ಐಪಿಎಲ್‌ನಲ್ಲಿಂದ ಹಣದ ಹೊಳೆ ಹರಿಯುವುದು ಬಿಸಿಸಿಐಗೆ ಮಾತ್ರ!


Team Udayavani, Mar 21, 2019, 12:30 AM IST

ipl-bcci.jpg

ಪ್ರತೀವರ್ಷ ಏಪ್ರಿಲ್‌-ಮೇನಲ್ಲಿ ಐಪಿಎಲ್‌ ನಡೆಯುತ್ತದೆ. 48 ದಿನಗಳ ಬೃಹತ್‌ ಕೂಟ. 60 ಪಂದ್ಯಗಳು ನಡೆಯುತ್ತವೆ. ವಿಶ್ವದ ಖ್ಯಾತನಾಮ ಆಟಗಾರರು ಆಡುವ, ವಿಶ್ವದ ಅಭಿಮಾನಿಗಳು ವೀಕ್ಷಿಸುವ ಇಂತಹ ಕೂಟದ ಹಣಕಾಸು ಲೆಕ್ಕಾಚಾರ ಬಹಳ ಸಂಕೀರ್ಣ, ಅಗಾಧ! ಹೇಗೆಯೇ ನೋಡಿದರೂ ಐಪಿಎಲ್‌ನಿಂದ ಭರ್ಜರಿ ಲಾಭ ಮಾಡುವುದು ಬಿಸಿಸಿಐ ಮಾತ್ರ. ನೇರಪ್ರಸಾರ ಮಾಡುವ ಟೀವಿ ವಾಹಿನಿ, ಸಾವಿರಾರು ಕೋಟಿ ರೂ. ಹೂಡುವ ಫ್ರಾಂಚೈಸಿಗಳು ಗಳಿಸಿದ್ದನ್ನು ವಾಪಸ್‌ ಪಡೆಯುವುದು ಹೇಗೆ ಎನ್ನುವುದು ಬಹಳ ಕುತೂಹಲಕರ.

ಮೊದಲ 10 ವರ್ಷಗಳ ಅವಧಿಗೆ (2008-2017) ಸೋನಿ ಸಿಕ್ಸ್‌ 8,200 ಕೋಟಿ ರೂ. ನೀಡಿ ನೇರಪ್ರಸಾರ ಹಕ್ಕನ್ನು ಖರೀದಿಸಿತ್ತು. 2018ರಿಂದ 2022ರವರೆಗಿನ ನೇರಪ್ರಸಾರದ ಹಕ್ಕು ಸ್ಟಾರ್‌ನ್ಪೋರ್ಟ್ಸ್ ಪಾಲಾಯಿತು. ಇದರಿಂದ ಬಿಸಿಸಿಐ ಗಳಿಕೆ 16,347 ಕೋಟಿ ರೂ. ಅಂದರೆ ಆರಂಭದಲ್ಲಿ 10 ವರ್ಷಕ್ಕೆ 8,200 ಕೋಟಿ ರೂ. ಗಳಿಸಿದ್ದ ಬಿಸಿಸಿಐ, ಮುಂದಿನ ಬರೀ ಐದು ವರ್ಷಕ್ಕೆ ಇದರ ದುಪ್ಪಟ್ಟು ಹಣ ಗಳಿಸಿತು! ಅಷ್ಟು ಮಾತ್ರವಲ್ಲ ಶೀರ್ಷಿಕೆ ಪ್ರಾಯೋಜಕತ್ವದಿಂದ ಬಿಸಿಸಿಐ 2199 ಕೋಟಿ ರೂ. ಗಳಿಸಿತು. ಇನ್ನು ಫ್ರಾಂಚೈಸಿ ಶುಲ್ಕವಾಗಿ ಪ್ರತೀ ವರ್ಷ ಬಿಸಿಸಿಐ ಸಾವಿರಾರು ಕೋಟಿ ರೂ.ಗಳನ್ನು ಗಳಿಸುತ್ತದೆ. ಪ್ರಾರಂಭದಲ್ಲಿ ಈ ಫ್ರಾಂಚೈಸಿಗಳನ್ನು ಪಡೆದುಕೊಳ್ಳುವುದಕ್ಕೆ ಪ್ರತೀ ಮಾಲಿಕನೂ ಸಾವಿರಾರು ಕೋಟಿ ರೂ.ಗಳನ್ನು ಬಿಸಿಸಿಐಗೆ ನೀಡುತ್ತಾನೆ. ಇದರಲ್ಲೆಲ್ಲ ಬಿಸಿಸಿಐಗೆ ಕಳೆದುಕೊಳ್ಳುವುದೇನೂ ಇಲ್ಲ. ಬರೀ ಗಳಿಸುವುದು ಮಾತ್ರ! ಬಿಸಿಸಿಐ ತಾನು ಗಳಿಸಿದ್ದರಲ್ಲಿ ಶೇ.20ರಿಂದ 30ರಷ್ಟನ್ನು ಮಾತ್ರ ಬಿಸಿಸಿಐ ಕಳೆದುಕೊಳ್ಳುತ್ತದೆ.

ಟೀವಿ ವಾಹಿನಿಗೇನು ಲಾಭ?
ಸಾವಿರಾರು ಕೋಟಿ ರೂ. ಖರ್ಚು ಮಾಡುವ ಟೀವಿ ವಾಹಿನಿ ಅದನ್ನು ವಾಪಸ್‌ ಪಡೆಯಲು ಸಂಪೂರ್ಣವಾಗಿ ಜಾಹೀರಾತುದಾರರನ್ನು ಅವಲಂಬಿಸುತ್ತದೆ. ಈಗಾಗಲೇ 2019ರ ಆವೃತ್ತಿಗೆ 9 ಪ್ರಾಯೋಜಕರು 750 ಕೋಟಿ ರೂ.ಗಳನ್ನು ಸ್ಟಾರ್‌ನ್ಪೋರ್ಟ್ಸ್ಗೆ ನೀಡಿದ್ದಾರೆ. ಇನ್ನು ಮುಂದೆ ಪ್ರಾಯೋಜಕರ ಸಂಖ್ಯೆ ಹೆಚ್ಚಾಗಬಹುದು. ಇನ್ನು ಜಾಹೀರಾತು ನೀಡುವವರ ಲೆಕ್ಕಾಚಾರ. ಐಪಿಎಲ್‌ ವೇಳೆ ನೇರಪ್ರಸಾರವಾಗುವ ಪ್ರತೀ ಹತ್ತು ಸೆಕೆಂಡ್‌ಗೆ 10 ಲಕ್ಷ ರೂ.ವನ್ನು ಜಾಹೀರಾತುದಾರರು ನೀಡಬೇಕು. ಒಂದು ವರ್ಷ ಜಾಹೀರಾತಿನಿಂದ ಸರಾಸರಿ 2000 ಕೋಟಿ ರೂ. ಗಳಿಸುವ ನಿರೀಕ್ಷೆಯಿದೆ. ಅಂದರೆ ಒಂದು ಐಪಿಎಲ್‌ ಆವೃತ್ತಿಯಿಂದ ಸ್ಟಾರ್‌ ಗಳಿಸುವ ಅಂದಾಜು ಮೊತ್ತ 3500 ಕೋಟಿ ರೂ. ಒಟ್ಟು ಐದು ವರ್ಷಕ್ಕೆ 17,500 ಕೋಟಿ ರೂ. ಈಗ ಖರ್ಚು ಮಾಡಿದ್ದಕ್ಕಿಂತ ಕೇವಲ 2,500 ಕೋಟಿ ರೂ. ಹೆಚ್ಚು ಗಳಿಕೆ. ಜೊತೆಗೆ ಸ್ಟಾರ್‌ಗೆ ನೇರಪ್ರಸಾರ ಮಾಡುವುದಕ್ಕೆ ಪ್ರತಿ ಪಂದ್ಯದ ಮೇಲೆ ಬಹಳ ವೆಚ್ಚವಾಗುತ್ತದೆ. ಇದೆಲ್ಲ ನೋಡಿದರೆ ಯಾವ ಲೆಕ್ಕಾಚಾರ, ಲಾಭ-ನಷ್ಟದ ತರ್ಕದ ಮೇಲೆ ಸ್ಟಾರ್‌ ಈ ಮಟ್ಟದಲ್ಲಿ ಹಣ ಹೂಡುತ್ತಿದೆ ಎಂಬ ಪ್ರಶ್ನೆ ಏಳುತ್ತದೆ.

ಫ್ರಾಂಚೈಸಿಗಳಿಗೇನು ಲಾಭ?
ಫ್ರಾಂಚೈಸಿಗಳು ಟಿಕೆಟ್‌ ಮಾರಾಟದ ಮೇಲೆ ಕಣ್ಣಿಟ್ಟಿರುತ್ತವೆ. ಅದರಿಂದ ದೊಡ್ಡ ಮೊತ್ತವೇ ಬರುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯವೊಂದರ ಕನಿಷ್ಠ ದರ 800 ರೂ.ನಿಂದ ಶುರುವಾಗುತ್ತದೆ, ಗರಿಷ್ಠ ದರ 35,000 ರೂ. ಚಿನ್ನಸ್ವಾಮಿ ಮೈದಾನದ ಪ್ರೇಕ್ಷಕ ಸಾಮರ್ಥ್ಯ 35,000. ಬಹುತೇಕ ಪಂದ್ಯಗಳಲ್ಲಿ ಮೈದಾನ ತುಂಬಿರುತ್ತದೆ. ಫ್ರಾಂಚೈಸಿಗಳು ಪ್ರಾಯೋಜಕರನ್ನು ಹುಡುಕಿಕೊಳ್ಳುತ್ತವೆ. ಅವರ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತವೆ. ಇದರಿಂದ ಅವರ ಹಣ ವಾಪಸ್‌ ಬರುತ್ತದೆ. ಜನಪ್ರಿಯ ತಂಡಕ್ಕೆ, ತಾರೆಯರಿರುವ ತಂಡಕ್ಕೆ ಲಾಭ ಜಾಸ್ತಿ. ಜೊತೆಗೆ ಫ್ರಾಂಚೈಸಿಗಳ ಬ್ರ್ಯಾಂಡ್‌ ಮೌಲ್ಯ ಏರುತ್ತದೆ. ಅವು ಜಗತ್ತಿಗೆ ಪರಿಚಯವಾಗುತ್ತವೆ.

ಟಾಪ್ ನ್ಯೂಸ್

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.