ಭಾರತೀಯ ಕುಸ್ತಿಪಟುಗಳ ಸಾಧನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ಮೋದಿ ಅಭಿನಂದನೆ
Team Udayavani, Aug 6, 2022, 11:36 PM IST
ಹೊಸದಿಲ್ಲಿ: ಸದ್ಯ ಸಾಗುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ ಕುಸ್ತಿ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟುಗಳ ಸಾಧನೆಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕುಸ್ತಿಪಟುಗಳ ಸಾಧನೆಯು ದೇಶಕ್ಕೆ ಹೆಚ್ಚಿನ ಸಂತೋಷ ಮತ್ತು ವೈಭವವನ್ನು ತಂದಿದೆ ಎಂದವರು ಟ್ವೀಟ್ ಮಾಡಿದ್ದಾರೆ. ಪದಕ ಗೆದ್ದ ಯುವ ಕುಸ್ತಿಪಟು ದೀಪಕ್ ಪೂನಿಯಾ, ದಿವ್ಯಾ, ಕಕ್ರಾನ್ ಮತ್ತು ಮೋಹಿತ್ ಗ್ರೆವಾಲ್ ಅವರಿಗೆ ಅಭಿನಂದನೆಗಳು. ನಿಮ್ಮೆಲ್ಲರ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಸ್ಪಂದನೆಯು ವೀಕ್ಷಿಸಲು ಆಕರ್ಷಕವಾಗಿತ್ತು. ನಿಮ್ಮಂತಹ ಯುವ ಕುಸ್ತಿಪಟುಗಳು ಭಾರತೀಯ ಕ್ರೀಡೆಯ ಭವಿಷ್ಯದ ಭರವಸೆಯನ್ನು ತುಂಬಿಲಿದ್ದೀರಿ ಎಂದು ತಿಳಿಸಿದ್ದಾರೆ.
ಅದ್ಭುತ ಪ್ರದರ್ಶನ
“ನಮ್ಮ ಕುಸ್ತಿಪಟುಗಳು ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.ಈ ಮೂಲಕ ಪದಕಗಳ ಪಟ್ಟಿಗೆ ಸೇರಿದ್ದಾರೆ. ಪದಕ ಗೆದ್ದವರೆಲ್ಲ ಮುಂಬರುವ ದಿನಗಳಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.