ಭಾರತ – ಹಾಂಕಾಂಗ್: ಟಾಸ್ ಗೆದ್ದ ಹಾಂಕಾಂಗ್: ಟೀಮ್ ಇಂಡಿಯಾದಲ್ಲಿ ಆಲ್ ರೌಂಡರ್ ಔಟ್
Team Udayavani, Aug 31, 2022, 7:19 PM IST
ದುಬಾೖ: ಭಾರತ – ಹಾಂಕಾಂಗ್ ಪಂದ್ಯದಲ್ಲಿ ಹಾಂಕಾಂಗ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಬ್ಯಾಟಿಂಗ್, ಬೌಲಿಂಗ್ನಲ್ಲಿ ಈ ಹಿಂದಿನ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಆಟಗಾರರು ಇಲ್ಲಿ ಭರ್ಜರಿ ಪ್ರದರ್ಶನ ನೀಡುವ ಸಾಧ್ಯತೆಯಿದೆ. ಭಾರತ ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಹೊರಗಿಟ್ಟು, ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಬಹಳಷ್ಟು ಪ್ರಾಮುಖ್ಯ ಪಡೆಯುತ್ತದೆ. ಎದುರಾಳಿ ತಂಡದ ರನ್ವೇಗಕ್ಕೆ ಕಡಿವಾಣ ಹಾಕಲು ತಂಡ ಯಶಸ್ವಿಯಾಗುವುದು ಅತೀ ಮುಖ್ಯವಾಗಿದೆ. ಇದೇ ವೇಳೆ ಬ್ಯಾಟ್ಸ್ಮನ್ಗಳು ಕೂಡ ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ನಿಭಾಯಿಸಿ ವೇಗವಾಗಿ ರನ್ ಪೇರಿ ಸುವುದು ಅಗತ್ಯವಾಗಿದೆ. ಇಲ್ಲಿ ಆಟಗಾರರ ಗುಣಮಟ್ಟದ ಆಟವು ಪ್ರಮುಖ ಪಾತ್ರ ವಹಿಸುತ್ತದೆ. ಮುಂದೆ ಟಿ20 ವಿಶ್ವಕಪ್ ಇರುವ ಕಾರಣ ಭಾರತ ಈ ಪಂದ್ಯವನ್ನು ಕೂಡ ಗಂಭೀರವಾಗಿ ಪರಿಗಣಿಸಿ ಅಮೋಘ ಪ್ರದರ್ಶನ ನೀಡುವುದು ಅತೀ ಮುಖ್ಯ ಎನಿಸುತ್ತದೆ.
ನಿಸ್ಸಂಶಯವಾಗಿ ಹಾಂಕಾಂಗ್ನ ಬೌಲಿಂಗ್ ಗುಣಮಟ್ಟ ಪಾಕಿ ಸ್ಥಾನ ದಷ್ಟು ನಿಖರವಾಗಿಲ್ಲ. ಆದರೆ ಅವರ ದಾಳಿಯನ್ನು ಹಗುರವಾಗಿ ಕಾಣುವ ಸಾಧ್ಯತೆಯಿಲ್ಲ. ಅವರು ಯಾವ ರೀತಿ ಬೌಲಿಂಗ್ ಮಾಡುತ್ತಾರೆಂದು ನಿಖರವಾಗಿ ತಿಳಿದಿಲ್ಲ ವಾದ್ದರಿಂದ ಆಟಗಾರರು ಎಚ್ಚರಿಕೆ ಯಿಂದ ಆಡುವುದು ಅತೀ ಅಗತ್ಯ ವಾಗಿದೆ. ಹೀಗಾಗಿ ರಾಹುಲ್ ಸಹಿತ ಎಲ್ಲ ಆಟಗಾರರು ಬಹಳಷ್ಟು ಎಚ್ಚರಿಕೆ ಯಿಂದ ಆಡಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಬೇಕಾಗಿದೆ.
ತಂಡಗಳು:
ಭಾರತ:
ರೋಹಿತ್ ಶರ್ಮಾ(ಕ್ಯಾಪ್ಟನ್), ಕ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್,( ಕೀಪರ್) ದಿನೇಶ್ ಕಾರ್ತಿಕ್ ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜುವೇಂದ್ರ ಚಾಹಲ್ ಮತ್ತು ಅರ್ಷದೀಪ್ ಸಿಂಗ್
ಹಾಂಗ್ ಕಾಂಗ್ :
ನಿಜಾಕತ್ ಖಾನ್ (ಕ್ಯಾಪ್ಟನ್), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ಕೀಪರ್), ಜೀಶಾನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಗಜನ್ಫರ್