4ನೇ ಟ್ರೋಫಿ ಮೇಲೆ ಚೆನ್ನೈ ಸೂಪರ್‌ ಕಿಂಗ್ಸ್‌ ಕಣ್ಣು

ಶುಕ್ರವಾರ ಐಪಿಎಲ್‌ ಫೈನಲ್‌ ಮತ್ತೆ ಬೀಸಲಿದೆಯೇ ಧೋನಿ ಹವಾ?

Team Udayavani, Oct 14, 2021, 5:45 AM IST

4ನೇ ಟ್ರೋಫಿ ಮೇಲೆ ಚೆನ್ನೈ ಕಣ್ಣು

ದುಬಾೖ: ಅದು ಯುಎಇಯಲ್ಲೇ ನಡೆದ ಕಳೆದ ವರ್ಷದ ಐಪಿಎಲ್‌. ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇ-ಆಫ್ ಟಿಕೆಟ್‌ ಪಡೆಯದೇ ಹೊರಬಿದ್ದಿತ್ತು. ಅಷ್ಟೇ ಅಲ್ಲ, ಟೂರ್ನಿಯಿಂದ ನಿರ್ಗಮಿಸಿದ ಮೊದಲ ತಂಡವೆಂಬ ಅವಮಾನಕ್ಕೂ ಸಿಲುಕಿತ್ತು.

ಆಗ ಧೋನಿ ಒಂದು ಮಾತು ಹೇಳಿದ್ದರು, “ನಾವು ಇಂದು ಬೇಗನೇ ಕೂಟದಿಂದ ಹೊರಬಿದ್ದಿರಬಹುದು. ಆದರೆ ಮುಂದಿನ ವರ್ಷ ನಮ್ಮದು ಗ್ರೇಟೆಸ್ಟ್‌ ಕಮ್‌ಬ್ಯಾಕ್‌ ಆಗಲಿದೆ…’

ಇದು ನಿಜವಾಗಿದೆ. 2020ರಲ್ಲಿ ಮೊದಲ ತಂಡವಾಗಿ ಹೊರಬಿದ್ದ ಚೆನ್ನೈ ಈ ಬಾರಿ ಮೊದಲ ತಂಡವಾಗಿ ಫೈನಲ್‌ಗೆ ಲಗ್ಗೆ ಇರಿಸಿದೆ. ಶುಕ್ರವಾರ ತನ್ನ 9ನೇ ಫೈನಲ್‌ ಆಡಲಿಳಿಯಲಿದೆ. ಪ್ರಶಸ್ತಿ ಸಮರದಲ್ಲಿ ಡೆಲ್ಲಿ ಅಥವಾ ಕೆಕೆಆರ್‌ ಎದುರಾಗಲಿದೆ. ಐಪಿಎಲ್‌ನಲ್ಲಿ ಮತ್ತೆ ಧೋನಿ ಹವಾ ಬೀಸಲಿದೆಯೇ? ಇಂಥದೊಂದು ಸಾಧ್ಯತೆ ದಟ್ಟವಾಗಿದೆ.

ಅತ್ಯಂತ ಯಶಸ್ವಿ ತಂಡ
ಧೋನಿ ಪಡೆ ಮೊದಲ ಸಲ ಐಪಿಎಲ್‌ ಟ್ರೋಫಿ ಎತ್ತಿದ್ದು 2010ರಲ್ಲಿ. ಮರುವರ್ಷ ಮತ್ತೆ ಚಾಂಪಿಯನ್‌ ಆಯಿತು. ಟ್ರೋಫಿ ಉಳಿಸಿಕೊಂಡ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಯಿತು. ಕೊನೆಯ ಸಲ ಚೆನ್ನೈಗೆ ಐಪಿಎಲ್‌ ಟ್ರೋಫಿ ಒಲಿದದ್ದು 2018ರಲ್ಲಿ. ಅಂದು ಅದು ಅತ್ಯಧಿಕ ಹಿರಿಯ ಆಟಗಾರರನ್ನು ಹೊಂದಿದ್ದ ತಂಡವಾಗಿತ್ತು. ಅಪ್ಪಂದಿರ ತಂಡ ಗೆದ್ದು ಬೀಗಿತ್ತು!

ಮುಂಬೈ ಇಂಡಿಯನ್ಸ್‌ ಅತ್ಯಧಿಕ 5 ಸಲ ಐಪಿಎಲ್‌ ಚಾಂಪಿಯನ್‌ ಆಗಿರಬಹುದು. ಆದರೆ ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ಹಾಗೂ ಸ್ಥಿರತೆಯನ್ನು ಕಾಯ್ದುಕೊಂಡು ಬಂದ ತಂಡವೆಂದರೆ ನಿಸ್ಸಂಶಯವಾಗಿಯೂ ಚೆನ್ನೈ. ಅದು ಮೂರೇ ಸಲ ಪ್ರಶಸ್ತಿ ಗೆದ್ದಿರಬಹುದು, ಆದರೆ ಅತ್ಯಧಿಕ 9 ಸಲ ಫೈನಲ್‌ಗೆ ಲಗ್ಗೆ ಇರಿಸಿದೆ. 5 ಸಲ ರನ್ನರ್ ಅಪ್‌ ಆಗಿದೆ. ಮೊದಲ ಐಪಿಎಲ್‌ನಲ್ಲೇ ಪ್ರಶಸ್ತಿ ಸುತ್ತಿಗೆ ನೆಗೆದಿದ್ದ ಚೆನ್ನೈ ಅಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಎಡವಿತ್ತು.

ಇದನ್ನೂ ಓದಿ:ಟೀಮ್‌ ಇಂಡಿಯಾ ಕ್ರಿಕೆಟಿಗರಿಗೆ ನೂತನ ಜೆರ್ಸಿ

3 ಬಾರಿಯ ಚಾಂಪಿಯನ್‌
ಚೆನ್ನೈ ಮೊದಲ ಸಲ ಐಪಿಎಲ್‌ ಟ್ರೋಫಿ ಹಿಡಿದು ಮೆರೆದದ್ದು 2010ರಲ್ಲಿ. ಅಂದಿನ ಫೈನಲ್‌ ಎದುರಾಳಿ ಮುಂಬೈ ಇಂಡಿಯನ್ಸ್‌. ಸಚಿನ್‌ ತೆಂಡುಲ್ಕರ್‌ ನೇತೃತ್ವದ ಮುಂಬೈಗೆ ಇದು ತವರು ಪಂದ್ಯವಾಗಿತ್ತು. ಆದರೆ ನವೀ ಮುಂಬಯಿ ಮುಖಾಮುಖೀಯನ್ನು ಧೋನಿ ಪಡೆ 22 ರನ್ನುಗಳಿಂದ ಜಯಿಸಿತು. ಚೆನ್ನೈ 5ಕ್ಕೆ 168 ರನ್‌ ಗಳಿಸಿದರೆ, ಚೇಸಿಂಗ್‌ನಲ್ಲಿ ಮುಂಬೈ 9ಕ್ಕೆ 146 ರನ್‌ ಮಾಡಿ ಶರಣಾಯಿತು.
ಮುಂದಿನ ವರ್ಷವೂ ಚೆನ್ನೈ ಅಮೋಘ ಪ್ರದರ್ಶನ ಕಾಯ್ದುಕೊಂಡು ಪ್ರಶಸ್ತಿ ಸುತ್ತಿಗೆ ನೆಗೆಯಿತು. ಅಲ್ಲಿನ ಎದುರಾಳಿ ಆರ್‌ಸಿಬಿ. ಚೆನ್ನೈಯಲ್ಲಿ ನಡೆದ ಈ ಪಂದ್ಯದಲ್ಲಿ ಧೋನಿ ಟೀಮ್‌ 58 ರನ್ನುಗಳಿಂದ ಗೆದ್ದು ಟ್ರೋಫಿ ಉಳಿಸಿಕೊಂಡಿತು. ಚೆನ್ನೈ 5ಕ್ಕೆ 205 ರನ್‌ ಪೇರಿಸಿದರೆ, ಡೇನಿಯಲ್‌ ವೆಟರಿ ಬಳಗ 8ಕ್ಕೆ 147 ರನ್‌ ಮಾಡಿ ಸೋತಿತು.

2018ರಲ್ಲಿ ಕೊನೆಯ ಗೆಲುವಿನ ವೇಳೆ ಚೆನ್ನೈಗೆ ಸನ್‌ರೈಸರ್ ಎದುರಾಗಿತ್ತು. ಸ್ಥಳ ವಾಂಖೇಡೆ ಸ್ಟೇಡಿಯಂ. ಗೆಲುವಿನ ಅಂತರ 8 ವಿಕೆಟ್‌. ಹೈದರಾಬಾದ್‌ 6ಕ್ಕೆ 178 ರನ್‌ ಹೊಡೆದರೆ, ಚೆನ್ನೈ ಎರಡೇ ವಿಕೆಟಿಗೆ 181 ರನ್‌ ಬಾರಿಸಿತು. ವಾಟ್ಸನ್‌ ಅಜೇಯ 117 ರನ್‌ ಸಿಡಿಸಿದ್ದರು.

ಆರಂಭಿಕರ ಪಾತ್ರ…
ಚೆನ್ನೈ ತಂಡದ ಈ ವರ್ಷದ ಯಶಸ್ಸಿನಲ್ಲಿ ಆರಂಭಿಕರಾದ ಋತುರಾಜ್‌ ಮತ್ತು ಡು ಪ್ಲೆಸಿಸ್‌ ಜೋಡಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರಾಯುಡು, ಜಡೇಜ, ಬ್ರಾವೊ, ಠಾಕೂರ್‌, ಹ್ಯಾಝಲ್‌ವುಡ್‌ ಕೊಡುಗೆಯೂ ಗಮನಾರ್ಹ. ಮತ್ತೆ… ಮತ್ತೆ ಬೆಸ್ಟ್‌ ಫಿನಿಶರ್‌ ಆಗಿ ಮೂಡಿಬಂದ ಕಪ್ತಾನ ಧೋನಿ ಈ ಯಾದಿಯ “ಲೇಟೆಸ್ಟ್‌ ಎಂಟ್ರಿ’ ಆಗಿದ್ದಾರೆ! ಅಂದಹಾಗೆ ಚೆನ್ನೈ ಈ ವರೆಗೆ ವಿದೇಶಿ ಐಪಿಎಲ್‌ ಕೂಟಗಳಲ್ಲಿ ಚಾಂಪಿ ಯನ್‌ ಆಗಿಲ್ಲ. ಈ ಬಾರಿ ಇಂಥದೊಂದು ದಾಖಲೆಗೆ ಅವಕಾಶವಿದೆ.

ಸ್ಥಳ: ದುಬಾೖ
ಆರಂಭ:
ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.