ಇಂದಿನಿಂದ 44ನೇ ಚೆಸ್‌ ಒಲಿಂಪಿಯಾಡ್‌: ಆತಿಥೇಯ ಭಾರತಕ್ಕೆ ಪ್ರತಿಷ್ಠೆಯ ಪಂದ್ಯಾವಳಿ

ದೇಶದ 6 ತಂಡಗಳಿಗೆ ವಿಶ್ವನಾಥನ್‌ ಆನಂದ್‌ ಮೆಂಟರ್‌

Team Udayavani, Jul 28, 2022, 5:15 AM IST

ಇಂದಿನಿಂದ 44ನೇ ಚೆಸ್‌ ಒಲಿಂಪಿಯಾಡ್‌: ಆತಿಥೇಯ ಭಾರತಕ್ಕೆ ಪ್ರತಿಷ್ಠೆಯ ಪಂದ್ಯಾವಳಿ

ಮಾಮಲ್ಲಪುರಂ (ತಮಿಳುನಾಡು): ಪ್ರತಿಷ್ಠಿತ ಚೆಸ್‌ ಒಲಿಂಪಿಯಾಡ್‌ ಸ್ಪರ್ಧೆ ಗುರುವಾರದಿಂದ ತಮಿಳುನಾಡಿನಲ್ಲಿ ಆರಂಭವಾಗಲಿದೆ.

ತಾಣ, ಚೆನ್ನೈನಿಂದ 58 ಕಿ.ಮೀ. ದೂರದ ಮಾಮಲ್ಲಪುರಂ. ಕಳೆದ ಕೆಲವು ವರ್ಷಗಳಿಂದ ಚದುರಂಗದಲ್ಲಿ ಗಮನಾರ್ಹ ಸಾಧನೆಯೊಂದಿಗೆ ಮಿಂಚುತ್ತಿರುವ ಭಾರತದ ಪಾಲಿಗೆ ಇದೊಂದು ಪ್ರತಿಷ್ಠೆಯ ಪಂದ್ಯಾವಳಿಯಾಗಿದೆ.

ಚೆಸ್‌ ಪವರ್‌ಹೌಸ್‌ ರಷ್ಯಾ ಮತ್ತು ಚೀನ ಗೈರಿನಿಂದಾಗಿ ಭಾರತಕ್ಕೆ ಇಲ್ಲಿ ಮೇಲುಗೈ ಸಾಧಿಸುವ ಉತ್ತಮ ಅವಕಾಶ ಇದೆ ಎಂಬುದೊಂದು ಲೆಕ್ಕಾಚಾರ. ಓಪನ್‌ ಮತ್ತು ವನಿತಾ ವಿಭಾಗಗಳಲ್ಲಿ ಭಾರತ ತಲಾ 3 ತಂಡಗಳನ್ನು ಕಣಕ್ಕಿಳಿಸಲಿದೆ. 5 ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ ಮೆಂಟರ್‌ ಆಗಿರುವುದರಿಂದ ಭಾರತೀಯರಿಗೆ ಲಾಭವಾಗುವ ಸಾಧ್ಯತೆ ಹೆಚ್ಚು.

ಓಪನ್‌ ವಿಭಾಗದಲ್ಲಿ 188 ತಂಡಗಳು ಹಾಗೂ ವನಿತಾ ವಿಭಾಗದಲ್ಲಿ 162 ತಂಡಗಳು ಸ್ಪರ್ಧಿಸುತ್ತಿರುವುದು ಚೆಸ್‌ ಒಲಿಂಪಿಯಾಡ್‌ ಇತಿಹಾಸದಲ್ಲೇ ಒಂದು ದಾಖಲೆ. ಭಾರತ ಎ ತಂಡವಿಲ್ಲಿ ದ್ವಿತೀಯ ಶ್ರೇಯಾಂಕ ಹೊಂದಿದೆ. ಅಮೆರಿಕಕ್ಕೆ ಅಗ್ರ ಶ್ರೇಯಾಂಕ ಲಭಿಸಿದೆ. ದೊಡ್ಡ ಪದಕಕ್ಕಾಗಿ ಭಾರತ ತಂಡ ನಾರ್ವೆ ಮತ್ತು ಅಜರ್‌ಬೈಜಾನ್‌ ಜತೆಯೂ ಸೆಣೆಸಬೇಕಿದೆ.

ಪಿ.ಹರಿಕೃಷ್ಣ, ಅರ್ಜುನ್‌ ಇರಿಗೇಸಿ, ವಿದಿತ್‌ ಗುಜರಾತಿ, ಕೆ. ಶಶಿಕಿರಣ್‌, ಎಸ್‌.ಎಲ್‌.ನಾರಾಯಣ್‌ ಈ ವಿಭಾಗದಲ್ಲಿದ್ದಾರೆ.

ಭಾರತ “ಬಿ’ ತಂಡ ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ನಿಖೀಲ್‌ ಸರಿನ್‌, ರೌನಕ್‌ ಸಾಧ್ವನಿ, ಬಿ.ಅಧಿಬನ್‌ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ ಎಂದು ಕೋಚ್‌ ರಮೇಶ್‌ ಹೇಳಿದ್ದಾರೆ.

ಭಾರತದ ಸಿ ತಂಡ ಅಗ್ರ ಶ್ರೇಯಾಂಕಿತರನ್ನು ಹಾಗೂ ಯುವ ಆಟಗಾರರನ್ನು ಹೊಂದಿದೆ. ಸೂರ್ಯಶೇಖರ್‌ ಗಂಗೂಲಿ ಇಲ್ಲಿನ ನೆಚ್ಚಿನ ಆಟಗಾರ. ಎಸ್‌.ಪಿ.ಸೇತುರಾಮನ್‌, ಅಭಿಜಿತ್‌ ಗುಪ್ತ, ಕಾರ್ತಿಕೇಯನ್‌ ಮುರಳಿ, ಅಭಿಮನ್ಯು ಪುರಾಣಿಕ್‌ ಉಳಿದ ಆಟಗಾರರು. ಆದರೆ ಶ್ರೇಯಾಂಕದಲ್ಲಿ ಸಿ ತಂಡ 17ರಷ್ಟು ಕೆಳ ಸ್ಥಾನದಲ್ಲಿದೆ.

ಅಮೆರಿಕವನ್ನು ಈ ಕೂಟದ ನೆಚ್ಚಿನ ತಂಡವೆಂದು ಬಣ್ಣಿಸಲಾಗುತ್ತಿದೆ. ಫ್ಯಾಬಿಯೊ ಕ್ಯಾರುವಾನ, ವೆಸ್ಲಿ ಸೋ, ಲೆವನ್‌ ಅರೋನಿಯನ್‌, ಸ್ಯಾಮ್‌ ಶಂಕ್‌ಲ್ಯಾಂಡ್‌, ಲೀನಿಯರ್‌ ಡೊಮಿನಿಗ್ವೆಝ್ ಅವರೆಲ್ಲ ಅಮೆರಿಕದ ಪ್ರಮುಖ ಸ್ಪರ್ಧಿಗಳು.

ವನಿತಾ ವಿಭಾಗ: ವನಿತೆಯರ ಎ ವಿಭಾಗಕ್ಕೆ ಅಗ್ರಶ್ರೇಯಾಂಕ ಲಭಿಸಿದೆ. ಕೊನೇರು ಹಂಪಿ, ಡಿ.ಹರಿಕಾ, ಆರ್‌.ವೈಶಾಲಿ, ತನಿಯಾ ಸಚೆªàವ್‌, ಭಕ್ತಿ ಕುಲಕರ್ಣಿ ಅವರೆಲ್ಲ ಇಲ್ಲಿನ ಪ್ರಮುಖ ಆಟಗಾರ್ತಿಯರು. ಬಿ ವಿಭಾಗದಲ್ಲಿ ವಂತಿಕಾ ಅಗರ್ವಾಲ್‌, ಸೌಮ್ಯಾ ಸ್ವಾಮಿನಾಥನ್‌, ಮೇರಿ ಆ್ಯನ್‌ ಗೋಮ್ಸ್‌, ಪದ್ಮಿನಿ ರಾವತ್‌, ದಿವ್ಯಾ ದೇಶ್‌ಮುಖ್‌; ಸಿ ವಿಭಾಗದಲ್ಲಿ ಇಶಾ ಕರ್ವಡೆ, ಸಾಹಿತಿ ವರ್ಷಿಣಿ, ಪ್ರತ್ಯೂಷಾ ಬೊಡ್ಡ, ಪಿ.ವಿ.ನಂದಿತಾ, ವಿಶ್ವಾ ವಸ್ನಾವಾಲ ಇದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.