ದಿಂಡ ಹಣೆಗೆ ಬಡಿದ ಚೆಂಡು
Team Udayavani, Feb 12, 2019, 12:45 AM IST
ಕೋಲ್ಕತಾ: ಟಿ20 ಕ್ರಿಕೆಟ್ ಪಂದ್ಯದ ವೇಳೆ ಬಂಗಾಲದ ಪೇಸ್ ಬೌಲರ್ ಅಶೋಕ್ ದಿಂಡ ಅವರ ಹಣೆಗೆ ಚೆಂಡು ಬಡಿದ ಘಟನೆ ಸೋಮವಾರ ಸಂಭವಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ 2 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ.
ಸೋಮವಾರ “ಈಡನ್ ಗಾರ್ಡನ್ಸ್’ನಲ್ಲಿ ನಡೆದ ಬಂಗಾಲ ಟಿ20 ಅಭ್ಯಾಸ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಬ್ಯಾಟ್ಸ್ಮನ್ ಬೀರೇಂದರ್ ವಿವೇಕ್ ಸಿಂಗ್ ಬಲವಾಗಿ ಬಾರಿಸಿದ ಚೆಂಡನ್ನು ರಿಟರ್ನ್ ಕ್ಯಾಚ್ ಪಡೆಯುವ ವೇಳೆ ಅಶೋಕ್ ದಿಂಡ ಈ ಆಘಾತಕ್ಕೆ ಸಿಲುಕಿದ್ದಾರೆ. ಆಗ ಚೆಂಡು ಅವರ ಕೈಯಿಂದ ಜಾರಿ ಹಣೆಗೆ ಹೋಗಿ ಬಡಿಯಿತು. ಇದರಿಂದ ಗಂಭೀರ ಪೆಟ್ಟೇನೂ ಸಂಭವಿಸಲಿಲ್ಲ. ಆ ಓವರ್ ಪೂರ್ತಿಗೊಳಿಸಿದ ಬಳಿಕ ಅಶೋಕ್ ದಿಂಡ ಡ್ರೆಸ್ಸಿಂಗ್ ರೂಮ್ಗೆ ವಾಪಸಾದರು.
ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್ ನಡೆಸಲಾಗಿದ್ದು, ವೈದ್ಯರು ದಿಂಡ ಅವರಿಗೆ 2 ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ