ಭಾರತಕ್ಕೆ “ಶೂಟೌಟ್’ಆಘಾತ; ಕೊರಿಯಾ ಕಿಂಗ್
Team Udayavani, Mar 31, 2019, 1:32 PM IST
ಇಪೋ (ಮಲೇಶ್ಯ): ಭಾರತ ಮತ್ತೂಮ್ಮೆ ಹಾಕಿ ಸುಲ್ತಾನ್ ಆಗಿ ಮೆರೆಯುವ ಅವಕಾಶವನ್ನು ಕಳೆದುಕೊಂಡಿದೆ. “ಸುಲ್ತಾನ್ ಅಜ್ಲಾನ್ ಶಾ’ ಹಾಕಿ ಕೂಟದ ಲೀಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಮನ್ಪ್ರೀತ್ ಸಿಂಗ್ ಪಡೆ ಫೈನಲ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಶೂಟೌಟ್ನಲ್ಲಿ ಎಡವಿ ಪ್ರಶಸ್ತಿ ವಂಚಿತವಾಯಿತು.
ಶನಿವಾರ ನಡೆದ ಪ್ರಶಸ್ತಿ ಕಾಳಗದ ನಿಗದಿತ ಅವಧಿಯನ್ನು ಇತ್ತಂಡಗಳು 1-1 ಗೋಲುಗಳಿಂದ ಸಮಬಲದಿಂದ ಮುಗಿಸಿದವು. ಆದರೆ ಶೂಟೌಟ್ನಲ್ಲಿ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ದಕ್ಷಿಣ ಕೊರಿಯಾ 4-2 ಗೋಲುಗಳಿಂದ ಭಾರತವನ್ನು ಮಣಿಸಿ ಟ್ರೋಫಿಯನ್ನೆತ್ತಿತು. 5 ಬಾರಿಯ ಚಾಂಪಿಯನ್ ಭಾರತ 2010ರಲ್ಲಿ ಕೊನೆಯ ಸಲ ಈ ಕೂಟದ ಚಾಂಪಿಯನ್ ಆಗಿ ಮೂಡಿಬಂದಿತ್ತು. ವಿಶೇಷವೆಂದರೆ, ಅಂದು ದಕ್ಷಿಣ ಕೊರಿಯಾ ವಿರುದ್ಧ ಜಂಟಿಯಾಗಿ ಪ್ರಶಸ್ತಿಯನ್ನೆತ್ತಿತ್ತು.
ನೆಚ್ಚಿನ ತಂಡವಾಗಿದ್ದ ಭಾರತ
ವಿಶ್ವ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನದೊಂದಿಗೆ ಎಲ್ಲ ತಂಡಗಳಿಗಿಂತಲೂ ಮುಂದಿದ್ದ ಭಾರತ ಈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ದಕ್ಷಿಣ ಕೊರಿಯಾ 17ನೇ ರ್ಯಾಂಕಿಂಗ್ನ ತಂಡವಾಗಿತ್ತು. ಆದರೆ ಲೀಗ್ನಲ್ಲಿ ಇತ್ತಂಡಗಳು 1-1 ಅಂತರದಿಂದ ಡ್ರಾ ಸಾಧಿಸಿದ್ದವು. ಆಗಲೇ ಭಾರತ ಹೆಚ್ಚು ಎಚ್ಚರಿಕೆಯಿಂದ ಇರಬೇಕಿತ್ತು.
ಪಂದ್ಯದ 9ನೇ ನಿಮಿಷದಲ್ಲೇ ಸಿಮ್ರನ್ಜಿàತ್ ಸಿಂಗ್ ಆಕರ್ಷಕ ಫೀಲ್ಡ್ ಸ್ಟ್ರೈಕ್ ಮೂಲಕ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ಕೊಡಿಸಿದರು. ಕೊರಿಯಾ ಸಮಬಲ ಸಾಧಿಸುವಾಗ 46 ನಿಮಿಷಗಳ ಆಟ ಮುಗಿದಿತ್ತು. 47ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಇದಕ್ಕೆ ಭಾರತ “ವೀಡಿಯೋ ರೆಫರಲ್’ ಬಯಸಿದರೂ ತೀರ್ಪು ಬದಲಾಗಲಿಲ್ಲ. ಜಾನ್ ಜಾಂಗ್ ಹ್ಯುನ್ ಯಾವ ತಪ್ಪು ಕೂಡ ಮಾಡಲಿಲ್ಲ.
ಪಂದ್ಯದ ಮುಕ್ತಾಯಕ್ಕೆ 2 ನಿಮಿಷ ಉಳಿದಿರು ವಾಗ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಒಂದು ಲಭಿಸಿತಾದರೂ ಯಶಸ್ಸು ಸಿಗದೇ ಹೋಯಿತು. ಪಂದ್ಯ ಶೂಟೌಟ್ನತ್ತ ಮುಖ ಮಾಡಿತು.
ಶೂಟೌಟ್ನಲ್ಲಿ ಎರಡೇ ಗೋಲು
ಶೂಟೌಟ್ನಲ್ಲಿ ಭಾರತಕ್ಕೆ ಗಳಿಸಲು ಸಾಧ್ಯವಾದದ್ದು 2 ಗೋಲು ಮಾತ್ರ. ಮೊದಲ, 4ನೇ ಹಾಗೂ 5ನೇ ಅವಕಾಶವನ್ನು ಭಾರತ ಮಿಸ್ ಮಾಡಿಕೊಂಡಿತು. ಮನ್ದೀಪ್ ಸಿಂಗ್, ಸುಮಿತ್ ಕುಮಾರ್ ಜೂನಿಯರ್ ಮತ್ತು ಸುಮಿತ್ ವಿಫಲರಾದರು. ಯಶಸ್ಸು ಕಂಡವರು ಅನುಭವಿ ಬೀರೇಂದ್ರ ಲಾಕ್ರಾ ಮತ್ತು ವರುಣ್ ಮಾತ್ರ. ಕೆನಡಾವನ್ನು 4-2 ಗೋಲುಗಳಿಂದ ಪರಾಭವಗೊಳಿಸಿದ ಆತಿಥೇಯ ಮಲೇಶ್ಯ ತೃತೀಯ ಸ್ಥಾನಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು