ಆಸ್ಟ್ರೇಲಿಯಾ ಬ್ಯಾಡ್ಮಿಂಟನ್: ಭಾರತದ ನಾಲ್ವರು ಕ್ವಾ.ಫೈನಲ್ಗೆ
Team Udayavani, Jun 23, 2017, 10:43 AM IST
ಸಿಡ್ನಿ: ಆಸ್ಟ್ರೇಲಿಯಾ ಬ್ಯಾಡ್ಮಿಂಟನ್ ಕೂಟ ದಲ್ಲಿ ಭಾರತ ಗೆಲುವಿನ ಅಭಿಯಾನ ಮುಂದುವರಿಸಿದೆ. ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕೆ.ಶ್ರೀಕಾಂತ್, ಸಾಯಿ ಪ್ರಣೀತ್ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೈನಾ ನೆಹ್ವಾಲ್ 21-15, 20-22, 21-14 ರಿಂದ ಮಲೇಷ್ಯಾದ ಸೋನಿಯ ಚೋಹ ವಿರುದ್ಧ ಹೋರಾಟದ ಜಯ ಸಾಧಿಸಿದರು. 1ನೇ ಗೇಮ್ ಅನ್ನು ಸುಲಭವಾಗಿ ಗೆದ್ದ ಭಾರತೀಯ ಆಟಗಾರ್ತಿಗೆ 2ನೇ ಗೇಮ್ನಲ್ಲಿ ಮಲೇಷ್ಯಾ ಆಟಗಾರ್ತಿ ತಿರುಗೇಟು ನೀಡಿದ್ದರು.
ಜಿದ್ದಾಜಿದ್ದಿನಿಂದ ಕೂಡಿದ 2ನೇ ಗೇಮ್ನಲ್ಲಿ ಸೈನಾ ಅಂತಿಮ ಕ್ಷಣದಲ್ಲಿ ಕಳೆದುಕೊಂಡರು. ಹೀಗಾಗಿ ಪಂದ್ಯ ಮೂರನೇ ಗೇಮ್ಗೆ ಹೋಯಿತು. ಈ ಹಂತದಲ್ಲಿ ಚುರುಕಿನ ಪ್ರದರ್ಶನ ನೀಡಿದ ಸೈನಾ 21-14 ರಿಂದ ಗೆದ್ದು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು.
ಮಹಿಳೆಯರ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 21-13, 21-18 ರಿಂದ ಚೀನಾದ ಚೆನ್ ಕ್ಸಿಯಾಕ್ಸಿನ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ. ವಿಶ್ವ ನಂ.5ನೇ ಶ್ರೇಯಾಂಕಿತ ಸಿಂಧು 46 ನಿಮಿಷ ನಡೆದ ಹೋರಾಟದಲ್ಲಿ ನೇರ ಸೆಟ್ನಲ್ಲಿಯೇ ಜಯ ಸಾಧಿಸಿದರು.
ಶ್ರೀಕಾಂತ್, ಪ್ರಣೀತ್ಗೆ ಜಯ: ಇಂಡೋ ನೇಷ್ಯಾ ಓಪನ್ ಪ್ರಶಸ್ತಿ ವಿಜೇತ ಶ್ರೀಕಾಂತ್ 15-21, 21-13, 21-13 ರಿಂದ ವಿಶ್ವ ನಂ.1 ಶ್ರೇಯಾಂಕಿತ ಕೊರಿಯಾದ ಸನ್ ವಾನ್ ಹೂಗೆ ಆಘಾತ ನೀಡಿದರು.
ಇಂಡೋನೇಷ್ಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಕೂಡ ಸನ್ ವಾನ್ ಹೂಗೆ ಶ್ರೀಕಾಂತ್ ಸೋಲುಣಿಸಿದ್ದರು.
ಹೀಗಾಗಿ ಶ್ರೀಕಾಂತ್ಗೆ ವಿಶ್ವ ನಂ.1 ಶ್ರೇಯಾಂಕಿತ ಆಟಗಾರನ ವಿರುದ್ಧ 2ನೇ ಜಯವಾಗಿದೆ. 57 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಮೊದಲ ಗೇಮ್ ಕಳೆದುಕೊಂಡ ಭಾರತೀಯ ಆಟಗಾರ 2 ಮತ್ತು 3ನೇ ಗೇಮ್ ಗೆದ್ದು ಕ್ವಾರ್ಟರ್ಗೆ ಪ್ರವೇಶಿಸಿದರು. ಜಿದ್ದಿಜಿದ್ದಿನಿಂದ ನಡೆದ ಹೋರಾಟದಲ್ಲಿ ಶ್ರೀಕಾಂತ್ ಅದ್ಭುತ ಹೋರಾಟ ಪ್ರದರ್ಶಿಸಿದರು.
ಪುರುಷ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಭಾರತೀಯ ಆಟಗಾರ ಸಾಯಿ ಪ್ರಣೀತ್ 21-15, 18-21,21-13 ರಿಂದ ಚೀನಾದ ಹುವಾಂಗ್ ಯುಕ್ಸಿಯಾಂಗ್ ವಿರುದ್ಧ ಹೋರಾಟದ ಜಯ ದಾಖಲಿಸಿದರು. ಮೊದಲ ಗೇಮ್ ಗೆದ್ದ ಪ್ರಣೀತ್ಗೆ ಚೀನಿ ಆಟಗಾರ 2ನೇ ಗೇಮ್ನಲ್ಲಿ ತಿರುಗೇಟು ನೀಡಿದ್ದರು. ಆದರೆ ನಿರ್ಣಾಯಕವಾಗಿದ್ದ 3ನೇ ಗೇಮ್ ಅನ್ನು ಪ್ರಣೀತ್ ವಶಪಡಿಸಿಕೊಂಡು ಕ್ವಾರ್ಟರ್ಗೆ ಪ್ರವೇಶಿಸಿದರು.
ಕ್ವಾರ್ಟರ್ನಲ್ಲಿಶ್ರೀಕಾಂತ್,
ಪ್ರಣೀತ್ ಹಣಾಹಣಿ
ಆಸ್ಟ್ರೇಲಿಯಾ ಓಪನ್ನ 2ನೇ ಸುತ್ತಿನಲ್ಲಿ ಜಯ ಸಾಧಿಸಿದ ಭಾರತೀಯ ಆಟಗಾರರಾದ ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖೀಯಾಗಲಿದ್ದಾರೆ. ಇಬ್ಬರು ಇತ್ತೀಚೆಗೆ ಭರ್ಜರಿ ಫಾಮ್ನಲ್ಲಿರುವುದರಿಂದ ತೀವ್ರ ಹೋರಾಟವನ್ನು ನಿರೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ