ ತಾನು ಫ್ರೆಮ್ ಹಾಕಿಸಿ ಇಡುತ್ತೇನೆ ಎಂದು ಸೋಹಿನಿ ಹೆಮ್ಮೆಯಿಂದ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್