ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ದ್ವಿತೀಯ ಸುತ್ತಿಗೆ ಸಿಂಧು, ಸೈನಾ, ಶ್ರೀಕಾಂತ್
Team Udayavani, Apr 11, 2019, 6:30 AM IST
ಸಿಂಗಾಪುರ: ಭಾರತದ ಬ್ಯಾಡ್ಮಿಂಟನ್ ಸ್ಪಾರ್ಗಳಾದ ಪಿ. ವಿ. ಸಿಂಧು ಮತ್ತು ಸೈನಾ ನೆಹ್ವಾಲ್, ಪಾರುಪಳ್ಳಿ ಕಶ್ಯಪ್, ಕೆ. ಶ್ರೀಕಾಂತ್ “ಸಿಂಗಾಪುರ್ ಓಪನ್’ ಬ್ಯಾಡ್ಮಿಂಟನ್ ಕೂಟದ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಸಿಂಧು ಇಂಡೋನೇಶ್ಯದ ಲೈನಿ ಅಲೆಸ್ಸಾಂಡ್ರಾ ಮೈಕಿ ಅವರನ್ನು ಕೇವಲ 27 ನಿಮಿಷಗಳಲ್ಲಿ 21-9, 21-7 ಗೇಮ್ಗಳಿಂದ ಸೋಲಿಸಿದರು. ಮುಂದಿನ ಪಂದ್ಯದಲ್ಲಿ ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚೆ#ಲ್ಟ್ ವಿರುದ್ಧ ಆಡಲಿದ್ದಾರೆ.
ಶ್ರೀಕಾಂತ್ಗೆ ಜಯ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ 4 ಆಟಗಾರರು ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು. ಆದರೆ ಬಿ.ಸಾಯಿ ಪ್ರಣೀತ್ ಮೊದಲ ಪಂದ್ಯದಲ್ಲಿಯೇ ಸೋತು ನಿರಾಸೆ ಮೂಡಿಸಿದರು.
ಪುರುಷರ ಮೊದಲ ಪಂದ್ಯದಲ್ಲಿ ಸಮೀರ್ ವರ್ಮ ಥಾಯ್ಲೆಂಡ್ನ ಸಪ್ಪನಿಸ್ ಅವಿಂಗ್ಸನನ್ ಅವರನ್ನು 21-14, 21-6 ಗೇಮ್ಗಳಿಂದ ಸೋಲಿಸಿದರೆ, ಪ್ರಣಯ್ ಎಚ್. ಎಸ್ ಫ್ರಾನ್ಸ್ ಬ್ರೈಸ್ ಲಿವೆರ್ಡೆಸ್ ವಿರುದ್ಧ 11-21, 21-16, 21-18 ಗೇಮ್ಗಳಿಂದ ಜಯಿಸಿದರು. ಅನಂತರ ನಡೆದ ಪಂದ್ಯದಲ್ಲಿ ಸಾಯಿ ಪ್ರಣೀತ್ ಬಿ. ವಿಶ್ವದ ನಂ.ವನ್ ಆಟಗಾರ ಜಪಾನಿನ ಕೆಂಟೊ ಮೊಮೊಟ ಅವರ ವಿರುದ್ಧ 21-19, 14-21, 20-22 ಗೇಮ್ಗಳಿಂದ ಪರಾಭವಗೊಂಡರು.
ಅರ್ಹತಾ ಸುತ್ತಿನಲ್ಲಿ ಗೆಲುವು ದಾಖಲಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಪಾರುಪಳ್ಳಿ ಕಶ್ಯಪ್ ಡೆನ್ಮಾರ್ಕ್ನ ರಸ್ಮಸ್ ಜಮೆR ಅವರನ್ನು 21-19, 21-14 ಗೇಮ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ಮತ್ತೋರ್ವ ಯಶಸ್ವಿ ಆಟಗಾರ ಕೆ. ಶ್ರೀಕಾಂತ್ ಥಾಯ್ಲೆಂಡ್ನ ಸಿಟ್ಟಿಕಾನ್ ತಮ್ಮಸಿನ್ ಅವರನ್ನು 21-17, 21-18 ಗೇಮ್ಗಳಿಂದ ಸೋಲಿಸಿದರು.
ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ-ಬಿ ಸುಮೀತ್ ರೆಡ್ಡಿ ಜೋಡಿ ಅತಿಥೇಯ ನಾಡಿನ ಡ್ಯಾನಿ ಬಾವಾ ಕ್ರಿಸ್ನಾಂತಾ-ಕಿನ್ ಹೆನ್ ಲೊಗ್ ಅವರ ವಿರುದ್ಧ 13-21, 17-21ಗಳಿಂದ ಮುಗ್ಗರಿಸಿದರು. ಮಿಕ್ಸೆಡ್ ಡಬಲ್ಸ್ನಲ್ಲಿ ಸೌರಭ್ ಶರ್ಮ- ಅನೌಷ್ಕಾ ಪಾರಿಕ್ ಮೊದಲ ಪಂದ್ಯದಲ್ಲೇ 3ನೇ ಶ್ರೇಯಾಂಕದ ಥಾಯ್ಲೆಂಡ್ ಜೋಡಿ ವಿರುದ್ಧ 12-21, 12-21 ಗೇಮ್ಗಳಿಂದ ಸೋತರು.
ಇನ್ನೊಂದು ಪಂದ್ಯದಲ್ಲಿ ಪ್ರಣವ್ ಜೆರ್ರಿ ಜೋಪ್ರಾ- ಎನ್. ಸಿಕ್ಕಿ ರೆಡ್ಡಿ ಜೋಡಿ ಭಾರತದವರೇ ಆದ ಅರ್ಜುನ್ ಎಂ. ಆರ್-ಕೆ. ಮನೀಷಾ ಜೋಡಿಯನ್ನು 21-18, 21-7 ಗೇಮ್ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.
ಸೈನಾಗೂ ಮುನ್ನಡೆ
ಇನ್ನೊಂದು ಪಂದ್ಯದಲ್ಲಿ 6ನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್ ಇಂಡೋನೇಶ್ಯದ ಯೂಲಿಯಾ ಯೋಸೆಫಿನ್ ಸುಸಾಂಟೊ ವಿರುದ್ಧ 21-16, 21-11 ಗೇಮ್ಗಳಿಂದ ಗೆದ್ದು ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಅವರ ಮುಂದಿನ ಎದುರಾಳಿ ಥಾಯ್ಲೆಂಡ್ ಪೌರ್ನಪೊವಿ ಚುಚುವಾಂಗ್. ಚುಚುವಾಂಗ್ ಭಾರತದ ಮುಗಾœ ಅಗ್ರೆ ಅವರನ್ನು 21-6, 21-8 ನೇರ ಗೇಮ್ಗಳಿಂದ ಸೋಲಿಸಿ ಮುನ್ನಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ