ಏಶ್ಯನ್ ಆ್ಯತ್ಲೆಟಿಕ್ : ಅನ್ನು, ಅವಿನಾಶ್ಗೆ ಬೆಳ್ಳಿ; ಕಂಚು ಗೆದ್ದ ಪೂವಮ್ಮ
Team Udayavani, Apr 23, 2019, 11:49 AM IST
ದೋಹಾ: ದೋಹಾದಲ್ಲಿ ನಡೆ ಯುತ್ತಿರುವ ಏಶ್ಯನ್ ಆ್ಯತ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರಿನ ಓಟದ ತಾರೆ ಎಂ.ಆರ್. ಪೂವಮ್ಮ ಕಂಚಿನ ಪದಕ ಜಯಿಸಿ ದ್ದಾರೆ. ರವಿವಾರ ತಡರಾತ್ರಿ ನಡೆದ ವನಿತೆಯರ 400 ಮೀ. ಓಟದಲ್ಲಿ ಪೂವಮ್ಮ ತೃತೀಯ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು. ಬೆಳ್ಳಿಯನ್ನು ಸ್ವಲ್ಪದರಲ್ಲೇ ಕಳೆದುಕೊಂಡರು.
ಮೊದಲ ದಿನ 5 ಪದಕ
ಕೂಟದ ಮೊದಲ ದಿನವಾದ ರವಿವಾರ ಭಾರತ 2 ಬೆಳ್ಳಿ, 3 ಕಂಚು ಸೇರಿದಂತೆ ಒಟ್ಟು 5 ಪದಕಗಳನ್ನು ಗೆದ್ದಿತು. ಅನ್ನು ರಾಣಿ ಮತ್ತು ಅವಿನಾಶ್ ಸಾಬ್ಲೆ ಬೆಳ್ಳಿ ಜಯಿಸಿದರೆ, ಎಂ.ಆರ್. ಪೂವಮ್ಮ, ಜಿ. ಮುರಳಿ ಕುಮಾರ್ ಮತ್ತು ಪಾರುಲ್ ಚೌಧರಿ ಕಂಚಿಗೆ ತೃಪ್ತಿಪಟ್ಟರು.
ವನಿತೆಯರ 400 ಮೀ. ಓಟದಲ್ಲಿ ಎಂ.ಆರ್. ಪೂವಮ್ಮ ಮೂರನೇ ಸ್ಥಾನಕ್ಕೆ ಸಮಾಧಾನ ಪಡಬೇಕಾಯಿತು. ಈ ದೂರವನ್ನು ಅವರು 53.21 ಸೆಕೆಂಡ್ಗಳಲ್ಲಿ ಪೂರ್ತಿಗೊಳಿಸಿದರು. ಬಹ್ರೈನ್ನ ಸಲ್ವಾ ಇದ್ ನಾಸೆರ್ ಚಿನ್ನ (51.34) ಮತ್ತು ಕಜಾಕ್ಸ್ಥಾನದ ಎಲಿನಾ ಮಿಖೀನಾ ಬೆಳ್ಳಿ ಗೆದ್ದರು (53.19). ಹೀಟ್ಸ್ನಲ್ಲಿ 52.4 ಸೆಕೆಂಡ್ ದಾಖಲಿಸಿದ ಪೂವಮ್ಮ, ಫೈನಲ್ನಲ್ಲಿ ಇದನ್ನು ಪುನರಾ ವರ್ತಿಸುವಲ್ಲಿ ವಿಫಲರಾದರು. “ನಾನು ಬೆಳ್ಳಿ ಪದಕದ ನಿರೀಕ್ಷೆಯಲ್ಲಿದ್ದೆ. ಆದರೆ ನನ್ನ ದೇಹ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ’ ಎಂದು ಪೂವಮ್ಮ ಹೇಳಿದರು. ಮೊದಲ ದಿನದ ಅಂತ್ಯಕ್ಕೆ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನ ಪಡೆಯಿತು. ಬಹ್ರೈನ್, ಚೀನ, ಇರಾನ್ ಮತ್ತು ಫಿಲಿಪ್ಪೀನ್ಸ್ ಮೊದಲ 4 ಸ್ಥಾನದಲ್ಲಿವೆ.
ಅವಳಿ ಚಿನ್ನ
ಸೋಮವಾರ ಭಾರತ ಅವಳಿ ಚಿನ್ನದ ಪದಕ ಜಯಿಸಿತು. ವನಿತಾ 800 ಮೀ. ಓಟವನ್ನು ಗೋಮತಿ ಮಾರಿಮುತ್ತು 2 ನಿಮಿಷ, 02.70 ಸೆಕೆಂಡ್ಗಳಲ್ಲಿ ಮುಗಿಸಿ ಭಾರತದ ಚಿನ್ನದ ಖಾತೆ ತೆರೆದರು. ಬಳಿಕ ಶಾಟ್ಪುಟರ್ ತೇಜಿಂದರ್ ಸಿಂಗ್ ತೂರ್ 20.22 ಮೀ. ದೂರದ ಸಾಧನೆಯೊಂದಿಗೆ ಬಂಗಾರ ಗೆದ್ದರು. ಪುರುಷರ ಜಾವೆಲಿನ್ ಎಸೆತದಲ್ಲಿ ಶಿವಪಾಲ್ ಸಿಂಗ್ ಅವರಿಗೆ ಬೆಳ್ಳಿ ಒಲಿಯಿತು (86.23 ಮೀ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ