ಭಜರಂಗ್, ರವಿ ದಹಿಯಾ ಕಂಚಿನ ಸ್ಪರ್ಧೆ
ವಿಶ್ವ ಕುಸ್ತಿ ಚಾಂಪಿಯನ್ಶಿಪ್
Team Udayavani, Sep 20, 2019, 5:36 AM IST
ನುರ್ ಸುಲ್ತಾನ್ (ಕಜಾಕ್ಸ್ಥಾನ್), ಸೆ. 19: ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ ಮತ್ತು ಅಚ್ಚರಿಯ ಫಲಿತಾಂಶ ದಾಖಲಿಸಿದ ರವಿ ದಹಿಯಾ ವಿಶ್ವ ಚಾಂಪಿಯನ್ಶಿಪ್ ಸೆಮಿಫೈನಲ್ ತಲುಪಿದ ಸಾಧನೆಯಿಂದ ಮೊದಲ ಸಲ ಒಲಿಂಪಿಕ್ಗೆ ಪ್ರವೇಶ ಪಡೆದಿದ್ದಾರೆ. ಆದರೆ ಸೆಮಿಫೈನಲ್ನಲ್ಲಿ ಇಬ್ಬರೂ ಪರಾಭವಗೊಂಡಿದ್ದು, ಶುಕ್ರವಾರ ಕಂಚಿನ ಪದಕದ ಸ್ಪರ್ಧೆಗೆ ಇಳಿಯಲಿದ್ದಾರೆ.
ಗುರುವಾರ ನಡೆದ 65 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಭಜರಂಗ್ ಪೂನಿಯಾ ಕೊರಿಯಾದ ಜಾಂಗ್ ಚೋಯ್ ಸನ್ ವಿರುದ್ಧ 8-1 ಅಂತರದ ಭರ್ಜರಿ ಜಯ ಸಾಧಿಸಿದರು.
57 ಕೆಜಿ ವಿಭಾಗದಲ್ಲಿ ರವಿ ದಹಿಯಾ 2017ರ ವಿಶ್ವ ಚಾಂಪಿಯನ್, ವಿಶ್ವದ ನಂ.3 ಕುಸ್ತಿಪಟು, ಜಪಾನಿನ ಯುಕಿ ಟಕಹಾಶಿ ವಿರುದ್ಧ 6-1 ಅಂತರದ ನಂಬಲಾಗದ ಗೆಲುವು ದಾಖಲಿಸಿದರು.
ಆದರೆ ಸೆಮಿಫೈನಲ್ನಲ್ಲಿ ಭಜರಂಗ್ ಪೂನಿಯಾ ಆತಿಥೇಯ ದೇಶದ ದೌಲತ್ ನಿಯಾಜ್ಬೆಕೋವ್ ವಿರುದ್ಧ ಹಾಗೂ ರವಿ ದಹಿಯಾ ರಶ್ಯದ ಝವುರ್ ಉಗೇವ್ ವಿರುದ್ಧ ಎಡವಿದರು.
ವಿವಾದಾತ್ಮಕ ಗೆಲುವು
ಭಜರಂಗ್-ದೌಲತ್ ನಡುವಿನ ಸೆಮಿ ಪಂದ್ಯ ವಿವಾದಾತ್ಮಕವಾಗಿ ಮುಗಿಯಿತು. 6 ನಿಮಿಷಗಳ ಈ ಕಾದಾಟ 9-9ರಿಂದ ಸಮನಾಯಿತು. ಆದರೆ ಒಮ್ಮೆಲೇ ಗರಿಷ್ಠ 4 ಅಂಕ ಸಂಪಾದಿಸಿದ ಆತಿಥೇಯ ನಾಡಿನ ರೆಸ್ಲರ್ನನ್ನು ರೆಫ್ರಿ ವಿಜಯಿ ಎಂದು ಘೋಷಿಸಿದ್ದು ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು.
ಸಾಕ್ಷಿಗೆ ಪದಕವಿಲ್ಲ
ವನಿತಾ ವಿಭಾಗದಲ್ಲಿ ರಿಯೋ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲ್ಲಿಕ್ ನೈಜೀರಿಯಾದ ಅಮಿನಾತ್ ಅಡೆನಿಯಿ ವಿರುದ್ಧ ಮೊದಲ ಸುತ್ತಿನಲ್ಲೇ ಎಡವಿದರು. ಬಳಿಕ ನೈಜೀರಿಯನ್ ಸ್ಪರ್ಧಿ ಕ್ವಾರ್ಟರ್ ಫೈನಲ್ನಲ್ಲಿ ಸೋಲುವುದರೊಂದಿಗೆ ಸಾಕ್ಷಿಯ ಪದಕದ ದೂರದ ನಿರೀಕ್ಷೆಯೊಂದು ಕಮರಿ ಹೋಯಿತು.
68 ಕೆಜಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಜಪಾನಿನ ಹಾಲಿ ಒಲಿಂಪಿಕ್ ಚಾಂಪಿಯನ್ ಸಾರಾ ಡೊಶೊ ವಿರುದ್ಧ ಮೊದಲ ಸುತ್ತಿನಲ್ಲೇ 0-2 ಅಂತರದ ಸೋಲನುಭವಿಸಿದರು.
ಬುಧವಾರ ವನಿತಾ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ವಿನೇಶ್ ಪೋಗಟ್ ಮೊದಲಿಗರಾಗಿ ಒಲಿಂಪಿಕ್ ಅರ್ಹತೆ ಸಂಪಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ