ದ.ಆಫ್ರಿಕ ಮೊದಲ ಟೆಸ್ಟ್: ಮೂರು ವಿಕೆಟ್ ಕಿತ್ತ ಭುವನೇಶ್ವರ್
Team Udayavani, Jan 5, 2018, 3:24 PM IST
ಕೇಪ್ ಟೌನ್, ದಕ್ಷಿಣ ಆಫ್ರಿಕ : ಇಲ್ಲಿನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಅಂಗದಲ್ಲಿ ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧದ 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದು ಆರಂಭಗೊಂಡಿದ್ದು ಭಾರತದ ವೇಗದ ಎಸೆಗಾರ ಭುವನೇಶ್ವರ ಕುಮಾರ್ ಮೂರು ವಿಕೆಟ್ಗಳನ್ನು ತ್ವರಿತ ಗತಿಯಲ್ಲಿ ಪಡೆದುಕೊಂಡು ಆತಿಥೇಯರಿಗೆ ಆಘಾತ ನೀಡಿದ್ದಾರೆ.
ಭುವನೇಶ್ವರ್ ಕುಮಾರ್ ತನ್ನ ಮೊದಲ ಓವರ್ನ 3ನೇ ಎಸೆತದಲ್ಲಿ ಎಲ್ಗರ್ ವಿಕೆಟ್ ಬಲಿ ಪಡೆದರು. ಎಲ್ಗರ್ ಅವರು ವಿಕೆಟ್ ಹಿಂದುಗಡೆ ವೃದ್ಧಿಮಾನ್ ಸಾಹಾಗೆ ಕ್ಯಾಚ್ ನೀಡದರು. ಆಗಿನ್ಯೂ ರನ್ ಗಳಿಸದಿದ್ದ ದ.ಆಫ್ರಿಕ 0/1 ಸ್ಥಿತಿಯಲ್ಲಿತ್ತು.
ಆ ಬಳಿಕ ಮ್ಯಾರ್ಕ್ರಾಂ ಅವರು ಭವನೇಶ್ವರ್ ಕುಮಾರ್ಗೆ ಎಲ್ಬಿಡಬ್ಲ್ಯು ಆದರು. ಆಗ ದಕ್ಷಿಣ ಆಫ್ರಿಕ 2 ವಿಕೆಟ್ ನಷ್ಟಕ್ಕೆ 7 ರನ್.
ಅನಂತರ ಹಶೀಂ ಆಮ್ಲ ಅವರನ್ನು ಭುವನೇಶ್ವರ್ ಕುಮಾರ್, ಸಾಹಾಗೆ ಕ್ಯಾಚ್ ದೊರಕಿಸಿ ಔಟ್ ಮಾಡಿದರು. ಆಗ ದಕ್ಷಿಣ ಆಫ್ರಿಕ 12/3.
13ನೇ ಓವರ್ ಮುಗಿದಾಗ ದಕ್ಷಿಣ ಆಫ್ರಿಕ 42/3 ಸ್ಥಿತಿಯಲ್ಲಿತ್ತು. ಡು ಪ್ಲೆಸಿಸ್ ಔಟಾಗದೆ 4 ರನ್ ಮತ್ತು ಡಿ’ ವಿಲಿಯರ್ ಔಟಾಗದೇ 28ರನ್ನಲ್ಲಿದ್ದರು.
ಭಾರತ ದಕ್ಷಿಣ ಆಫ್ರಿಕ ವಿರುದ್ಧ ಆ ದೇಶದಲ್ಲಿ 17 ಟೆಸ್ಟ್ ಪಂದ್ಯಗಳನ್ನು ಆಡ ಇದೆ; ಇವುಗಳಲ್ಲಿ ಭಾರತ ಎರಡಲ್ಲಿ ಗೆಲವು, 8ರಲ್ಲಿ ಸೋಲು, 7 ಡ್ರಾ ಸಾಧಿಸಿದೆ.
ಈ ಪ್ರವಾಸದಲ್ಲಿ ಭಾರತ 3 ಟೆಸ್ಟ್, ಆರು ಒನ್ಡೇ ಮತ್ತು 3 ಟಿ-20 ಪಂದ್ಯಗಳನ್ನು ಆಡಲಿದೆ.
ಭಾರತ ತಂಡ : ಶಿಖರ್ ಧವನ್, ಮುರಳಿ ವಿಜಯ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಹಾರ್ದಿಕ ಪಾಂಡ್ಯಾ, ರವಿಚಂದ್ರನ್ ಅಶ್ವಿನ್,ಮೊಹಮ್ಮದ್ ಶಮೀ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.
ದ.ಆಫ್ರಿಕ ತಂಡ : ಡೀನ್ ಎಲ್ಗರ್, ಐಡೆನ್ ಮ್ಯಾರ್ಕ್ರಮ್, ಹಶೀಂ ಅಮ್ಲ, ಎಬಿಡಿ ವಿಲಿಯರ್, ಡಿ ಪ್ಲೆಸಿಸ್ (ನಾಯಕ), ಕ್ವಿಂಟನ್ ಡಿ’ಕಾಕ್ (ವಿ.ಕೀ). ವರ್ನನ್ ಫಿಲಾಂಡರ್, ಕೇಶವ ಮಹಾರಾಜ್, ಡೇಲ್ಸ್ಟೇನ್, ಕ್ಯಾಗಿಸೋ ರಬಾಡಾ, ಮಾರ್ನೆ ಮಾರ್ಕೆಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ