ಎನ್ಸಿಎಯಲ್ಲಿ ಚಿಕಿತ್ಸೆ ಪಡೆಯಲು ಬುಮ್ರಾ, ಹಾರ್ದಿಕ್ ನಿರಾಕರಣೆ?
Team Udayavani, Dec 14, 2019, 11:31 PM IST
ಹೊಸದಿಲ್ಲಿ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಬಗ್ಗೆ ಆಗಾಗ್ಗೆ ಅಪಸ್ವರ ಕೇಳಿಬರುತ್ತಲೇ ಇರುತ್ತದೆ. ಈಗ ಸೊಂಟದ ನೋವಿಗೆ ಸಿಲುಕಿ ಶಸ್ತ್ರಚಿಕಿತ್ಸೆಗೊಳ ಗಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಈಗಷ್ಟೇ ಚೇತರಿಸಿಕೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಇಲ್ಲಿ ಹೆಚ್ಚುವರಿ ದೈಹಿಕ ತರಬೇತಿ ಪಡೆಯಲು ಒಪ್ಪಿಲ್ಲ ಎನ್ನಲಾಗಿದೆ.
ಬಿಸಿಸಿಐನ ಗುತ್ತಿಗೆ ಪದ್ಧತಿ ವ್ಯಾಪ್ತಿಗೆ ಬರುವ ಕ್ರಿಕೆಟಿಗರು, ಎನ್ಸಿಎನಲ್ಲಿ ದೈಹಿಕ ಚಿಕಿತ್ಸೆ ಹಾಗೂ ತರಬೇತಿ ಪಡೆಯ ಬೇಕೆನ್ನುವುದು ನಿಯಮ. ಆದರೆ ಇಬ್ಬರೂ ಇದನ್ನು ತಿರಸ್ಕರಿಸಿದ್ದಾರೆ. ಆಟಗಾರರಿಗೆ ತಾವು ಚಿಕಿತ್ಸೆ ಪಡೆಯುವ ಸ್ಥಳದ ಬಗ್ಗೆ ಹಿತಕರ ಭಾವನೆ ಇರುವುದೂ ಮುಖ್ಯ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.