ಅಣ್ಣನನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಾರ್ದಿಕ್ ಪಾಂಡ್ಯ ಪರೋಕ್ಷ ಸಂದೇಶ
Team Udayavani, Nov 29, 2020, 4:45 PM IST
ಸಿಡ್ನಿ: ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಪರ ಬ್ಯಾಟಿಂಗ್ನಲ್ಲಿ ಸಿಡಿದಿದ್ದು ಹಾರ್ದಿಕ್ ಪಾಂಡ್ಯ. ಅವರು ಮತ್ತು ಧವನ್ ಆಡುವಾಗ ಗೆಲುವಿನ ಆಸೆಯೊಂದು ಮೊಳೆತಿತ್ತು.
ಆದರೆ ಹಾರ್ದಿಕ್ಗೆ ಬೆನ್ನು ನೋವಿನ ಕಾರಣ ಬೌಲರ್ ಆಗಿ ಕರ್ತವ್ಯ ನಿರ್ವಹಿಸಲು ಆಗದಿರುವುದರಿಂದ ಭಾರತ ತಾಪತ್ರಯಕ್ಕೆ ಸಿಲುಕಿದೆ. ಮೊದಲ ಪಂದ್ಯದಲ್ಲೂ ಅದು ಕಂಡುಬಂತು.
ಈ ಬಗ್ಗೆ ಮಾತನಾಡುವಾಗ ಹಾರ್ದಿಕ್, ಪರೋಕ್ಷವಾಗಿ ತನ್ನಣ್ಣ ಕೃಣಾಲ್ ಪಾಂಡ್ಯರನ್ನೇ ಯಾಕೆ ಪರಿಗಣಿಸಬಾರದು ಎಂಬ ಸಂದೇಶವನ್ನು ರವಾನಿಸಿದ್ದಾರೆ! ತಂಡದಲ್ಲಿ ಆಲ್ರೌಂಡರ್ ಗಳ ಸಮಸ್ಯೆಯಿರುವುದು ಹೌದು. ಆದರೆ ಪಾಂಡ್ಯ ಕುಟುಂಬದಲ್ಲೊಬ್ಬರು ಆಡಲುಕಾಯುತ್ತಿದ್ದಾರೆ ಎಂದು ಹಾರ್ದಿಕ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರೊ ಕಬಡ್ಡಿ ಲೀಗ್ ಅಭಿಮಾನಿಗಳಿಗೆ ಕಹಿ ಸುದ್ದಿ ನೀಡಿದ ಸಂಘಟಕರು!
ಭಾರತ ಕೇವಲ ಐವರು ಬೌಲರ್ ಗಳೊಂದಿಗೆ ಕಣಕ್ಕಿಳಿಯುತ್ತಿದೆ. ಯಾವುದೇ ಬೌಲರ್ ದುಬಾರಿಯಾದರೆ ಮತ್ತೋರ್ವ ಪಾರ್ಟ್ ಟೈಮ್ ಬೌಲರ್ ಇಲ್ಲದೇ ಇರುವುದು ತಂಡಕ್ಕೆ ದುಬಾರಿಯಾಗುತ್ತಿದೆ. ಎರಡನೇ ಏಕದಿನ ಪಂದ್ಯದಲ್ಲಿ ಸೈನಿ ದುಬಾರಿಯಾದಾಗ ಅನಿವಾರ್ಯವಾಗಿ ಹಾರ್ದಿಕ್ ಪಾಂಡ್ಯ ಬಾಲ್ ಹಾಕಬೇಕಾಯಿತು. ನಾಲ್ಕು ಓವರ್ ಬೌಲಿಂಗ್ ಮಾಡಿದ ಪಾಂಡ್ಯ ಒಂದು ವಿಕೆಟ್ ಕೂಡಾ ಕಿತ್ತರು. ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡಾ ಒಂದು ಓವರ್ ಬೌಲಿಂಗ್ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ