ಲಂಕೆಯಲ್ಲಿ ಕ್ರಿಕೆಟ್ ಜೂಜಾಟ: ಅರ್ಜುನ ರಣತುಂಗ ಕಿಡಿ
Team Udayavani, Sep 1, 2017, 3:15 PM IST
ಕೊಲಂಬೋ : ಈಚಿನ ದಿನಗಳಲ್ಲಿ ಅತ್ಯಂತ ಕಿಡಿಕಾರುವ ವಿವಾದಾತ್ಮಕ ಹೇಳಿಕೆಗಳನ್ನೇ ನೀಡುವ ಚಾಳಿ ಬೆಳೆಸಿಕೊಂಡಿರುವ ಲಂಕೆಯ ಮಾಜಿ ಕ್ರಿಕೆಟ್ ಕಪ್ತಾನ ಹಾಗೂ ಹಾಲಿ ರಾಜಕಾರಣಿ ಅರ್ಜುನ ರಣತುಂಗ “ಲಂಕೆಯಲ್ಲಿ ಕ್ರಿಕೆಟನ್ನು ಜೂಜುಕೋರರು ನಡೆಸುತ್ತಿದ್ದಾರೆ; ಹಾಗಾಗಿ ಲಂಕಾ ಕ್ರಿಕೆಟ್ ಇಂದು ವಸ್ತುತಃ ಜೂಜಾಟವಾಗಿದೆ” ಎಂದು ಹೇಳಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಣತುಂಗ, “ಲಂಕೆಯ ಕ್ರಿಕೆಟ್ನಲ್ಲಿ ಈಚಿನ ದಿನಗಳಲ್ಲಿ ಏನಾಗುತ್ತಿದೆಯೋ ಅದನ್ನು ನಾನು ಒಪ್ಪುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಲಂಕಾ ಕ್ರಿಕೆಟ್ ಆಡಳಿತೆ ಅತ್ಯಂತ ಕಳಪೆ ಇದೆ. ಇಲ್ಲಿ ಕ್ರಿಕೆಟನ್ನು ಜೂಜುಕೋರರು ನಡೆಸುತ್ತಿದ್ದಾರೆ. ಹಾಗಾಗಿ ಕ್ರಿಕೆಟ್ ಇಲ್ಲಿ ಜೂಜಾಟವಾಗಿದೆ. ಆದುದರಿಂದ ಲಂಕಾ ಕ್ರಿಕೆಟ್ ವೈಪಲ್ಯಕ್ಕೆ ನೀವು ಕೇವಲ ಆಟಗಾರರನ್ನು ಮಾತ್ರವೇ ದೂರಿ ಪ್ರಯೋಜನವಿಲ್ಲ’ ಎಂದು ರಣತುಂಗ ಹೇಳಿದರು.
ಲಂಕಾ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಇರುವ ಒಬ್ಬನೇ ಒಬ್ಬ ವ್ಯಕ್ತಿಯೂ ಇಲ್ಲ. ಲಂಕೆಯ ಹಿಂದಿನ ಸರಕಾರ ಬಹಳ ದೀರ್ಘ ಕಾಲ ಈ ಬಗೆಯ ಅನುಭವೀ ಆಟಗಾರರನ್ನು ಆಡಳಿತ ಮಂಡಳಿಯಿಂದ ಹೊರಗಿಟ್ಟಿತು. ಏಕೆಂದರೆ ಅವರು ಹಾಲಿ ಸ್ಥಿತಿ ನಿಭಾವಣೆಗೆ ತಕ್ಕುದಾದವರಲ್ಲ ಎಂಬ ಕಾರಣಕ್ಕೆ. ಅಲ್ಲಿಂದಲೇ ಲಂಕಾ ಕ್ರಿಕೆಟ್ನಲ್ಲಿ ತಪ್ಪುಗಳು ಆರಂಭವಾದವು ಎಂದು ರಣತುಂಗ ಕಟುವಾಗಿ ಹೇಳಿದರು.
ಪ್ರವಾಸೀ ಭಾರತ ತಂಡದೆದುರಿನ ಟೆಸ್ಟ್ ಸರಣಿಯನ್ನು ತನ್ನ ಸ್ವಂತ ನೆಲದಲ್ಲಿ ಲಂಕಾ 3-0 ಅಂತರದಲ್ಲಿ ದಯನೀಯವಾಗಿ ಸೋತಿರುವುದು ಹಾಗೂ ಈಗ ಚಾಲ್ತಿಯಲ್ಲಿರುವ ಐದು ಏಕದಿನ ಪಂದ್ಯಗಳ ಸರಣಿಯನ್ನು 4-0 ಅಂತರದಲ್ಲಿ ಸೋತಿರುವುದು ದೇಶದ ಕ್ರಿಕೆಟಿಗೆ ಬಹುದೊಡ್ಡ ಮುಖಭಂಗವಾಗಿದೆ ಎಂಬುದನ್ನು ರಣತುಂಗ ಒಪ್ಪಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’