ರೋಹಿತ್ ಶತಕ ವ್ಯರ್ಥ :ವೀರಾವೇಶದ ಆಟದ ಹೊರತಾಗಿಯೂ ಭಾರತಕ್ಕೆ ಸೋಲು !
Team Udayavani, Jan 12, 2019, 6:11 AM IST
ಸಿಡ್ನಿ: ಇಲ್ಲಿ ಶನಿವಾರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪ್ರವಾಸಿ ಭಾರತ ತಂಡ ವೀರಾವೇಶದ ಆಟ ಪ್ರದರ್ಶಿಸಿದ ಹೊರತಾಗಿಯೂ 34 ರನ್ಗಳ ಸೋಲು ಅನುಭವಿಸಬೇಕಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 288 ರನ್ಗಳಿಸಿ ಕೊಹ್ಲಿ ಪಡೆಗೆ ಗೆಲ್ಲಲು 289 ರನ್ಗಳ ಸವಾಲು ಮುಂದಿಟ್ಟಿತ್ತು. ಆದರೆ ಆರಂಭದಲ್ಲೇ ಭಾರೀ ಅಘಾತಕ್ಕೆ ಸಿಲುಕಿದ ತಂಡ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಸೋಲು ಒಪ್ಪಲೇ ಬೇಕಾಯಿತು. ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 254 ರನ್ಗಳಿಸಲಷ್ಟೇ ಶಕ್ತವಾಯಿತು.
1 ರನ್ ಆಗುವಷ್ಟರಲ್ಲಿ ಶಿಖರ್ ಧವನ್ ವಿಕೆಟ್ ಕಳೆದುಕೊಂಡ ಭಾರತ 4 ರನ್ಗಳ ಒಳಗೆ 3 ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಿಖರ್ ಧವನ್ 0, ನಾಯಕ ವಿರಾಟ್ ಕೊಹ್ಲಿ 3 ಮತ್ತು ಅಂಬಟಿ ರಾಯುಡು ಶೂನ್ಯಕ್ಕೆ ಔಟಾದರು.
ಸಂಕಷ್ಟಕ್ಕೆ ಸಿಲುಕಿದ ವೇಳೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಧೋನಿ ಅವರು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರೂ ಗೆಲ್ಲುವುದು ಅಸಾಧ್ಯವಾಯಿತು.
ರೊಹೀತ್ ಶರ್ಮಾ 133 ರನ್ಗಳಿ ಔಟಾದರು. 129 ಎಸೆತಗಳನ್ನು ಎದುರಿಸಿದ್ದ ಅವರು 10 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಸಿಡಿಸಿದ್ದರು.
ನೆಲಕಚ್ಚಿ ಆಟವಾಡಿದ ಧೋನಿ 96 ಎಸೆತಗಳಿಂದ 51 ರನ್ಗಳಿಸಿದ್ದ ವೇಳೆ ಔಟಾಗಿ ನಿರಾಸೆಗೊಳಗಾದರು. ದಿನೇಶ್ ಕಾರ್ತಿಕ್ 12, ರವೀಂದ್ರ ಜಡೇಜಾ 8 , ಭುವನೇಶ್ವರ್ ಕುಮಾರ್ 29 ರನ್ ಅಜೇಯ, ಕುಲದೀಪ್ ಯಾದವ್ 3 ಮತ್ತು ಮೊಹಮದ್ ಶಮಿ 1 ರನ್ಗಳಿಸಿ ಔಟಾದರು.
ಆಸೀಸ್ ಪರ ಜೇ ರಿಚರ್ಡ್ಸನ್ 4 ವಿಕೆಟ್ ಕಿತ್ತು ಗಮನ ಸೆಳೆದರು. ಜಾಸನ್ ಬೆಹೆಂಡಾಫ್ì ಮತ್ತು ಮಾರ್ಕಸ್ ಸ್ಟೊಯ್ನಿಸ್ ಅವರು ತಲಾ 2 ವಿಕೆಟ್ ಪಡೆದರು. ಪೀಟರ್ ಸಿಡ್ಲ್ 1 ವಿಕೆಟ್ ಪಡೆದರು.
ಆಸೀಸ್ ಭರ್ಜರಿ ಬ್ಯಾಟಿಂಗ್
8 ರನ್ಗೆ ಅರೋನ್ ಫಿಂಚ್ ಅವರ ವಿಕೆಟ್ ಕಳೆದುಕೊಂಡು ಆರಂಭಿಕ ಅಘಾತಕ್ಕೆ ಸಿಲುಕಿದ ಆಸೀಸ್ ನಂತರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಅಲೆಕ್ಸ್ ಕ್ರೆ 24 , ಉಸ್ಮಾನ್ ಖ್ವಾಜಾ 59, ಶಾನ್ ಮಾರ್ಶ್ 54, ಪೀಟರ್ ಹ್ಯಾಂಡ್ಸ್ಕೂಂಬ್ 73, ಮಾರ್ಕಸ್ ಸ್ಟೊಯ್ನಿಸ್ ಅಜೇಯ 47 ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಔಟಾಗದೆ 11 ರನ್ ಗಳಿಸಿದರು.
ಭಾರತದ ಬೌಲರ್ಗಳ ಪರ ಭುವನೇಶ್ವರ್ ಕುಮಾರ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ