ಭಾರತ ಕ್ರಿಕೆಟ್ ನಾಯಕತ್ವಕ್ಕಾಗಿ ನಡೆಯುತ್ತಿದೆಯೇ ಪೈಪೋಟಿ?
Team Udayavani, Nov 12, 2020, 4:49 PM IST
ಮುಂಬೈ: ಒಂದೆರಡು ವರ್ಷಗಳಿಂದ ಭಾರತ ತಂಡದಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಟಿ20 ತಂಡದ ನಾಯಕತ್ವ ವಹಿಸಿದ್ದಾಗಲೆಲ್ಲ ಯಶಸ್ವಿಯಾಗಿರುವ ರೋಹಿತ್, ಒಂದು ಸಂದರ್ಭದಲ್ಲಿ, ನನಗೂ ಧೋನಿಗೆ ಇರುವ ಹಾಗೆ ಶಾಂತ ಸ್ವಭಾವವಿದೆ. ನಾಯಕತ್ವ ಕೊಟ್ಟರೆ ನಿಭಾಯಿಸಲು ಸಿದ್ಧ ಎಂದಿದ್ದರು. ಅನಂತರ ಇಬ್ಬರ ನಡುವೆ ನಾಯಕತ್ವಕ್ಕಾಗಿ ಸಂಘರ್ಷವಿದೆ ಎಂಬ ಊಹೆಗಳಿವೆ.
ಇಷ್ಟರ ನಡುವೆ ರೋಹಿತ್ ರನ್ನು ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಿಂದ ಪೂರ್ಣ ಕೈಬಿಟ್ಟದ್ದರ ಬಗ್ಗೆ ಭಾರೀ ಆಕ್ರೋಶವೆದ್ದಿತ್ತು. ಅವರಿಗೆ ಗಾಯವಾಗಿದೆ ಎಂದು ಬಿಸಿಸಿಐ ಹೇಳಿದ್ದರೂ, ಮುಂಬೈ ಇಂಡಿಯನ್ಸ್ ವೆಬ್ಸೈಟ್ನಲ್ಲಿ ಅವರು ಸಲೀಸಾಗಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಪ್ರಕಟವಾಗಿತ್ತು! ಇದು ಭಾರೀ ಗೊಂದಲ ಮೂಡಿಸಿತ್ತು.
ನಾಲ್ಕು ಪಂದ್ಯಗಳ ನಂತರ ರೋಹಿತ್ ಮತ್ತೆ ಮುಂಬೈ ತಂಡಕ್ಕೆ ಮರಳಿ, ಫೈನಲ್ನಲ್ಲಿ ಅಮೋಘವಾಗಿಯೂ ಆಡಿದರು. ಅಷ್ಟಾಗಿಯೂ ಭಾರತ ತಂಡದ ಪರಿಷ್ಕೃತ ಪಟ್ಟಿಯಲ್ಲಿ, ರೋಹಿತ್ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಇದು ಹಲವು ಪ್ರಶ್ನೆಗಳು, ಚರ್ಚೆಗಳಿಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ಸರಣಿಯ ನಿಗದಿತ ಓವರ್ ಪಂದ್ಯಗಳಲ್ಲಿ ರೋಹಿತ್ ಗೆ ಸ್ಥಾನ ಸಿಕ್ಕಿಲ್ಲವಾದ ಕಾರಣ ತಂಡದ ಉಪನಾಯಕನ ಜವಾಬ್ದಾರಿಯನ್ನು ಕೆ ಎಲ್ ರಾಹುಲ್ ಗೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್