ದ್ರಾವಿಡ್ ಸಲಹೆಯನ್ನೇ ತಿರಸ್ಕರಿಸಿದ ಬಿಸಿಸಿಐ
Team Udayavani, May 2, 2018, 6:00 AM IST
ಹೊಸದಿಲ್ಲಿ: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಸಲಹೆಯನ್ನೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿರಸ್ಕರಿಸಿ ಸುದ್ದಿಯಾಗಿದೆ. ಪ್ರಸ್ತುತ ಭಾರತ ಅಂಡರ್-19 ತಂಡದ ಕೋಚ್ ಆಗಿರುವ ದ್ರಾವಿಡ್ ಎನ್ಸಿಎನಲ್ಲಿ ಕ್ರಿಕೆಟಿಗರಿಗೆ ನೀಡುತ್ತಿರುವ ಹಳೆಯ ಮಾದರಿಯ ಕೋಚಿಂಗ್ ಹಾಗೂ ಪರಿಣತರಲ್ಲದ ಕೋಚ್ ತರಬೇತಿಯನ್ನು ಖಂಡಿಸಿದ್ದರು. ಅಷ್ಟೇ ಅಲ್ಲ ಎನ್ಸಿಎ ಹಳೆಯ ಪದ್ಧತಿ ತೆಗೆದು ಸಂಪೂರ್ಣ ಉನ್ನತ ದರ್ಜೆಯ ತರಬೇತಿಗೆ ವ್ಯವಸ್ಥೆ ಮಾಡಬೇಕು ಎಂದು ಬಿಸಿಸಿಐಗೆ ಸಲಹೆ ನೀಡಿದ್ದರು. ಆದರೆ ಇದನ್ನು ಸರಿಪಡಿಸಲು ತಾಂತ್ರಿಕ ಅಡಚಣೆ ಇರುವುದರಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಪ್ರಕಟಿಸಿದೆ.