ರಣಜಿ ಕ್ರಿಕೆಟ್‌ ನಾಕೌಟ್‌ ಮಾದರಿ ಬದಲಿಸಲು ಬಿಸಿಸಿಐ ಚಿಂತನೆ


Team Udayavani, Feb 26, 2020, 12:35 AM IST

DRS

ಮುಂಬಯಿ: ಮುಂದಿನ ವರ್ಷದಿಂದ ರಣಜಿ ಕ್ರಿಕೆಟ್‌ ಪಂದ್ಯಾವಳಿಯ ಮಾದರಿಯನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆಯೇ? “ಹೌದು’ ಎನ್ನುತ್ತಿವೆ ಮೂಲಗಳು.

ಈಗಿನ ಮಾದರಿ ಪ್ರಕಾರ ಹಲವು ಅಗ್ರ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಆಡುವ ಅವಕಾಶಗಳಿಸುತ್ತಿಲ್ಲ. ಆದ್ದರಿಂದ ಮುಂದಿನ ವರ್ಷದಿಂದ ಪ್ರೀ ಕ್ವಾರ್ಟರ್‌ ಫೈನಲ್‌ ಸೇರಿಸುವ ಯೋಚನೆಯನ್ನು ಬಿಸಿಸಿಐ ಹೊಂದಿದೆ ಎಂದು ಮಂಡಳಿ ಮೂಲಗಳು ಹೇಳಿವೆ.

ನಾಕೌಟ್‌ನಲ್ಲಿ ದುರ್ಬಲ ತಂಡಗಳು
ಪ್ರಸ್ತುತ ಎ ಮತ್ತು ಬಿ ಗುಂಪಿನಲ್ಲಿ ಅಗ್ರ 18 ತಂಡಗಳು ಆಡುತ್ತವೆ. ಸಿ ಗುಂಪಿನಲ್ಲಿ 10, ಪ್ಲೇಟ್‌ ಗುಂಪಿನಲ್ಲಿ 10 ತಂಡಗಳು ಆಡುತ್ತವೆ. ಸಿ ಮತ್ತು ಪ್ಲೇಟ್‌ ಅತ್ಯಂತ ದುರ್ಬಲ ತಂಡಗಳಿರುವ ಗುಂಪು. ಎ ಮತ್ತು ಬಿ ಗುಂಪಿನಿಂದ ಅಗ್ರ 5 ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸುತ್ತವೆ. ಸಿ ಗುಂಪಿನಿಂದ ಎರಡು, ಪ್ಲೇಟ್‌ ಗುಂಪಿನಿಂದ ಒಂದು ತಂಡ ಕ್ವಾರ್ಟರ್‌ ಫೈನಲ್‌ ತಲಪುತ್ತದೆ.
ಈ ಹಂತದಲ್ಲಿ ಎಲೈಟ್‌ ಎ ಮತ್ತು ಬಿ ಗುಂಪಿನ ತಂಡಗಳಿಗೆ ನಷ್ಟವಾಗುತ್ತಿದೆ. ಅತ್ಯಂತ ಬಲಿಷ್ಠ ತಂಡಗಳಿರುವ ಈ ಗುಂಪಿನಲ್ಲಿ ಪೈಪೋಟಿ ಜಾಸ್ತಿ. ಸಿ ಮತ್ತು ಬಿ ಗುಂಪು ಮೂಲತಃ ದುರ್ಬಲ ತಂಡಗಳಿರುವ ಗುಂಪು. ಇಲ್ಲಿಂದ ಮೇಲೇರುವ ತಂಡಗಳೂ ದುರ್ಬಲವಾಗಿಯೇ ಇರುತ್ತವೆ. ಆಗ ನಾಕೌಟ್‌ ಸುತ್ತಿನಲ್ಲಿ ದುರ್ಬಲ ತಂಡಗಳು ಇರುತ್ತವೆ. ಪ್ರಬಲ ತಂಡಗಳಿಗೆ ಅನ್ಯಾಯವಾಗುತ್ತಿದೆ.

ಇದಕ್ಕೆ ಪರಿಹಾರವಾಗಿ, ನಾಕೌಟ್‌ನಲ್ಲಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪಂದ್ಯವಾಡಿಸದೆ, ಪ್ರೀ ಕ್ವಾರ್ಟರ್‌ ಫೈನಲ್‌ ಸೇರಿಸುವುದು ಬಿಸಿಸಿಐ ಯೋಚನೆ. ಆಗ ಎ ಮತ್ತು ಬಿ ವಿಭಾಗದಿಂದ ಇನ್ನಷ್ಟು ತಂಡಗಳು ನಾಕೌಟ್‌ನಲ್ಲಿ ಆಡಬಹುದು ಎಂಬ ಯೋಚನೆ ಬಿಸಿಸಿಐನದ್ದು.

ಡಿಆರ್‌ಎಸ್‌ನಲ್ಲಿ ಮುಖ್ಯತಂತ್ರಜ್ಞಾನವೇ ಇಲ್ಲ!
ರಣಜಿ ಪಂದ್ಯದಲ್ಲಿ ಅಂಪಾಯರಿಂಗ್‌ ಗುಣಮಟ್ಟ ಬಹಳ ಕಳಪೆ ಎಂಬ ಆರೋಪಗಳು ಜೋರಾಗಿವೆ. ಆದ್ದರಿಂದ ಈ ಬಾರಿ ಅಲ್ಲಿ ಡಿಆರ್‌ಎಸ್‌ ಅಳವಡಿಸುವ ಬಗ್ಗೆ ಚಿಂತಿಸಲಾಗಿತ್ತು. ಕಡೆಗೆ ಅದನ್ನು ಕ್ವಾರ್ಟರ್‌ ಫೈನಲ್‌ನಿಂದ ಅಳವಡಿಸುವ ಯೋಚನೆ ಬಂತು. ಆದರೆ ಜಮ್ಮು ಕಾಶ್ಮೀರದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಕಾರಣಗಳಿಗಾಗಿ ಡಿಆರ್‌ಎಸ್‌ ಅಳವಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಎಲ್ಲ ಪಂದ್ಯಗಳಿಂದಲೂ ಇದನ್ನು ಹಿಂತೆಗೆಯಲಾಗಿತ್ತು. ಇದೀಗ ಸೆಮಿಫೈನಲ್‌ಗೆ
ಡಿಆರ್‌ಎಎಸ್‌ ಅಳವಡಿಸುವ ನಿರ್ಧಾರವಾಗಿದೆ.

ಆದರೆ ಇಲ್ಲೊಂದು ಮುಖ್ಯ ತಕರಾರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಡಿಆರ್‌ಎಸ್‌ ವೇಳೆ ಬಳಸುವ “ಹಾಕ್‌-ಐ’ ಹಾಗೂ “ಅಲ್ಟ್ರಾ ಎಡ್ಜ್’ ತಂತ್ರಜ್ಞಾನ ಇಲ್ಲಿರುವುದಿಲ್ಲ. ಆದ್ದರಿಂದ ಇಲ್ಲಿನ ಡಿಆರ್‌ಎಸ್‌ ತೀರ್ಪುಗಳು ಎಷ್ಟು ನಿಖರವಾಗಿರುತ್ತವೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.