ಕಡೆಯ 5 ನಿಮಿಷದಲ್ಲಿ ಸೋತ ಬೆಂಗಳೂರು ಬುಲ್ಸ್‌


Team Udayavani, Sep 24, 2017, 6:55 AM IST

bULLS.jpg

ನವದೆಹಲಿ: ಕೊನೆ 5 ನಿಮಿಷದ ಜಿದ್ದಾಜಿದ್ದಿಯ ಕದನದಲ್ಲಿ ಬೆಂಗಳೂರು ಬುಲ್ಸ್‌ 29-33 ಅಂಕಗಳ ಅಂತರದಿಂದ ಬೆಂಗಾಲ್‌ ವಾರಿಯರ್ಗೆ ಶರಣಾಯಿತು. ಶನಿವಾರ ತ್ಯಾಗರಾಜ್‌ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಆರಂಭದಲ್ಲಿ ನೀರಸ ಆಟ  ಪ್ರದರ್ಶಿಸಿತು. ಆದರೆ ಕೊನೆ 5 ನಿಮಿಷದ ಸೆಣಸಾಟದಲ್ಲಿ ಬುಲ್ಸ್‌ ಗೆಲುವಿನ ಸನಿಹಕ್ಕೆ ಬಂದು ರೋಚಕ ಸೋಲು ಅನುಭವಿಸಿತು. ಇದು ಬೆಂಗಳೂರಿಗೆ ಸತತ 2ನೇ ಸೋಲು.

ಬುಲ್ಸ್‌ ಪರ ಮಿಂಚಿದ್ದು ಕನ್ನಡಿಗ ಹರೀಶ್‌ ನಾಯ್ಕ (11 ರೈಡಿಂಗ್‌ ಅಂಕ). ತಾರಾ ರೈಡರ್‌ ರೋಹಿತ್‌ ಕುಮಾರ್‌ ವಿಫ‌ಲವಾಗಿದ್ದು ಬೆಂಗಳೂರು ಸೋಲಿಗೆ ಪ್ರಮುಖ ಕಾರಣ. ಬುಲ್ಸ್‌ ಕೈಯಿಂದ ಗೆಲುವು ಕಸಿದದ್ದು ಮಣಿಂದರ್‌ ಸಿಂಗ್‌ (9 ರೈಡಿಂಗ್‌ ಅಂಕ). ಸಿಂಗ್‌ ಕೊನೆಯ ಹಂತದಲ್ಲಿ ರೈಡಿಂಗ್‌ ನಡೆಸಿ ಒಟ್ಟು 4 ಅಂಕ ತಂದು ವಾರಿಯರ್ ಗೆಲುವು ಖಚಿತಪಡಿಸಿದರು.

ಗೆಲುವಿನಂಚಲ್ಲಿ ಸೋತ ಬುಲ್ಸ್‌: 2ನೇ ಅವಧಿ ಮುಗಿಯಲು 5 ನಿಮಿಷದ ಆಟ ಬಾಕಿ ಇದ್ದಾಗ ಬೆಂಗಾಲ್‌ ಒಂದು ಸಲ ಆಲೌಟ್‌ಗೂ ಒಳಗಾಯಿತು. ಹೀಗಾಗಿ ಪಂದ್ಯ ಮುಗಿಯಲು ಕೊನೆ 2 ನಿಮಿಷ ಇದ್ದಾಗ ಬೆಂಗಳೂರು 26-28 ಅಂಕ ಗಳಿಸಿ ಕೇವಲ 2 ಅಂಕಗಳ ಹಿನ್ನಡೆ ಅನುಭವಿಸಿತ್ತು. ಈ ಹಂತದಲ್ಲಿ ಮಣಿಂದರ್‌ ಸಿಂಗ್‌ ಒಂದು ಬೋನಸ್‌ ಸಹಿತ 4 ಅಂಕ ತಂದರು. ಹೀಗಾಗಿ ಬೆಂಗಾಲ್‌ 32-27ಕ್ಕೆ ಅಂಕಗಳಿಕೆ ಹೆಚ್ಚಿಸಿಕೊಂಡಿತ್ತು. ಈ ವೇಳೆ ರೈಡಿಂಗ್‌ನಿಂದ ಮತ್ತೆ ಹರೀಶ್‌ 2 ಅಂಕ ತಂದರು. ಮತ್ತೆ ಬುಲ್ಸ್‌ ಗೆಲುವಿನ ಕನಸು ಚಿಗುರಿಸಿದರು. ಆದರೆ ನಾಯಕ ರೋಹಿತ್‌ ಕೊನೆ 1 ನಿಮಿಷ ಇದ್ದಾಗ ರೈಡಿಂಗ್‌ನಲ್ಲಿ ವಿಫ‌ಲವಾಗಿದ್ದರಿಂದ ಬೆಂಗಾಲ್‌ ಜಯಭೇರಿ ಬಾರಿಸಿತು.

ಇದಕ್ಕೂ ಮೊದಲು ಎರಡನೇ ಅವಧಿಯ 15 ನಿಮಿಷದ ಆಟ ಮುಗಿದರೂ ಬೆಂಗಳೂರು ಚೇತರಿಸಿಕೊಂಡಿರಲಿಲ್ಲ. ಅಂಕ ಗಳಿಕೆಯಲ್ಲಿ ಬುಲ್ಸ್‌ 17-26 ಅಂತರದಿಂದ ಹಿನ್ನಡೆ ಕಂಡಿತ್ತು. ಈ ಅವಧಿಯ ಆಟದಲ್ಲಿ ಬುಲ್ಸ್‌ ಪರ ಮಿಂಚಿದ್ದು ಹರೀಶ್‌ ನಾಯ್ಕ (ದಾಳಿಯಲ್ಲಿ 5 ಅಂಕ), ರವೀಂದರ್‌ ಪಾಹಲ್‌ (ರಕ್ಷಣೆಯಲ್ಲಿ 4 ಅಂಕ) ಹಾಗೂ ಮಹೇಂದರ್‌ ಸಿಂಗ್‌ (ದಾಳಿಯಲ್ಲಿ 4 ಅಂಕ). ಆದರೆ ರೋಹಿತ್‌ ಜೊತೆ ಅಜಯ್‌ ಕೂಡ ವಿಫ‌ಲವಾಗಿದ್ದು ಬುಲ್ಸ್‌ಗೆ ದುಬಾರಿಯಾಯಿತು.

ಹಿಂಡಿದ ಬೆಂಗಾಲ್‌: ಮೊದಲ ಅವಧಿಯ ಆಟ ಆರಂಭವಾದ ಎಂಟು ನಿಮಿಷದಲ್ಲಿ ಬೆಂಗಳೂರು ಆಲೌಟಾಯಿತು. ಆಗ ಬುಲ್ಸ್‌ 4-11 ಅಂತರದಿಂದ ಹಿನ್ನಡೆ ಅನುಭವಿಸಿತ್ತು. ಈ ಅವಧಿಯಲ್ಲಿ ಬೆಂಗಳೂರು ತಂಡದ ತಾರಾ ರೈಡರ್‌ ರೋಹಿತ್‌ ಕುಮಾರ್‌ 2 ಬಾರಿ ರೈಡಿಂಗ್‌ನಲ್ಲಿ ವಿಫ‌ಲರಾದರು. ಇದೇ ವೇಳೆ ಸೂಪರ್‌ ಟ್ಯಾಕಲ್‌ನಲ್ಲಿ ಬೆಂಗಾಲ್‌ನ ಖ್ಯಾತ ಆಟಗಾರ ಜಾಂಗ್‌ ಕುನ್‌ ಲೀ ಅವರನ್ನು ಬೀಳಿಸುವ ಮೂಲಕ ಬೆಂಗಳೂರು ತಿರುಗಿ ಬೀಳುವ ಸೂಚನೆ ನೀಡಿತು. ಆದರೆ ದಾಳಿಯಲ್ಲಿ ನಾಯಕ ರೋಹಿತ್‌ ಮತ್ತೆ ವಿಫ‌ಲವಾಗಿ ಬೆಂಗಳೂರು ಆಲೌಟಾಯಿತು. ಒಟ್ಟಾರೆ ಮೊದಲ ಅವಧಿ ಮುಕ್ತಾಯಕ್ಕೆ ಬುಲ್ಸ್‌ ವಿರುದ್ಧ ಬೆಂಗಾಲ್‌ 18-10 ಅಂತರದ ಮುನ್ನಡೆ ಪಡೆದಿತ್ತು.

ರೋಹಿತ್‌ರನ್ನು ಸಮಾಧಾನಿಸಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಬಾಲಿವುಡ್‌ ನಟ ಹಾಗೂ ಬೆಂಗಾಲ್‌ ಫ್ರಾಂಚೈಸಿ ಮಾಲಿಕ ಅಕ್ಷಯ್‌ ಕುಮಾರ್‌ ಬೆಂಗಳೂರು ತಂಡ ಸೋಲು ಕಂಡ ಬಳಿಕ ಬುಲ್ಸ್‌ ನಾಯಕ ರೋಹಿತ್‌ ಕುಮಾರ್‌ ಬಳಿ ತೆರಳಿದರು. ಅವರನ್ನು ಬಿಗಿದಪ್ಪಿ ಸಮಾಧಾನ ಮಾಡಿದರು. ಈ ಹಿಂದೆ ರೋಹಿತ್‌ ಕುಮಾರ್‌ ಜತೆಗೆ ಅಕ್ಷಯ್‌ ಕುಮಾರ್‌ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

– ಹೇಮಂತ್‌ ಸಂಪಾಜೆ
 

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.