ಕರ್ನಾಟಕದ ರಣಜಿ ಅಭಿಯಾನ ಅಂತ್ಯ: ಭರ್ಜರಿ ಜಯ ಸಾಧಿಸಿದ ಬಂಗಾಲ ಫೈನಲ್ ಪ್ರವೇಶ
Team Udayavani, Mar 3, 2020, 11:11 AM IST
ಕೋಲ್ಕತ್ತಾ: ಈ ಋತುವಿನ ರಣಜಿ ಕೂಟದಲ್ಲಿ ಕರ್ನಾಟಕ ತಂಡದ ಅಭಿಯಾನ ಅಂತ್ಯವಾಗಿದೆ. ಸೆಮಿ ಫೈನಲ್ ನಲ್ಲಿ ಭರ್ಜರಿ ಜಯ ಸಾಧಿಸಿದ ಬಂಗಾಲ ತಂಡ ರಣಜಿ ಫೈನಲ್ ಪ್ರವೇಶಿಸಿದೆ.
ಮೂರನೇ ದಿನದ ಅಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದ್ದ ರಾಜ್ಯ ತಂಡದ ಆಟಗಾರರು ಇಂದು ವಿಕೆಟ್ ಒಪ್ಪಿಸಲು ತುದಿಗಾಲಿನಲ್ಲಿ ನಿಂತಂತೆ ಆಡಿದರು. ಅಂತಿಮವಾಗಿ 177 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಬಂಗಾಲ 174 ರನ್ ಜಯ ಸಾಧಿಸಿತು.
ಅರ್ಧಶತಕ ಸಿಡಿಸಿ ಕ್ರೀಸ್ ನಲ್ಲಿದ್ದ ದೇವದತ್ತ ಪಡಿಕ್ಕಲ್ 62 ರನ್ ಗಳಿಸಿ ಔಟಾದರು. ಉಳಿದಂತೆ ಪಾಂಡೆ 12 ರನ್ ಗಳಿಸಿದರೆ ಕೆ.ಸಿದ್ದಾರ್ಥ ಮತ್ತು ಶ್ರೀನಿವಾಸ್ ಶರತ್ ಶೂನ್ಯ ಸುತ್ತಿದರು.
ಅಂತಿಮವಾಗಿ ಸೋಲು ಖಚಿತವಾದರೂ ಬ್ಯಾಟ್ ಬೀಸಿದ ಅಭಿಮನ್ಯು ಮಿಥುನ್ 38 ರನ್ ಗಳಿಸಿದರೆ, ಕೆ ಗೌತಮ್ 22 ರನ್ ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ