ಒಂದೇ ಪಂದ್ಯಕ್ಕೆ ಚಂಡಿಮಾಲ್ ಖೇಲ್ ಖತಂ!
Team Udayavani, Aug 29, 2017, 12:36 PM IST
ಕೊಲಂಬೊ: ಬಹಳ ಸಮಯದ ಬಳಿಕ ಏಕದಿನ ಕ್ರಿಕೆಟಿಗೆ ಮರಳಿದ ಶ್ರೀಲಂಕಾ ಬ್ಯಾಟ್ಸ್ಮನ್ ದಿನೇಶ್ ಚಂಡಿಮಾಲ್ ಅವರ ಆಟ ಒಂದೇ ಪಂದ್ಯಕ್ಕೆ ಸೀಮಿತ ಗೊಂಡಿದೆ. ಭಾರತದೆದುರಿನ ರವಿ ವಾರದ ಏಕದಿನ ಪಂದ್ಯದ ವೇಳೆ ಕೈಬೆರಳಿನ ಗಾಯಕ್ಕೊಳಗಾದ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
25 ರನ್ ಗಳಿಸಿದ್ದ ವೇಳೆ ಹಾರ್ದಿಕ್ ಪಾಂಡ್ಯ ಬೌನ್ಸರ್ ಒಂದು ಚಂಡಿಮಾಲ್ ಅವರ ಬಲಗೈ ಹೆಬ್ಬೆರಳಿಗೆ ಬಡಿದಿತ್ತು. ತೀವ್ರ ನೋವಿಗೆ ಸಿಲು ಕಿದ ಅವರಿಗೆ ಅಂಗಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಬ್ಯಾಟಿಂಗ್ ಮುಂದುವರಿಸಿದರೂ ಬೆರಳಿನ ನೋವು ಅವರನ್ನು ಕಾಡುತ್ತಲೇ ಇತ್ತು. ಶಾರ್ಟ್ ಬಾಲ್ಗಳನ್ನು ಎದುರಿಸಲು ಪರದಾಡುತ್ತಿದ್ದುದು ಕಂಡುಬಂತು. ಒಟ್ಟು 71 ಎಸೆತ ಎದುರಿಸಿದ ಚಂಡಿಮಾಲ್ 36 ರನ್ ಮಾಡಿ ಔಟಾದರು.
ಚಂಡಿಮಾಲ್ ಹೆಬ್ಬೆರಳಿನ ಮೂಳೆಯಲ್ಲಿ ಅತಿ ಸೂಕ್ಷ್ಮ ಬಿರುಕು ಕಂಡುಬಂದಿದ್ದು, ಅವರು ಉಳಿ ದೆರಡು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೋಮವಾರ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಚಂಡಿಮಾಲ್ ಹೊರಗುಳಿಯುವುದ ರೊಂದಿಗೆ ಶ್ರೀಲಂಕಾ ಕ್ರಿಕೆಟಿಗರ ಗಾಯದ ಸಮಸ್ಯೆ ಉಲ್ಬಣಿಸಿದಂತಾಗಿದೆ. ಗುಣರತ್ನೆ, ಪ್ರದೀಪ್, ಹೆರಾತ್, ಗುಣತಿಲಕ ಅವರೆಲ್ಲ ಈಗಾ ಗಲೇ ಗಾಯಾಳಾಗಿ ಹೊರಬಿದ್ದಿದ್ದಾರೆ. ಚಂಡಿ ಮಾಲ್ ಗಾಯಾಳು ಗುಣತಿಲಕೆ ಬದಲು 3ನೇ ಏಕದಿನದ ವೇಳೆ ತಂಡವನ್ನು ಸೇರಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್