ಇಂದು ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅಧಿಕಾರ ಸ್ವೀಕಾರ
Team Udayavani, Oct 23, 2019, 5:30 AM IST
ಮುಂಬಯಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಸತತ 2 ವರ್ಷಗಳ ಕಾಲ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ವಿನೋದ್ ರಾಯ್ ತಂಡಕ್ಕೆ, ಬುಧವಾರ ಕೊನೆಯ ದಿನ.
ಸೌರವ್ ಗಂಗೂಲಿ ಬುಧವಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ, ಈ ವೇಳೆ ಆಡಳಿತಾಧಿಕಾರಿಗಳು ತಮ್ಮ ಸ್ಥಾನ ತೆರವು ಮಾಡಲಿದ್ದಾರೆ. ಆದರೆ ಬಿಸಿಸಿಐ ಆಡಳಿತ ನಡೆಸುತ್ತಿದ್ದಾಗ ಆಡಳಿತಾಧಿಕಾರಿಗಳು ತೆಗೆದುಕೊಂಡ ಕ್ರಮಗಳ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳು ವಂತಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಇದು ವಿನೋದ್ ರಾಯ್ ಪಡೆಗೆ ನೆಮ್ಮದಿಯ ಸಂಗತಿಯಾಗಿದೆ. ಇಲ್ಲಿ ಬಿಸಿಸಿಐ ಉದ್ಧಾರ ಮುಖ್ಯವಾಗಿತ್ತೇ ಹೊರತು, ವೈಯಕ್ತಿಕ ಹಿತಾಸಕ್ತಿಯಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಾಸ್ತವವಾಗಿ ಬುಧವಾರವೇ ಬಿಸಿಸಿಐ ನೂತನ ನಾಯಕತ್ವದ ಆಯ್ಕೆಯಾಗಬೇಕಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಕೆಲದಿನಗಳ ಮುನ್ನವೇ ಸೌರವ್ ಗಂಗೂಲಿ ಅವರನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಏರಿಸಲಾಯಿತು. ಅಮಿತ್ ಶಾ ಪುತ್ರ ಜೇ ಶಾರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಆದ್ದರಿಂದ ನಡೆಯಬೇಕಿದ್ದ ಪ್ರಕ್ರಿಯೆಗಳೆಲ್ಲ ಈಗಾಗಲೇ ಮುಗಿದಿವೆ. ಸಾಂಪ್ರದಾಯಿಕ ಘೋಷಣೆ ಮಾತ್ರ ಬುಧವಾರ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು