ಪಟ್ಟು ಸಡಿಲಿಸದ ಚಾಮರಿ ಅತಪಟ್ಟು : ಅಂತಿಮ ಪಂದ್ಯದಲ್ಲಿ ಎಡವಿದ ಭಾರತ


Team Udayavani, Jun 27, 2022, 11:45 PM IST

ಪಟ್ಟು ಸಡಿಲಿಸದ ಚಾಮರಿ ಅತಪಟ್ಟು : ಅಂತಿಮ ಪಂದ್ಯದಲ್ಲಿ ಎಡವಿದ ಭಾರತ

ಡಂಬುಲ: ನಾಯಕಿ ಚಾಮರಿ ಅತಪಟ್ಟು ಅವರ ಅಜೇಯ 80 ರನ್ನುಗಳ ಬ್ಯಾಟಿಂಗ್‌ ಸಾಹಸದಿಂದ ಶ್ರೀಲಂಕಾ ಟಿ20 ಸರಣಿಯಲ್ಲಿ ವೈಟ್‌ವಾಶ್‌ ಸಂಕಟದಿಂದ ಪಾರಾಗಿದೆ.

ಸೋಮವಾರದ 3ನೇ ಹಾಗೂ ಕೊನೆಯ ಮುಖಾಮುಖಿಯಲ್ಲಿ ಲಂಕಾ ವನಿತೆಯರು ಭಾರತವನ್ನು 7 ವಿಕೆಟ್‌ಗಳಿಂದ ಮಣಿಸಿ ಒಂದಿಷ್ಟು ಗೌರವ ಸಂಪಾದಿಸಿದರು. ಮೊದ ಲೆರಡೂ ಪಂದ್ಯಗಳನ್ನು ಜಯಿಸಿದ್ದ ಭಾರತ 2-1ರಿಂದ ಸರಣಿ ಮೇಲೆ ಹಕ್ಕು ಚಲಾಯಿಸಿತು.

ಈ ಪಂದ್ಯದಲ್ಲೂ ಎವರೇಜ್‌ ಮೊತ್ತವೇ ದಾಖಲಾಯಿತು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಗಳಿಸಿದ್ದು 5 ವಿಕೆಟಿಗೆ 138 ರನ್‌. ಜವಾಬಿತ್ತ ಶ್ರೀಲಂಕಾ ಇನ್ನೂ 3 ಓವರ್‌ ಉಳಿದಿರುವಂತೆಯೇ 141 ರನ್‌ ಬಾರಿಸಿ ಜಯ ಗಳಿಸಿತು.

ಭಾರತ ಮೊದಲ ಪಂದ್ಯದಲ್ಲೂ 138 ರನ್‌ (6 ವಿಕೆಟ್‌) ಮಾಡಿತ್ತು. ಅಲ್ಲಿ ಲಂಕೆಯನ್ನು 34 ರನ್ನುಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ ಭಾರತದ ಬೌಲರ್ ಆಟ ನಡೆಯಲಿಲ್ಲ.

2 ಸಾವಿರ ರನ್‌ ಸಾಧನೆ: ನಾಯಕಿ ಹಾಗೂ ಓಪನರ್‌ ಚಾಮರಿ ಅತಪಟ್ಟು ಅಜೇಯ 80 ರನ್‌ ಬಾರಿಸಿ ತಂಡವನ್ನು ನಿರಾಯಾಸವಾಗಿ ದಡ ತಲುಪಿಸಿದರು. ಅವರ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ಈ ಬ್ಯಾಟಿಂಗ್‌ ವೈಭವದ ವೇಳೆ ಚಾಮರಿ ಅತಪಟ್ಟು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಸಾವಿರ ರನ್‌ ಪೂರೈಸಿದ ಶ್ರೀಲಂಕಾದ ಮೊದಲ ಕ್ರಿಕೆಟರ್‌ ಎನಿಸಿದರು. ಇಲ್ಲಿನ ಪುರುಷರಿಂದಲೂ ಈ ಮೈಲುಗಲ್ಲು ದಾಖಲಾಗಿಲ್ಲ ಎಂಬುದು ಉಲ್ಲೇಖನೀಯ. 1,889 ರನ್‌ ಮಾಡಿದ ತಿಲಕರತ್ನೆ ದಿಲ್ಶನ್‌ ಅವರದೇ ಹೆಚ್ಚಿನ ಗಳಿಕೆ.

ಭಾರತ ಒಟ್ಟು 7 ಬೌಲರ್‌ಗಳನ್ನು ದಾಳಿಗೆ ಇಳಿಸಿದರೂ ಅತಪಟ್ಟು ಮಾತ್ರ ಪಟ್ಟು ಸಡಿಲಿಸದೆ ಹೋರಾಡಿದರು. ಅವರಿಗೆ ನೀಲಾಕ್ಷಿ ಡಿ ಸಿಲ್ವ ಉತ್ತಮ ಬೆಂಬಲ ನೀಡಿದರು. ನೀಲಾಕ್ಷಿ ಗಳಿಕೆ 28 ಎಸೆತಗಳಿಂದ 30 ರನ್‌ (4 ಬೌಂಡರಿ).
ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 33 ಎಸೆತಗಳಿಂದ ಸರ್ವಾಧಿಕ 39 ರನ್‌ ಹೊಡೆದರು. ಈ ಅಜೇಯ ಇನ್ನಿಂಗ್ಸ್‌ನಲ್ಲಿ 3 ಫೋರ್‌ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಜೆಮಿಮಾ ರೋಡ್ರಿಗಸ್‌ 30 ಎಸೆತಗಳಿಂದ 33 ರನ್‌ (3 ಬೌಂಡರಿ), ಸ್ಮತಿ ಮಂಧನಾ ಮತ್ತು ಎಸ್‌. ಮೇಘನಾ ತಲಾ 22 ರನ್‌ ಮಾಡಿದರು. ಕೌರ್‌, ಜೆಮಿಮಾ ಮತ್ತು ಪೂಜಾ ವಸ್ತ್ರಾಕರ್‌ (ಅಜೇಯ 13) ಸೇರಿಕೊಂಡು ಕೊನೆಯ 5 ಓವರ್‌ಗಳಲ್ಲಿ 49 ರನ್‌ ಒಟ್ಟುಗೂಡಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ-5 ವಿಕೆಟಿಗೆ 138 (ಕೌರ್‌ ಔಟಾಗದೆ 39, ಜೆಮಿಮಾ 33, ಮಂಧನಾ 22, ಮೇಘನಾ 22, ರಣಸಿಂಘೆ 31ಕ್ಕೆ 1). ಶ್ರೀಲಂಕಾ-17 ಓವರ್‌ಗಳಲ್ಲಿ 3 ವಿಕೆಟಿಗೆ 141 (ಅತಪಟ್ಟು ಔಟಾಗದೆ 80, ನೀಲಾಕ್ಷಿ 30, ರೇಣುಕಾ 27ಕ್ಕೆ 1).

ಪಂದ್ಯಶ್ರೇಷ್ಠ: ಚಾಮರಿ ಅತಪಟ್ಟು.
ಸರಣಿಶ್ರೇಷ್ಠ: ಹರ್ಮನ್‌ಪ್ರೀತ್‌ ಕೌರ್‌.

 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.