ಪ್ರಥಮ ಏಕದಿನ : ಆಸೀಸ್ ಬಿಗು ದಾಳಿ ; ಭಾರತ 255ಕ್ಕೆ ಆಲೌಟ್

ಶಿಖರ್ ಧವನ್ ; ಕೆ.ಎಲ್.ರಾಹುಲ್, ಪಂತ್, ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್

Team Udayavani, Jan 14, 2020, 5:23 PM IST

Indo-Ausis-730

ಮುಂಬಯಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ವೇಗಿಗಳ ಮುಂದೆ ಭಾರತದ ಬ್ಯಾಟಿಂಗ್ ಪಡೆ ಕಂಗಾಲಾಗಿದೆ. ಶಿಖರ್ ಧವನ್ (74), ಕೆ.ಎಲ್. ರಾಹುಲ್ (47), ರಿಷಭ್ ಪಂತ್ (28) ಮತ್ತು ರವೀಂದ್ರ ಜಡೇಜಾ (25) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ 49.1 ಓವರುಗಳಲ್ಲಿ 255 ರನ್ ಗಳಿಸಿ ಆಲೌಟಾಗಿದೆ. ಈ ಮೂಲಕ ಆಸೀಸ್ ಗೆಲುವಿಗೆ 256 ರನ್ ಗಳ ಗುರಿ ನಿಗದಿಯಾಗಿದೆ.

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟ ಆಸ್ಟ್ರೇಲಿಯಾ ಕಪ್ತಾನ ಆರೋನ್ ಫಿಂಚ್ ನಿರ್ಧಾರ ಇನ್ನಿಂಗ್ಸ್ ನ ಪ್ರಾರಂಭದಲ್ಲೇ ಯಶ ಕಂಡಿತು. ರೋಹಿತ್ ಶರ್ಮಾ (10) ಅವರ ವಿಕೆಟ್ ತಂಡದ ಮೊತ್ತ 13 ರನ್ ಗಳಾಗುವಷ್ಟರಲ್ಲಿ ಬಿದ್ದಿತ್ತು. ಆದರೆ ಎರಡನೇ ವಿಕೆಟಿಗೆ ಧವನ್ ಮತ್ತು ರಾಹುಲ್ ಸೇರಿಕೊಂಡು ನಿಧಾನಗತಿಯಲ್ಲಿ ತಂಡದ ಮೊತ್ತವನ್ನು ಏರಿಸುತ್ತಾ ಹೋದರು. ಈ ಸಂದರ್ಭದಲ್ಲಿ ಮೊತ್ತ 134 ಆಗಿದ್ದಾಗ 61 ಎಸೆತೆಗಳಲ್ಲಿ 47 ರನ್ ಮಾಡಿದ್ದ ರಾಹುಲ್ ಔಟಾದರು. ಈ ಜೋಡಿ 121 ರನ್ ಗಳ ಜೊತೆಯಾಟವನ್ನು ನೀಡಿದರು.

ಆದರೆ ರಾಹುಲ್ ಔಟಾದ ಬೆನ್ನಲ್ಲೇ 74 ರನ್ ಮಾಡಿ ಉತ್ತುಮವಾಗಿ ಆಡುತ್ತಿದ್ದ ಶಿಖರ್ ಧವನ್ ಔಟಾದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ (16), ಮತ್ತು ಶ್ರೇಯಸ್ ಅಯ್ಯರ್ (04) ಮಿಂಚಲು ವಿಫಲರಾದರು.

ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (28) ಹಾಗೂ ರವೀಂದ್ರ ಜಡೇಜಾ (25) ಅವರು 49 ರನ್ ಗಳ ಅಮೂಲ್ಯ ಜೊತೆಯಾಟ ಕಟ್ಟಿದರು. ಇದರಿಂದಾಗಿ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು.

ಇಂದು ಭಾರತದ ಬ್ಯಾಟಿಂಗ್ ಸರದಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ವಿಶೇಷವಾಗಿತ್ತು. ಬ್ಯಾಟಿಂಗ್ ಸರದಿಯಲ್ಲಿ ಮೂವರು ಆರಂಭಿಕ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬರುತ್ತಿದ್ದ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬಂದರು ಮತ್ತು ಶ್ರೇಯಸ್ ಅಯ್ಯರ್ ಐದನೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದರು.

ಆದರೆ ಕೊಹ್ಲಿಯ ಈ ಪ್ರಯೋಗ ಆಸೀಸ್ ಬೌಲರ್ ಗಳ ಎದುರು ಅಷ್ಟೇನೂ ಫಲ ನೀಡಲಿಲ್ಲ. ಧವನ್ (74) ಮತ್ತು ರಾಹುಲ್ (47) ಹೊರತುಪಡಿಸಿ ಉಳಿದ ಮೂವರ ಬ್ಯಾಟಿನಿಂದಲೂ ರನ್ ಹರಿದು ಬರಲೇ ಇಲ್ಲ. ರೋಹಿತ್ ಶರ್ಮಾ(10), ಕೊಹ್ಲಿ (16), ಮತ್ತು ಶ್ರೇಯಸ್ ಅಯ್ಯರ್ (04) ಅವರ ಒಟ್ಟಾರೆ ಕೊಡುಗೆ 30 ರನ್ ಗಳು ಮಾತ್ರ.

ಇನ್ನಿಂಗ್ಸ್ ನ ಪ್ರಾರಂಭದಿಂದಲೇ ಬಿಗು ದಾಳಿ ಸಂಘಟಿಸಿದ ಆಸೀಸ್ ತ್ರಿವಳಿ ವೇಗಿಗಳು ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ನಿಡಿಯಲು ಅವಕಾಶವನ್ನೇ ನೀಡಲಿಲ್ಲ. ಅನುಭವಿ ವೇಗಿ ಮಿಶೆಲ್ ಸ್ಟಾರ್ಕ್ 03 ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಮತ್ತು ಕೇನ್ ರಿಚರ್ಡ್ಸನ್ ತಲಾ 02 ವಿಕೆಟ್ ಪಡೆದರೆ, ಸ್ಪಿನ್ನರ್ ಗಳಾದ ಆ್ಯಡಂ ಝಂಪ ಮತ್ತು ಆಶ್ಟನ್ ಆ್ಯಗರ್ ತಲಾ 01 ವಿಕೆಟ್ ಪಡೆದರು.

ಟಾಪ್ ನ್ಯೂಸ್

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.