ತವರಿನ ಎಲ್ಲ ಪಂದ್ಯ ಸೋತ ತಮಿಳ್‌


Team Udayavani, Oct 6, 2017, 6:45 AM IST

DSC_0040.jpg

ಚೆನ್ನೈ: ವಿವೊ ಪ್ರೊ ಕಬಡ್ಡಿ ಲೀಗ್‌ನ ಚೆನ್ನೈ ಚರಣದ ಗುರುವಾರದ ಏಕೈಕ ಹಾಗೂ ಕೊನೆಯ  ಪಂದ್ಯದಲ್ಲಿ ರೋಹಿತ್‌ ಮತ್ತು ಅಜಯ್‌ ಅವರ ಭರ್ಜರಿ ಆಟದಿಂದಾಗಿ ಬೆಂಗಳೂರು ಬುಲ್ಸ್‌ ಆತಿಥೇಯ ತಮಿಳ್‌ ತಲೈವಾಸ್‌ತಂಡಕ್ಕೆ 45-35 ಅಂಕಗಳ ಸೋಲುಣಿಸಿತು. ಇದರೊಂದಿಗೆ ತವರಿನ ಎಲ್ಲ 6 ಪಂದ್ಯಗಳಲ್ಲೂ ತಮಿಳ್‌ ಶರಣಾಗತಿ ಸಾರಿತು. ಚೆನ್ನೈ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು.

ಇಲ್ಲಿನ ಜವಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗ ಣದಲ್ಲಿ ನಡೆದ ಬಿ ವಲಯದ ಕೊನೆಯ 2 ಸ್ಥಾನಿಗಳ ನಡುವಿನ ಈ ಪಂದ್ಯದಲ್ಲಿ ಬುಲ್ಸ್‌ ಆರಂಭದಿಂದಲೇ ತಮಿಳರ ಮೇಲೇರಗಿ ಅಂಕ ಪಡೆಯಲು ಆರಂಭಿಸಿತು. 3 ಬಾರಿ ತಮಿಳ್‌ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ಗೆಲುವಿನ ನಗೆ ಚೆಲ್ಲಿತು.ದ್ವಿತೀಯ ಅವಧಿಯ ಆಟದಲ್ಲಿ ಬುಲ್ಸ್‌ ತಂಡವನ್ನು ಆಲೌಟ್‌ ಮಾಡಿದರೂ ತಮಿಳ್‌ಗೆ ಗೆಲುವು ಮರೀಚಿಕೆಯೇ ಆಗುಳಿಯಿತು. ಚೆನ್ನೈ ಚರಣದ ಆರೂ ಪಂದ್ಯಗಳಲ್ಲಿ ಮಿಂಚಿನಾಟ ಪ್ರದರ್ಶಿಸಿದ್ದ ಅಜಯ್‌ ಠಾಕುರ್‌ ಈ ಪಂದ್ಯದಲ್ಲೂ ಗರಿಷ್ಠ 15 ಅಂಕ ಗಳಿಸಿ ಗಮನ ಸೆಳೆದರು. ಪ್ರಪಂಜನ್‌ 8 ಅಂಕ ಮತ್ತು ದರ್ಶನ್‌ 6 ಅಂಕ ಗಳಿಸಿದರು.

ಬುಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ರೋಹಿತ್‌ ಕುಮಾರ್‌ ಗರಿಷ್ಠ 17 ಅಂಕ ಪಡೆದು ಮಿಂಚಿದರು. ಅಜಯ್‌ 6 ಅಂಕ ಮತ್ತು ಸಚಿನ್‌ 5 ಅಂಕ ಗಳಿಸಿದರು.ಈ ಗೆಲುವಿನಿಂದ ಬೆಂಗಳೂರು ಬುಲ್ಸ್‌ ಸತತ 3 ಸೋಲಿನ ಸರಮಾಲೆಗೆ ಅಂತ್ಯ ಹಾಡಿತಲ್ಲದೇ ಸೂಪರ್‌ ಪ್ಲೇ ಆಫ್ಗೆ  ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿತು. ಬುಲ್ಸ್‌ ಈವರೆಗೆ 18 ಪಂದ್ಯಗಳನ್ನಾಡಿದ್ದು, 39 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಬೆಂಗಳೂರು ಇನ್ನು 4 ಪಂದ್ಯ ಆಡಲಿದ್ದು, ಇವೆಲ್ಲವನ್ನೂ ಗೆದ್ದರೆ ಮುನ್ನಡೆಯಬಹುದು.

ಬೆಂಗಳೂರು ಭರ್ಜರಿ ಪ್ರದರ್ಶನ
ಬೋನಸ್‌ ಅಂಕ ಗಳಿಸುವ ಮೂಲಕ ಖಾತೆ  ತೆರೆದ ಬೆಂಗಳೂರು ಬುಲ್ಸ್‌ ತಂಡ ಮೊದಲ 5 ನಿಮಿಷ ಮುಗಿದಾಗ 6-3 ಮುನ್ನಡೆಯಲ್ಲಿತ್ತು. ಅಂಕ ಸಮಬಲ ಸಾಧಿಸಲು ತಮಿಳ್‌ ಸತತ ಪ್ರಯತ್ನ ನಡೆಸಿದರೂ ಬುಲ್ಸ್‌ ಮುನ್ನಡೆಯನ್ನು ಬಿಟ್ಟುಕೊಡಲೇ ಇಲ್ಲ. 10 ನಿಮಿಷದ ಆಟ ಮುಗಿದಾಗ ಬುಲ್ಸ್‌ 8-6ರಿಂದ ಮುನ್ನಡೆ ಸಾಧಿಸಿತು.

ಆಬಳಿಕ ಬುಲ್ಸ್‌ ಭರ್ಜರಿ ಆಟವಾಡಿತು. ಅಜಯ್‌ ಮತ್ತು ರೋಹಿತ್‌ ಸತತ ರೈಡ್‌ನ‌ಲ್ಲಿ ಅಂಕ ಕಲೆ ಹಾಕಿದರು. ಇದರಿಂದ ಒತ್ತಡಕ್ಕೆ ಒಳಗಾದ ತಮಿಳ್‌ ಮೊದಲ ಅವಧಿ ಮುಗಿಯಲು 2 ನಿಮಿಷವಿರುವಾಗ ಆಲೌಟ್‌ಗೆ ಗುರಿಯಾಯಿತು. ಮೊದಲ ಅವಧಿ ಮುಗಿದಾಗ ಬುಲ್ಸ್‌ 19-10ರಿಂದ ಮುನ್ನಡೆಯಲ್ಲಿತ್ತು.

ಇಂದಿನಿಂದ ಜೈಪುರ ಚರಣ
ಶುಕ್ರವಾರದಿಂದ ಜೈಪುರದಲ್ಲಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ ಎ ವಲಯದ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್ಸ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ತವರಿನಲ್ಲಿ ಜೈಪುರ ಆರು ಪಂದ್ಯಗಳನ್ನು ಆಡಲಿದ್ದು ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವಿದೆ.

– ಶಂಕರನಾರಾಯಣ ಪಿ.

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.