ಮುಶಫಿಕರ್  ರಹೀಂ ಸೂಪರ್‌ ಶತಕ: ಬಾಂಗ್ಲಾಗೆ ಸುಲಭ ಜಯ  


Team Udayavani, Sep 16, 2018, 11:53 AM IST

rahim.jpg

ಢಾಕಾ: ಮುಶಫಿಕರ್ ರಹೀಂ ಅವರ ಅಮೋಘ ಶತಕದಿಂದಾಗಿ ಆತಿಥೇಯ ಬಾಂಗ್ಲಾದೇಶವು ಏಶ್ಯಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ತಂಡದೆದುರು 261 ರನ್‌ ಗಳಿಸಿ ಆಲೌಟಾಗಿದೆ.ಶ್ರೀಲಂಕಾ ಕೇವಲ 124 ರನ್ ಗೆ ಅಲ್ ಔಟ್ ಆಯಿತು. ಈ ಮೂಲಕ ಬಾಂಗ್ಲಾ 137ರನ್ ಗಳ ಭರ್ಜರಿ ಗೆಲುವು ಸಾಧಿಸಿತು. 

ಲಸಿತ ಮಾಲಿಂಗ ದಾಳಿಗೆ ಆರಂಭಿಕ ಕುಸಿತ ಕಂಡಿದ್ದ ಬಾಂಗ್ಲಾದೇಶವನ್ನು ಮುಶಫಿಕರ್ ರಹೀಂ ಆಧರಿಸಿದರು. ಅವರು ಮತ್ತು ಮೊಹಮ್ಮದ್‌ ಮಿಥುನ್‌ ಮೂರನೇ ವಿಕೆಟಿಗೆ ಸೇರಿಸಿದ ಶತಕದ ಜತೆಯಾಟದಿಂದಾಗಿ ಬಾಂಗ್ಲಾ ಚೇತರಿಸುವಂತಾಯಿತು. ಅಂತಿಮವಾಗಿ 49.3 ಓವರ್‌ಗಳಲ್ಲಿ 261 ರನ್‌ ಗಳಿಸಿ ಆಲೌಟಾಯಿತು.

ಮಾಲಿಂಗ ಮಾರಕ ದಾಳಿ
ದೀರ್ಘ‌ ಸಮಯದ ಬಳಿಕ ತಂಡಕ್ಕೆ ಮರಳಿದ್ದ ಲಸಿತ ಮಾಲಿಂಗ ಆರಂಭದಲ್ಲಿ ಬಾಂಗ್ಲಾ ಮೇಲೆ ಮಾರಕ ದಾಳಿ ಸಂಘಟಿಸಿದರು. ಆರಂಭಿಕ ತಮಿಮ್‌ ಇಕ್ಬಾಲ್‌ ಅವರನ್ನು ಗಾಯಗೊಳಿಸಿದ್ದ ಅವರು 1 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಹಾರಿಸಿದ್ದರು. ಈ ಆಘಾತದ ನಡುವೆಯೂ ಮುಶ್ಫಿàಕರ್‌ ರಹೀಂ ಎಚ್ಚರಿಕೆಯ ಆಟವಾಡಿದರು. ಅವರು ಮತ್ತು ಮಿಥುನ್‌ ಶ್ರೀಲಂಕಾ ದಾಳಿಯನ್ನು ಸಮರ್ಥವಾಗಿ ಎದುರಿಸಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಮೂರನೇ ವಿಕೆಟಿಗೆ 131 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು.

ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಈ ಜೋಡಿಯನ್ನು ಮತ್ತೆ ಮಾಲಿಂಗ ಮುರಿಯುವಲ್ಲಿ ಯಶಸ್ವಿಯಾದರು. 63 ರನ್‌ ಗಳಿಸಿದ ಮೊಹಮ್ಮದ್‌ ಮಿಥುನ್‌ ಅವರು ಮಾಲಿಂಗ ಅವರ ಮೂರನೇ ಬಲಿಯಾದರು. ಆಬಳಿಕ ಬಾಂಗ್ಲಾ ಮತ್ತೆ ಹಠಾತ್‌ ಕುಸಿಯತೊಡಗಿತು. 142 ರನ್‌ ತಲುಪುವಷ್ಟರಲ್ಲಿ ತಂಡ ಇನ್ನೆರಡು ವಿಕೆಟ್‌ ಕಳೆದುಕೊಂಡಿತು. ಆಬಳಿಕ ಮುಶ್ಫಿàಕರ್‌ ಬಾಲಂಗೋಚಿಗಳ ನೆರವು ಪಡೆದು ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ವೈಯಕ್ತಿಕವಾಗಿ ಶತಕ ಪೂರೈಸಿದ ಬಳಿಕ ಸ್ಫೋಟಕವಾಗಿ ಆಡಿದರು. 

9ನೇ ವಿಕೆಟ್‌ ಪತನದ ಬಳಿಕ ಕೈಗೆ ಗಾಯಗೊಂಡಿದ್ದ ತಮಿಮ್‌ ಇಕ್ಬಾಲ್‌ ಮತ್ತೆ ಆಡಲು ಬಂದರು. ಅವರು ಮುಶಫಿಕರ್ ಜತೆ ಅಂತಿಮ ವಿಕೆಟಿಗೆ 32 ರನ್‌ ಪೇರಿಸಿದರು. ಅಂತಿಮ ಓವರಿನ ಮೊದಲೆರಡು ಎಸೆತವನ್ನು ಸಿಕ್ಸರ್‌ಗೆ ತಳ್ಳಿದ್ದ ಮುಶಫಿಕರ್ ಮೂರನೇ ಎಸೆತದಲ್ಲಿ ಔಟಾದರು. 150 ಎಸೆತ ಎದುರಿಸಿದ ಅವರು 14 ರನ್‌ ಗಳಿಸಿ ಔಟಾದರು. 11 ಬೌಂಡರಿ ಮತ್ತು 4 ಸಿಕ್ಸರ್‌ ಸಿಡಿಸಿ ರಂಜಿಸಿದರು.

ತಮಿಮ್‌ ಇಕ್ಬಾಲ್‌ಗೆ ಗಾಯ
ಢಾಕಾ:
ಬಾಂಗ್ಲಾದೇಶ ಆರಂಭಿಕ ತಮಿಮ್‌ ಇಕ್ಬಾಲ್‌ ಅವರು ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಏಶ್ಯಕಪ್‌ ಕ್ರಿಕೆಟ್‌ ಕೂಟದ ಆರಂಭಿಕ ಪಂದ್ಯದ ವೇಳೆ ಎಡಕೈಗೆ ಗಾಯ ಮಾಡಿಕೊಂಡಿದ್ದಾರೆ. ಕಡಿಮೆಪಕ್ಷ ಆರು ವಾರ ವಿಶ್ರಾಂತಿ ಪಡೆಯಬೇಕಾಗಿದೆ. ಅವರು ಬಾಂಗ್ಲಾ ಇನ್ನಿಂಗ್ಸ್‌ನ ಕೊನೆಯಲ್ಲಿ ಆಡಲು ಬಂದಿದ್ದರು. ಅವರು ಈ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
ದ್ವಿತೀಯ ಓವರ್‌ ವೇಳೆ ಸುರಂಗ ಲಕ್ಮಲ್‌ ಅವರ ಎಸೆತವೊಂದು ಇಕ್ಬಾಲ್‌ ಅವರ ಎಡ ಕೈಗೆ ಬಡಿದಿತ್ತು. ತತ್‌ಕ್ಷಣವೇ ಫಿಸಿಯೋ ಅವರಿಗೆ ಬರುವಂತೆ ಸನ್ನೆ ಮಾಡಿದರು. ಆಬಳಿಕ ಆಸ್ಪತ್ರೆಗೆ ಕೊಂಡೊಯ್ದು ಸ್ಕ್ಯಾನ್‌ ನಡೆಸಲಾಯಿತು. ತೋರು ಬೆರಳಿನ ಬದಿ ಕ್ರ್ಯಾಕ್‌ ಆಗಿರುವುದು ಸ್ಕ್ಯಾನ್‌ನಲ್ಲಿ ಗೋಚರಿಸಿದ್ದು ವಿಶ್ರಾಂತಿ ಪಡೆಯುವಂತೆ  ಸೂಚಿಸಲಾಗಿದೆ. ಇಕ್ಬಾಲ್‌ ಗಾಯಗೊಂಡಿರುವುದು ಬಾಂಗ್ಲಾಕ್ಕೆ ಬಲವಾದ ಹೊಡೆತ ಬಿದ್ದಿದೆ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.