ರಿಷಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದ ಕ್ರಿಕೆಟಿಗರು
Team Udayavani, Apr 30, 2020, 5:00 PM IST
ಮುಂಬೈ: ಖ್ಯಾತ ಬಾಲಿವುಡ್ ನಟ ರಿಷಿ ಕಪೂರ್ ಅವರು ಇಂದು ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಕಳೆದೆರಡು ವರ್ಷಗಳಿಂದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರು ತನ್ನ 67 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ದಂತಕಥೆಯ ನಿಧನಕ್ಕೆ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇದು ಅವಾಸ್ತವ ಮತ್ತು ನಂಬಲಾಗದದು. ನಿನ್ನೆ ಇರ್ಫಾನ್ ಖಾನ್ ಮತ್ತು ಇಂದು ರಿಷಿ ಕಪೂರ್ ಜಿ. ದಂತಕಥೆಯು ಇಂದು ನಿಧನ ಹೊಂದಿದ್ದಾರೆ ಎಂದರೆ ಇದನ್ನು ಒಪ್ಪಿಕೊಳ್ಳುವುದು ಕಷ್ಟ. ಕುಟುಂಬಕ್ಕೆ ನನ್ನ ಸಂತಾಪಗಳು ಎಂದಿದ್ದಾರೆ.
ತುಂಬಾ ಆಘಾತವಾಯಿತು. ಅವರೊಂದಿಗೆ ಎಂದಿಗೂ ಸಂತಸದ ಕ್ಷಣಗಳನ್ನು ಕಳೆದಿದ್ದೆ ಎಂದು ಕೋಚ್ ರವಿ ಶಾಸ್ತ್ರೀ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶಿಖರ್ ಧವನ್, ರಿಷಿ ಕಪೂರ್ ಜಿ ಅವರ ಹಠಾತ್ ನಿಧನದ ಬಗ್ಗೆ ಕೇಳಿದಾಗ ಆಘಾತವಾಯಿತು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ಥಾನದ ವಾಕರ್ ಯೂನಿಸ್, ವಿಶ್ವ ಚಿತ್ರರಂಗಕ್ಕೆ ಭಯಾನಕ ವಾರ. ನಿಮ್ಮ ನಿಧನದೊಂದಿಗೆ ಒಂದು ಯುಗವು ಕೊನೆಗೊಳ್ಳುತ್ತದೆ ಆದರೆ ನೀವು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತೀರಿ. ಕಪೂರ್ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಎಂದಿದ್ದಾರೆ.