ಮಾಲ್ಡೀವ್ಸ್ ತಲುಪಿದ ಆಸ್ಟ್ರೇಲಿಯ ಕ್ರಿಕೆಟಿಗರು
Team Udayavani, May 6, 2021, 6:34 AM IST
ಹೊಸದಿಲ್ಲಿ: ಕೋವಿಡ್ ಬಲೆಗೆ ಸಿಲುಕಿದ ಐಪಿಎಲ್ ಪಂದ್ಯಾವಳಿಯನ್ನು ಅರ್ಧದಲ್ಲೇ ನಿಲ್ಲಿಸುವ ಮೂಲಕ ಬಿಸಿಸಿಐ ತನ್ನ ತಲೆಹೊರೆಯನ್ನು ಇಳಿಸಿಕೊಂಡಿದೆ. ಜತೆಗೆ ವಿದೇಶಿ ಕ್ರಿಕೆಟಿಗರ ಪ್ರಯಾಣಕ್ಕೆ ಸೂಕ್ತ ವ್ಯವಸ್ಥೆ ರೂಪಿಸುವ ಯೋಜನೆಯಲ್ಲೂ ಯಶಸ್ಸು ಕಂಡಿದೆ.
ಆಸ್ಟ್ರೇಲಿಯ ಕ್ರಿಕೆಟಿಗರನ್ನು ಸುರಕ್ಷಿತ ವಾಗಿ ತಾಯ್ನಾಡಿಗೆ ಕಳುಹಿಸಿಕೊಡುವುದು ಬಿಸಿಸಿಐ ಮುಂದಿರುವ ದೊಡ್ಡ ಸಮಸ್ಯೆ ಯಾಗಿತ್ತು. ಆದರೆ ಬುಧವಾರವೇ ವಿಶೇಷ ವಿಮಾನದ ಮೂಲಕ ಆಸೀಸ್ ತಂಡವನ್ನು ಮಾಲ್ಡೀವ್ಸ್ಗೆ ಕಳುಹಿಸಲಾಗಿದೆ. ಇಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಿ ಮೇ 15ರ ಬಳಿಕ ಅಲ್ಲಿಂದಲೇ ಆಸ್ಟ್ರೇಲಿಯಕ್ಕೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಮೇ 15ರ ತನಕ ಭಾರತದ ವಿಮಾನಗಳಿಗೆ ಆಸ್ಟ್ರೇಲಿಯ ನಿರ್ಬಂಧ ವಿಧಿಸಿದೆ.
38 ಸದಸ್ಯರ ದೊಡ್ಡ ತಂಡ :
ಐಪಿಎಲ್ನಲ್ಲಿ ಆಸ್ಟ್ರೇಲಿಯದ ಬಹು ದೊಡ್ಡ ತಂಡವೇ ಪಾಲ್ಗೊಂಡಿತ್ತು. ಆಟಗಾರರು, ತರಬೇತುದಾರರು, ಅಂಪಾ ಯರ್, ಮಾಧ್ಯಮ ಸಿಬಂದಿ ಸೇರಿ 38 ಜನರಿದ್ದಾರೆ. ಇವರಲ್ಲಿ ಮೈಕಲ್ ಸ್ಲೇಟರ್ ಮೊದಲೇ ಮಾಲ್ಡೀವ್ಸ್ ತಲುಪಿದ್ದರು. ಕೊರೊನಾ ಸೋಂಕಿತ ಚೆನ್ನೈ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಮಾತ್ರ ಭಾರತದಲ್ಲೇ ಉಳಿದಿದ್ದಾರೆ.
ಬಿಸಿಸಿಐನ ಈ ವ್ಯವಸ್ಥೆಗೆ ಪ್ರತಿಕ್ರಿಯಿ ಸಿರುವ ಕ್ರಿಕೆಟ್ ಆಸ್ಟ್ರೇಲಿಯ, “ವಿಶೇಷ ವಿಮಾನದ ಮೂಲಕ ಆಸ್ಟ್ರೇಲಿಯ ಆಟಗಾರರನ್ನು ಮಾಲ್ಡೀವ್ಸ್ಗೆ ಕಳುಹಿಸಿದ್ದು ಉತ್ತಮ ಬೆಳವಣಿಗೆ. ಬಳಿಕ ಅಲ್ಲಿಂದ ನಮ್ಮ ಆಟಗಾರರನ್ನು ತವರಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡೀತೆಂಬ ನಿರೀಕ್ಷೆ ಯಲ್ಲಿದ್ದೇವೆ’ ಎಂದಿದೆ.
ನ್ಯೂಜಿಲ್ಯಾಂಡ್ ಕ್ರಿಕೆಟಿಗರೆಲ್ಲ.ಹೊಟೇಲ್ ಐಸೊಲೇಶನ್ನಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತಿತರ ಸದಸ್ಯರು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲು ಭಾರತದಿಂದಲೇ ಲಂಡನ್ಗೆ ತೆರಳುವುದು ನಿಗದಿಯಾಗಿದೆ.
ಇಂಗ್ಲೆಂಡ್ ಕ್ರಿಕೆಟಿಗರು ಲಂಡನ್ಗೆ :
ಹೊಸದಿಲ್ಲಿ: ಐಪಿಎಲ್ನಲ್ಲಿದ್ದ ಇಂಗ್ಲೆಂಡ್ ಕ್ರಿಕೆಟಿಗರ ಪ್ರಯಾಣಕ್ಕೆ ಯಾವುದೇ ತೊಂದರೆ ಆಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ಮಂಗಳ ವಾರ ರಾತ್ರಿಯೇ ಅಹ್ಮದಾಬಾದ್ನಿಂದ ಹೊಸದಿಲ್ಲಿಗೆ ಪ್ರಯಾಣಿಸಿದ್ದಾರೆ. ಅಲ್ಲಿ ರುವ ತಮ್ಮ ದೇಶದ ಕ್ರಿಕೆಟಿಗರೊಂದಿಗೆ ತವರಿಗೆ ವಿಮಾನವನ್ನು ಏರಿ ಲಂಡನ್ಗೆ ಬಂದಿಳಿದಿದ್ದಾರೆ.
ಇವರೆಂದರೆ ಜಾನಿ ಬೇರ್ಸ್ಟೊ, ಜಾಸ್ ಬಟ್ಲರ್, ಸ್ಯಾಮ್ ಬಿಲ್ಲಿಂಗ್ಸ್, ಕ್ರಿಸ್ ವೋಕ್ಸ್, ಮೊಯಿನ್ ಅಲಿ, ಜಾಸನ್ ರಾಯ್ ಮತ್ತು ಕರನ್ ಬ್ರದರ್. ಲಂಡನ್ ತಲುಪಿದ ಬಳಿಕ ಇವರೆಲ್ಲ ಸರಕಾರ ಸೂಚಿಸಿದ ಹೊಟೇಲ್ಗಳಲ್ಲಿ ಕಠಿನ ಕ್ವಾರಂಟೈನ್ಗೆ
ಒಳಗಾಗಬೇಕಿದೆ. ಉಳಿದ ಕ್ರಿಕೆಟಿಗರಾದ ಇಯಾನ್ ಮಾರ್ಗನ್, ಡೇವಿಡ್ ಮಲಾನ್ ಮತ್ತು ಕ್ರಿಸ್ ಜೋರ್ಡನ್ ಮುಂದಿನ 48 ಗಂಟೆಗಳಲ್ಲಿ ಲಂಡನ್ಗೆ ಪ್ರಯಾಣಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!