ಆರ್ಚರಿ ಅಮಾನತು ಹಿಂದೆಗೆತ ಸಾಧ್ಯತೆ
Team Udayavani, Aug 11, 2019, 5:17 AM IST
ಹೊಸದಿಲ್ಲಿ: ಭಾರತೀಯ ಆರ್ಚರಿ ಅಸೋಸಿಯೇಶನ್ (ಎಎಐ) ಈ ತಿಂಗಳ ಒಳಗಾಗಿ ಸ್ಪಷ್ಟ ಮಾರ್ಗಸೂಚಿ ರಚಿಸಿದರೆ ಅದರ ಮೇಲಿನ ಅಮಾನತು ಆದೇಶವನ್ನು ಷರತುಬದ್ಧವಾಗಿ ಹಿಂದೆಗೆದುಕೊಳ್ಳುವುದಾಗಿ “ವಿಶ್ವ ಆರ್ಚರಿ’ ತಿಳಿಸಿದೆ.
ಎಎಐಯ ಕಾರ್ಯಚಟುವಟಿ ಕೆಗಳ ಬಗ್ಗೆ ಐದು ಸದಸ್ಯರ ಸಮಿತಿ ರಚಿಸಲು ದಿಲ್ಲಿ ಹೈಕೋರ್ಟ್ ಕ್ರೀಡಾ ಸಚಿವಾಲಯಕ್ಕೆ ಆದೇಶ ನೀಡಿದ ಬಳಿಕ ವಿಶ್ವ ಆರ್ಚರಿ ಈ ನಿರ್ಧಾರಕ್ಕೆ ಬಂದಿದೆ.