ಶಾಲೆಗಳಲ್ಲಿ ಚೆಸ್‌ ಕಲಿಕೆ ಕಡ್ಡಾಯವಾಗಲಿ

ರಾಜ್ಯದ ಪ್ರಥಮ ಗ್ರ್ಯಾನ್‌ ಮಾಸ್ಟರ್‌ ತೇಜ್‌ಕುಮಾರ್‌

Team Udayavani, Apr 11, 2019, 6:30 AM IST

chess

ಉಡುಪಿ: ತಮಿಳುನಾಡು ಮತ್ತು ಗುಜರಾತಿನ ಶಾಲೆಗಳಲ್ಲಿ ಚೆಸ್‌ ಆಟವನ್ನು ಪಠ್ಯದ ಒಂದು ಭಾಗವಾಗಿ ಆಯ್ಕೆ ಮಾಡಿಕೊಂಡು ಕಡ್ಡಾಯಗೊಳಿಸಲಾಗಿದೆ.

ಅದರಂತೆ ನಮ್ಮ ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಗೊಳಿಸಬೇಕಾದ ಆವಶ್ಯಕತೆ ಎಂದು ರಾಜ್ಯದ ಪ್ರಥಮ ಹಾಗೂ ದೇಶದ 50ನೇ ಗ್ರ್ಯಾನ್‌ ಮಾಸ್ಟರ್‌ ಮೈಸೂರಿನ ತೇಜ್‌ಕುಮಾರ್‌ ಎಂ.ಎಸ್‌. ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ಚೆಸ್‌ ಪಂದ್ಯಾಟವೊಂದರ ಟ್ರೋಫಿ ಅನಾವರಣಕ್ಕೆ ಆಗಮಿಸಿದ್ದ ತೇಜ್‌ಕುಮಾರ್‌ “ಉದಯವಾಣಿ’ ಜತೆ ಮಾತನಾಡಿ ಕರ್ನಾಟಕದಲ್ಲಿ ಚೆಸ್‌ ಆಟಗಾರರ ಸಂಖ್ಯೆ ಕಡಿಮೆಯಿದೆ. ರಾಜ್ಯದಲ್ಲಿ ಚೆಸ್‌ ಆಟಗಾರರ ಸಂಖ್ಯೆ ಹೆಚ್ಚಾಗಬೇಕಾದ ಶಾಲೆಗಳಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸಬೇಕು ಎಂದರು.

– ಶಾಲೆಗಳಲ್ಲಿ ಚೆಸ್‌ ಬೆಳೆಸುವುದು ಹೇಗೆ?
ಗುಜರಾತ್‌ ಮತ್ತು ತಮಿಳುನಾಡು ಸರಕಾರ ಅನುಸರಿಸಿರುವ ಮಾದರಿ ರಾಜ್ಯದಲ್ಲೂ ಜಾರಿಗೊಳಿಸಬೇಕು. ಬೆಂಗಳೂರು ಮತ್ತು ಮೈಸೂರಿನಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳ ಬೇಡಿಕೆಯಂತೆ ಚೆಸ್‌ಗೆ ವಿಶೇಷ ಗಮನ ನೀಡಲಾಗುತ್ತಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಚೆಸ್‌ಗೆ ಅಂತಹ ಪ್ರೋತ್ಸಾಹ ಸಿಗುತ್ತಿಲ್ಲ.

ಮೈಸೂರಿನಲ್ಲಿ ಕೆಲವು ಶಾಲೆಯವರು ಚೆಸ್‌ ತರಬೇತಿಗಾಗಿ ನನ್ನ ಸಲಹೆ ಕೇಳುತ್ತಿದ್ದಾರೆ. ನಾನು ಖುದ್ದಾಗಿ ಹೋಗಿ ಚೆಸ್‌ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಕೆಲವು ತರಬೇತುದಾರರನ್ನು ತಯಾರು ಮಾಡಿ ಅವರ ಮೂಲಕ ಶಾಲೆಗಳಲ್ಲಿ ಚೆಸ್‌ ತರಬೇತಿ ನೀಡುವ ಯೋಜನೆ ಹಾಕಿಕೊಂಡಿದ್ದೇನೆ. ನಾಲ್ಕನೇ ವರ್ಷದಿಂದಲೇ ಮಕ್ಕಳಿಗೆ ಚೆಸ್‌ ಕಲಿಸಬಹುದು.

– ಪಠ್ಯಕ್ಕೆ ತೊಂದರೆಯಾಗದೆ?
ತರಗತಿಯ ವಿಷಯಗಳ ಕಲಿಕೆಯ ಜತೆಗೆ ಚೆಸ್‌ನಲ್ಲಿ ತೊಡಗಿಸಿಕೊಂಡರೆ ಅಂಕಗಳಿಕೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗದು. ಚೆಸ್‌ನಿಂದ ಏಕಾಗ್ರತೆ ಬೆಳೆಯುತ್ತದೆ ಮತ್ತು ಇತರೆ ವಿಷಯಗಳಿಗೂ ಬುದ್ಧಿ ಚುರುಕಾಗುತ್ತದೆ. ನಮ್ಮಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ ಸೂಕ್ತ ಪ್ರೋತ್ಸಾಹದ ಅಗತ್ಯವಿದೆ.

ನಿಮಗೆ ಸ್ಫೂರ್ತಿ…
ವಿಶ್ವನಾಥನ್‌ ಆನಂದ್‌ ಅವರೇ ಸ್ಫೂರ್ತಿ. ಅವರೇ ನನ್ನ ಐಕಾನ್‌. ನಾನು ರಾಜ್ಯದ ಮೊದಲ ಗ್ರ್ಯಾನ್‌ ಮಾಸ್ಟರ್‌ ಆಗಿರುವುದಕ್ಕೆ ಹೆಮ್ಮೆಯಿದೆ. ಚೆಸ್‌ ಕೋಚ್‌ನ ಮಾರ್ಗದರ್ಶನವಿಲ್ಲದೆ 36ನೇ ವಯಸ್ಸಿನಲ್ಲಿ ನಾನು ಗ್ರ್ಯಾನ್‌ ಮಾಸ್ಟರ್‌ ಆಗಿದ್ದೆ. ಅನಂತರ ಕಳೆದ ವರ್ಷ ಶಿವಮೊಗ್ಗದ ಸ್ಟಾನಿ ಅವರು ಗ್ರ್ಯಾನ್‌ ಮಾಸ್ಟರ್‌ ಆಗಿದ್ದಾರೆ. ತಮಿಳುನಾಡಿನಲ್ಲಿ 20ಕ್ಕೂ ಅಧಿಕ ಗ್ರ್ಯಾನ್‌ ಮಾಸ್ಟರ್‌ಗಳಿದ್ದಾರೆ.

– ಹೇಗಿದೆ ಪ್ರೋತ್ಸಾಹ?
ಚೆಸ್‌ ಕ್ರೀಡೆ ಆಯ್ದುಕೊಂಡ ನನಗೆ ಉತ್ತಮ ಪ್ರೋತ್ಸಾಹ ದೊರೆಕಿದೆ.ಇತರ ಹಲವು ಕ್ರೀಡೆಗಳಂತೆ ಚೆಸ್‌ ಸಾಧಕರಿಗೂ ನ್ಪೋರ್ಟ್ಸ್ ಕೋಟಾ ದಡಿ ಉತ್ತಮ ಅವಕಾಶವಿದೆ. ನಾನು ಚೆಸ್‌ನಿಂದಾಗಿಯೇ ಇಂದು ಭಾರತೀಯ ರೈಲ್ವೆಯ ವಿಭಾಗೀಯ ಅಧಿಕಾರಿಯಾಗಿ ಸೇವೆ ಸಲ್ಲಿಸುವಂತಾಗಿದೆ.

– ಮುಂದಿನ ಗುರಿ?
2017ರಲ್ಲಿ ಗ್ರ್ಯಾನ್‌ ಮಾಸ್ಟರ್‌ ಆದೆ. ಹಲವು ಬಾರಿ ರಾಷ್ಟ್ರಮಟ್ಟದ ವಿವಿಧ ಚಾಂಪಿಯನ್‌ಶಿಪ್‌ಗ್ಳಲ್ಲಿ ಗೆದ್ದಿದ್ದೇನೆ. 2011ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಸನಿಹಕ್ಕೆ ಹೋಗಿದ್ದೆ. ಮುಂದಿನ ಕಾಮನ್ವೆಲ್‌ Õನ ಲ್ಲಿ ಪದಕ ಗೆಲ್ಲಲೇಬೇಕೆಂಬ ಕನಸಿದೆ. ಇದಕ್ಕಾಗಿ ಕಳೆದೆರಡು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ.

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.