16ರ ಹರೆಯದ ಟೆನ್ನಿಸ್‌ ತಾರೆ ಕೊಕೊ ಗಾಫ್ ಗೆ ಕಾಡುತ್ತಿದೆ ಖಿನ್ನತೆ

ಜನಪ್ರಿಯತೆಯ ಪರಮೋಚ್ಚ ಸ್ಥಿತಿ ತಲುಪಿದ್ದ ಆಟಗಾರ್ತಿಗೆ ಅದುವೇ ಮುಳುವಾಯಿತು

Team Udayavani, Apr 17, 2020, 2:03 PM IST

16ರ ಹರೆಯದ ಟೆನ್ನಿಸ್‌ ತಾರೆ ಕೊಕೊ ಗಾಫ್ ಗೆ ಕಾಡುತ್ತಿದೆ ಖಿನ್ನತೆ

ಮುಂಬೈ: ಜನಪ್ರಿಯತೆಗಾಗಿ ಜನ ಮುಗಿಬೀಳುತ್ತಾರೆ. ಅದಕ್ಕಾಗಿ ಹಂಬಲಿಸಿ ಜೀವನವನ್ನೇ ವ್ಯರ್ಥ ಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಕೆಲವರಿಗೆ ಈ ಜನಪ್ರಿಯತೆ ಯಾಕಾದರೂ ಬಂತು, ಇದರಿಂದ ತಮ್ಮ ಜೀವನವೇ ಹಾಳಾಗುತ್ತಿದೆ ಎಂಬ ಕೊರಗೂ ಕಾಡುತ್ತದೆ. ಅಂತಹದೊಂದು ನೋವಿಗೆ, ಖನ್ನತೆಗೆ ಒಳಗಾಗಿರುವುದು ಅಮೆರಿಕದ ವಿಶ್ವವಿಖ್ಯಾತ ಟೆನಿಸ್‌ ತಾರೆ, ಕೇವಲ 16 ವರ್ಷದ ಕೊಕೊ ಗಾಫ್!

ಈಕೆಗೆ ಕೇವಲ 15 ವರ್ಷದವರಿದ್ದಾಗಲೇ ವಿಪರೀತ ಜನಪ್ರಿಯತೆ ಬಂದು ಮುಗಿಬಿದ್ದಿದೆ. ಅದು ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಅದರಿಂದ ಆಡುವ ಆನಂದವನ್ನೇ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸಿದೆ. ಜನರಿಗೋಸ್ಕರ ಆಡುತ್ತಿದ್ದೇನೋ, ತನಗಾಗಿ ಆಡುತ್ತಿದ್ದೇನೋ ಗೊತ್ತಾಗದೆ ಅವರು ಒದ್ದಾಡುತ್ತಿದ್ದಾರೆ.

ಅವರನ್ನು ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ಗೆ ಹೋಲಿಸುತ್ತಿರುವುದರಿಂದ, ಪ್ರತೀಬಾರಿಯೂ  ಅಮೋಘವಾಗಿ ಆಟವನ್ನೇ ಆಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ತಾನೀಗ ತ್ತಲಲ್ಲಿದ್ದೇನೆ, ಒಂದು ವರ್ಷ ಕ್ರೀಡೆಯಿಂದಲೇ ದೂರಾಗಲು ಚಿಂತಿಸುತ್ತಿದ್ದೇನೆಂದು ಗಾಫ್  ಹೇಳಿಕೊಂಡಿದ್ದಾರೆ. ಅವರ ಅಂತರಂಗದ ತುಮುಲಗಳು ಹೀಗಿವೆ…

ಯಾರಿಗಾಗಿ ಆಡುತ್ತಿದ್ದೇನೆ?: ಇಷ್ಟರವರೆಗೆ ಅತೀ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆಗಳು ಒಲಿದಿವೆ. ಅದು ನನಗೆ ವಿಪರೀತ ಜನಪ್ರಿಯತೆ ನೀಡಿತು. ಇದನ್ನು ನಾನು ಬಯಸಿರಲಿಲ್ಲ. ಅದರಿಂದ ಪದೇಪದೇ ಅತ್ಯುತ್ತಮವಾಗಿ ಆಡುವ ಒತ್ತಡ ಉಂಟಾಗಿದೆ. 2018ರ ವಿಂಬಲ್ಡನ್‌ಗೂ ಮುಂಚಿನಿಂದಲೇ, ಇದನ್ನೇ ನಾನು ಬಯಸಿದ್ದಾ ಎಂದು ಪ್ರಶ್ನಿಸಿಕೊಳ್ಳಲು ಶುರು ಮಾಡಿದ್ದೆ. ನನಗೆ ಯಶಸ್ಸು ಸಿಕ್ಕಿದೆ. ಅದಲ್ಲ ವಿಷಯ. ನಾನು ಯಾವುದನ್ನು ಪ್ರೀತಿಸುತ್ತಿದ್ದೀನೋ ಅದರಿಂದ ನನಗೆ ಆನಂದವೇ ಸಿಗುತ್ತಿಲ್ಲ. ಆದ್ದರಿಂದ ಜನರಿಗಾಗಿ ಅಲ್ಲ, ನನಗಾಗಿ ಆಡಬೇಕು ಎಂದು ತೀರ್ಮಾನಿಸಿದ್ದೇನೆ. ಕಳೆದ ವರ್ಷ ನಿಜಕ್ಕೂ ಖನ್ನತೆಗೊಳಗಾಗಿದ್ದೆ. ಅದು ನನ್ನ ಪಾಲಿನ ಕಠಿಣ ವರ್ಷ ಖನ್ನತೆಗೊಳಗಾಗಿದ್ದೇನೆ: ಈ ಬಗ್ಗೆ ಖಚಿತ ನಿಲವು ಹೊಂದದಿರುವುದು ಸರಿ. ಆದರೆ ನಾನು ಆ ದಿಕ್ಕಿನಲ್ಲಿ ಹೋಗುತ್ತಿಲ್ಲ. ಬದಲಿಗೆ ಸಿಕ್ಕಾಪಟ್ಟೆ ಗೊಂದಲಕ್ಕೊಳಗಾಗಿದ್ದೇನೆ. ತನ್ನ ತುಮುಲಗಳ ಪರಿಣಾಮ, ಸ್ನೇಹಿತರೇ ಇಲ್ಲವಾಗಿದ್ದಾರೆ. ಆದ್ದರಿಂದ ಒಂದು ವರ್ಷ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿದ್ದೇನೆ. ನನ್ನಲ್ಲಿ ವಿಪರೀತ ಯೋಚನೆಗಳು. ಇದನ್ನೇ ನಾನು ಬಯಸಿದ್ದಾ? ಉಳಿದವರು ಏನು ಮಾಡುತ್ತಾರೆ? ಹೀಗೆಲ್ಲ ಚಿಂತೆಗಳು. ಬಹಳ ಸಲ ಕೂತು ಯೋಚಿಸಿದ್ದೇನೆ. ಅತ್ತಿದ್ದೇನೆ, ಕಡೆಗೆ ಅದರಿಂದೆಲ್ಲ ಹೊರಬಂದು, ಮತ್ತಷ್ಟು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ.

ಸೆರೆನಾಗೆ ಹೋಲಿಸಬೇಡಿ: ನನ್ನಂತಹ ಚಿಕ್ಕ ಆಟಗಾರ್ತಿಯನ್ನು ಸೆರೆನಾ ವಿಲಿಯಮ್ಸ್‌ರಂತಹ ಆಟಗಾರ್ತಿಯರಿಗೆ ಹೋಲಿಸುವುದೇ ತಪ್ಪು. ಅವರಂತಹ ಅಗಾಧ ಸಾಧಕಿಯನ್ನು, ನನ್ನಂತಹ ಉದಯೋನ್ಮುಖರಿಗೆ ಹೋಲಿಸುವುದು ಸರಿಯಲ್ಲ. ಆದರೂ ನನಗೆ ಅವರೇ ಮಾದರಿ ಆಟಗಾರ್ತಿ.

ಗಾಫ್ ಸಾಧನೆಯೇನು?

2019ರಲ್ಲಿ ಕೊಕೊ ಗಾಫ್ ಬರೀ 15 ವರ್ಷದವರಿದ್ದಾಗಲೇ ವಿಂಬಲ್ಡನ್‌ ಗ್ರ್ಯಾನ್‌ ಸ್ಲಾéಮ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ಈ ವರ್ಷ ಮತ್ತೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಉಪಾಂತ್ಯಕ್ಕೇರಿದ್ದರು. ದಿಗ್ಗಜ ಆಟಗಾರರನ್ನೇ ಸೋಲಿಸಿಬಿಟ್ಟರು. ಇದರಿಂದ ಆಕೆ ಜನಪ್ರಿಯತೆಯ ತುದಿಗೇರಿದರು. ಮಾತ್ರವಲ್ಲ ವಿಶ್ವ ಮಹಿಳಾ ಶ್ರೇಯಾಂಕದಲ್ಲಿ ಅಗ್ರ 50ರೊಳಗೆ ಸ್ಥಾನ ಪಡೆದರು. ಕಳೆದ 15 ವರ್ಷದಲ್ಲೇಈ ವಯಸ್ಸಿನ ಆಟಗಾರ್ತಿಯರುಮಾಡದ ಸಾಧನೆಯಿದು.

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.