ಅಂಪಾಯರ್ ದಾರ್ಗೆ ಕಿವೀಸ್ ಕ್ರಿಕೆಟಿಗ ಢಿಕ್ಕಿ
Team Udayavani, Dec 14, 2019, 11:18 PM IST
ವಿಶ್ವದಾಖಲೆಯ ಅಂಪಾಯರ್ ಪಾಕಿಸ್ಥಾನದ ಅಲೀಂ ದಾರ್ ಪರ್ತ್ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ನ್ಯೂಜಿಲ್ಯಾಂಡ್ ಕ್ರಿಕೆಟಿಗನಿಂದ ಢಿಕ್ಕಿಯಾಗಿ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಸಂಭವಿಸಿದೆ.
ಟಿಮ್ ಸೌಥಿ ಆಸೀಸ್ ಬ್ಯಾಟ್ಸ್ಮನ್ ಲಬುಶೇನ್ಗೆ ಬೌಲಿಂಗ್ ಮಾಡುತ್ತಿರುವಾಗ ಈ ಘಟನೆ ಸಂಭವಿಸಿತು. ಲಬುಶೇನ್ ಚೆಂಡನ್ನು ಬೌಲರ್ನತ್ತ ಬಡಿದಟ್ಟಿದಾಗ ಸೌಥಿ ಇದನ್ನು ತಡೆದರು. ಆಗ ಬರ್ನ್ಸ್ ಕ್ರೀಸ್ ಬಿಟ್ಟಿದ್ದರಿಂದ ಸೌಥಿ ರನೌಟ್ಗೆ ಯತ್ನಿಸಿದರು. ಆಗ ಚೆಂಡನ್ನು ಹಿಡಿಯಲು ಓಡಿ ಬರುತ್ತಿದ್ದ ಮಿಚೆಲ್ ಸ್ಯಾಂಟ್ನರ್ ಅಂಪಾಯರ್ ಅಲೀಮ್ ದಾರ್ಗೆ ಢಿಕ್ಕಿ ಹೊಡೆದರು. ನಿಯಂತ್ರಣ ತಪ್ಪಿದ ದಾರ್ ಮಂಡಿಯೂರಿ ಬಿದ್ದರು. ನೋವಿನ ತೀವ್ರತೆಯಿಂದ ಅವರಿಗೆ ಏಳಲಾಗಲಿಲ್ಲ. ಕೂಡಲೇ ನ್ಯೂಜಿಲ್ಯಾಂಡ್ ತಂಡದ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದರು.
ದಾರ್ ಚೇತರಿಸಿಕೊಂಡು ಕರ್ತವ್ಯಕ್ಕೆ ಮುಂದಾದಾಗ ವೀಕ್ಷಕರೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದರು. ರವಿವಾರ ಬಹುಶಃ ದಾರ್ ಬದಲು ತೃತೀಯ ಅಂಪಾಯರ್ ಮರೈಸ್ ಎರಾಸ್ಮಸ್ ಅಂಗಳಕ್ಕಿಳಿಯಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್