ಸಿಡಿದೆದ್ದ ಧೋನಿ, ತತ್ತರಿಸಿದ ಆರ್‌ಸಿಬಿ


Team Udayavani, Apr 27, 2018, 7:40 AM IST

PTI4_25_2018_000243b.jpg

ಬೆಂಗಳೂರು: ಕ್ರೀಸ್‌ನಲ್ಲಿ ಧೋನಿ ಇದ್ದರೇ ಅದು ಎಷ್ಟೇ ಬೃಹತ್‌ ಮೊತ್ತವಾಗಿದ್ದರೂ ಎದುರಾಳಿಗಳಿಗೆ ಗೆಲುವಿನ ಆಸೆ ಬೇಡ
ಅನ್ನುವುದಕ್ಕೆ ಮತ್ತೂಂದು ಪಂದ್ಯ ಸಾಕ್ಷಿಯಾಯಿತು. ಧೋನಿ ಅಬ್ಬರದಿಂದ ಆರ್‌ಸಿಬಿ ದೊಡ್ಡ ಮೊತ್ತ ದಾಖಲಿಸಿಯೂ 5 ವಿಕೆಟ್‌ನಿಂದ ಸೋಲುವಂತಾಯಿತು.

ಚಿನ್ನಸ್ವಾಮಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಬೆಂಗಳೂರು 20 ಓವರ್‌ಗೆ 8 ವಿಕೆಟ್‌ ಕಳೆದುಕೊಂಡು 205 ರನ್‌ ಬಾರಿಸಿತು. ಈ ದೊಡ್ಡ ಮೊತ್ತದ ಬೆನ್ನುಹತ್ತಿದ ಚೆನ್ನೈ 19.4 ಓವರ್‌ಗೆ 5 ವಿಕೆಟ್‌ ಕಳೆದುಕೊಂಡು 207 ರನ್‌ ಬಾರಿಸಿ ಗೆಲುವು ಸಾಧಿಸಿತು.

ಆರಂಭದಲ್ಲೇ ಚೆನ್ನೈ 4 ಪ್ರಮುಖ ವಿಕೆಟ್‌ಗಳನ್ನು 74 ರನ್‌ಗಳಿಗೆ ಕಳೆದು ಕೊಂಡು ಚಡಪಡಿಸುತ್ತಿತ್ತು. ಆಗ ಒಂದಾದ ಧೋನಿ-ಅಂಬಾಟಿ ರಾಯುಡು ಪರಿಸ್ಥಿತಿಯನ್ನು ಪೂರ್ಣ ಬದಲಿಸಿದರು. ತಮ್ಮ ಬತ್ತ ಳಿಕೆಯಲ್ಲಿನ ಎಲ್ಲ ಹೊಡೆತಗಳನ್ನು ಪ್ರಯೋಗಿಸಿದ ಧೋನಿ (ಹೆಲಿಕಾಪ್ಟರ್‌ ಶಾಟ್‌ ಸೇರಿ) ಪಂದ್ಯವನ್ನೂ ಸಿಕ್ಸರ್‌ನೊಂದಿಗೆ ಮುಗಿಸಿದರು. ಅವರ ಗಳಿಕೆ 34 ಎಸೆತಕ್ಕೆ 70 ರನ್‌.ನಿಜ ಅರ್ಥದಲ್ಲಿ ಪಂದ್ಯವನ್ನು ಆರ್‌ಸಿಬಿಯಿಂದ ದೂರ ಒಯ್ದಿದ್ದೇ ಚೆನ್ನೈ ಬ್ಯಾಟ್ಸ್‌ ಮನ್‌ ಅಂಬಾಟಿ ರಾಯುಡು.

ಅವರು ಒಮ್ಮೆ ಜೀವದಾನ ಕೂಡ ಪಡೆದರು. ಇದಂತೂ ಆರ್‌ಸಿಬಿ ಸೋಲಿನಲ್ಲಿ ನಿರ್ಣಾಯಕ ಪಾತ್ರವಹಿಸಿತು. ಅವರ ಗಳಿಕೆ 53 ಎಸೆತಕ್ಕೆ 82. ಧೋನಿ- ರಾಯುಡು 101 ರನ್‌ ಜೊತೆಯಾಟ ವಾಡಿದರು ಗೆಲುವನ್ನು ಸೆಳೆದುಕೊಂಡರು.

ಎಬಿಡಿ, ಕಾಕ್‌ ಹವಾ: ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಕೊಹ್ಲಿಯನ್ನು ಅಗ್ಗಕ್ಕೆ ಕಳೆದುಕೊಂಡಿತು. ಆಗ ಒಂದಾದ ಡಿಕಾಕ್‌, ಡಿವಿಲಿಯರ್ಸ್‌ ಸ್ಫೋಟಕ ಆಟವಾಡಿದರು. ಈ ಜೋಡಿ 2ನೇ ವಿಕೆಟ್‌ಗೆ 53 ಎಸೆತದಲ್ಲಿ 103 ರನ್‌ ಸೇರಿಸಿತು. ಕಾಕ್‌ ಕೊಡುಗೆ 53, ಡಿವಿಲಿಯರ್ಸ್‌ 68 ರನ್‌ ಬಾರಿಸಿದರು. ಡಿವಿಲಿಯರ್ಸ್‌ ಆಟ ಹೇಗಿತ್ತೆಂದರೆ ಒಮ್ಮೆಯಂತೂ ಅವರ ಹೊಡೆತಕ್ಕೆ ಸಿಕ್ಕಿದ ಚೆಂಡು ಮೈದಾನದಿಂದ ಹೊರ ಹಾರಿತ್ತು. 

ಪಂದ್ಯದ ತಿರುವು
ಪಂದ್ಯ ಎರಡು ಹಂತದಲ್ಲಿ ಆರ್‌ಸಿಬಿ ಕೈತಪ್ಪಿತು. ಚೆನ್ನೈ ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಚೆನ್ನೈ 3 ಸಿಕ್ಸರ್‌ ಬಾರಿಸಿತು. ಆಗ ಅದರ ಮೊತ್ತ ದಿಢೀರ್‌ ಏರಿ ಆತ್ಮವಿಶ್ವಾಸ ಗಳಿಸಿಕೊಂಡಿತು. 15.3ನೇ ಓವರ್‌ನಲ್ಲಿ ಅಂಬಾಟಿ ರಾಯುಡು ನೀಡಿದ ಸುಲಭ ಕ್ಯಾಚನ್ನು ಉಮೇಶ್‌ ಯಾದವ್‌ ಕೈಚೆಲ್ಲಿದರು. ಇದು ಆರ್‌ಸಿಬಿ ಸೋಲನ್ನು ಬಹುತೇಕ ಖಚಿತಪಡಿಸಿತು.

– ಮಂಜು ಮಳಗುಳಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.