ಕಾಫಿ ವಿತ್ ಕರಣ್ ಅಸಹ್ಯ ಹುಟ್ಟಿಸಿದೆ: ಪಾಂಡ್ಯ
Team Udayavani, Jan 10, 2020, 12:03 AM IST
ಮುಂಬಯಿ: ಸದ್ಯ ವಿಶ್ರಾಂತಿಯಲ್ಲಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, 2019ರ “ಕಾಫಿ ವಿತ್ ಕರಣ್’ ಕಾರ್ಯಕ್ರಮದ ವಿವಾದದ ಬಗ್ಗೆ ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ. “ಅದೊಂದು ಅಸಹ್ಯ ಹುಟ್ಟಿಸಿದ ಕಾರ್ಯಕ್ರಮ. ಆಗ ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿರಲಿಲ್ಲ. ಏನಾಗುತ್ತಿದೆಯೆಂದೇ ಗೊತ್ತಾಗುತ್ತಿರಲಿಲ್ಲ’ ಎಂದಿದ್ದಾರೆ.
“ಕ್ರಿಕೆಟಿಗರಾಗಿ ನಮ್ಮಿಬ್ಬರಿಗೆ (ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್) ಏನಾಗುತ್ತಿದೆಯೆಂದೇ ತಿಳಿಯಲಿಲ್ಲ. ಚೆಂಡು ನಮ್ಮ ಅಂಗಳದಲ್ಲಿರಲಿಲ್ಲ. ಅದು ಬೇರೊಬ್ಬರ ಬಳಿಯಿತ್ತು. ಅದನ್ನು ಅವರೇ ನಿಭಾಯಿಸುತ್ತಿದ್ದರು. ಅದೊಂದು ಅಸಹ್ಯ ಜಾಗ, ಅಲ್ಲಿರಲು ನೀವು ಖಂಡಿತ ಬಯಸುವುದಿಲ್ಲ’ ಎಂದು ಕಿಡಿಕಾರಿದ್ದಾರೆ.
ಭಾರೀ ವಿವಾದ
ಕಳೆದ ವರ್ಷ ರಾಹುಲ್ ಮತ್ತು ಪಾಂಡ್ಯ, ಖ್ಯಾತ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ “ಕಾಫಿ ವಿತ್ ಕರಣ್’ ಟೀವಿ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಕರಣ್ ಕೇಳಿದ ಪ್ರಶ್ನೆಗಳಿಗೆ ಪಾಂಡ್ಯ ಮುಲಾಜಿಲ್ಲದೆ ಉತ್ತರಿಸಿದ್ದರು. ತನಗೆ ಅನೇಕ ವಿವಾಹೇತರ ಸಂಬಂಧಗಳಿವೆ, ಅವೆಲ್ಲ ಪೋಷಕರಿಗೂ ಗೊತ್ತು ಎಂದಿದ್ದರು. ಸ್ತ್ರೀಯರ ಬಗ್ಗೆಯೂ ಅಸಭ್ಯವಾಗಿ ಪ್ರತಿಕ್ರಿಯಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಪರಿಣಾಮ ರಾಹುಲ್ ಮತ್ತು ಹಾರ್ದಿಕ್ ಇಬ್ಬರಿಗೂ ನಿಷೇಧ ಹೇರಿ, ಆಸ್ಟ್ರೇಲಿಯ ಪ್ರವಾಸದ ಮಧ್ಯದಲ್ಲೇ ಭಾರತಕ್ಕೆ ಕರೆಸಿಕೊಳ್ಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ