ಗಾಲ್ಫ್ ಕ್ಲಬ್‌ಗಳಿಗೆ 100 ಕೋಟಿ ರೂ. ನಷ್ಟ ; ಸ್ಪರ್ಧೆಗಳು ರದ್ದು

ಕ್ಯಾಡಿಗಳ ಸಂಕಟ, ದಿನದಿನದ ಪಾವತಿಯೂ ರದ್ದು, ಜೀವನ ಕಷ್ಟ?

Team Udayavani, Apr 15, 2020, 6:35 AM IST

ಗಾಲ್ಫ್ ಕ್ಲಬ್‌ಗಳಿಗೆ 100 ಕೋಟಿ ರೂ. ನಷ್ಟ ; ಸ್ಪರ್ಧೆಗಳು ರದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ಗಾಲ್ಫ್ ಅಂಕಣಗಳಲ್ಲಿ ಸಿಗುತ್ತಿದ್ದ ದಿನನಿತ್ಯದ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಯಾಡಿಗಳ (ಕೆಲಸಗಾರರು) ಬದುಕು ದುರ್ಬರವಾಗಿದೆ. ಆದರೆ ಸಂಕಷ್ಟವಿರುವುದು ಬರೀ ಕ್ಯಾಡಿಗಳಿಗೆ ಮಾತ್ರವಲ್ಲ, ಗಾಲ್ಫ್ ಕೂಟವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಲಬ್‌ಗಳಿಗೂ ದುಃಸ್ಥಿತಿ ಎದುರಾಗಿದೆ. ಗಾಲ್ಫ್ ಕೂಟಗಳು ರದ್ದಾಗಿರುವುದು, ಮುಂದೂಡಿಕೆಯಾಗಿರುವುದು ಸೇರಿದರೆ 100 ಕೋಟಿ ರೂ. ನಷ್ಟವಾಗಿದೆ ಎಂದು ಭಾರತ ಗಾಲ್ಫ್ ಕ್ಲಬ್‌ಗಳ ಅಧ್ಯಕ್ಷ (ಜಿಐಎ) ರಿಷಿ ನಾರಾಯಣನ್‌ ತಿಳಿಸಿದ್ದಾರೆ.

ದೇಶದಲ್ಲಿ 240ಕ್ಕೂ ಅಧಿಕ ಗಾಲ್ಫ್ ಕ್ಲಬ್‌ಗಳಿವೆ. ಕಳೆದ ವರ್ಷ ಆರ್ಥಿಕ ಕುಸಿತದಿಂದ ಈ ಕ್ಲಬ್‌ಗಳು ನಷ್ಟ ಅನುಭವಿಸಿದ್ದವು. ಕಂಪೆನಿಗಳು ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದವು. ಕೆಲವು ಕೂಟಗಳೇ ನಿಂತು ಹೋಗಿದ್ದವು. ಈ ಬಾರಿ ಕೋವಿಡ್ 19 ವೈರಸ್ ದಾಳಿಯಾದ ಮೇಲೆ, ಸಂಪೂರ್ಣ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. 4 ಪಿಜಿಟಿಐ (ಪ್ರೊಫೆಶನಲ್‌ ಗಾಲ್ಫ್ ಟೂರ್‌ ಆಫ್ ಇಂಡಿಯಾ) ಕೂಟಗಳು ರದ್ದಾಗಿವೆ, ಇನ್ನು 5-6 ಕೂಟಗಳು ಮುಂದೂಡಿಕೆಯಾಗಿವೆ. ಐಜಿಯು (ಇಂಡಿಯನ್‌ ಗಾಲ್ಫ್ ಯೂನಿಯನ್‌) ಕೂಟಗಳದ್ದೂ ಇದೇ ಕಥೆ.
ಹೀಗಾಗಿ ಕ್ಲಬ್‌ಗಳಿಗೆ ಬರಬೇಕಾಗಿದ್ದ ಪ್ರವೇಶ ಶುಲ್ಕ, ಆತಿಥೇಯತ್ವ ಶುಲ್ಕ, ಆಹಾರ-ಪಾನೀಯ-ಸಾಧನಗಳ ಶುಲ್ಕ ಹೀಗೆ ಕ್ಲಬ್‌ಗಳು ಸಿಕ್ಕಾಪಟ್ಟೆ ಕಳೆದುಕೊಳ್ಳುತ್ತಿವೆ. ಇದರಿಂದ ಕ್ಲಬ್ಬನ್ನೇ ನಂಬಿಕೊಂಡಿದ್ದ ವ್ಯಕ್ತಿಗಳನ್ನು ಸಾಕುವುದು ಕಷ್ಟವಾಗಿದೆ.

ಗಾಲ್ಫ್ ಅಂಕಣದ ಕ್ಯಾಡಿಗಳ ಸಂಕಟ
ಸದ್ಯದ ದಿಗ್ಬಂಧನ ಎಲ್ಲರನ್ನೂ ಕಾಡುತ್ತಿದೆ. ಬಹುಶಃ ಪರಿಸ್ಥಿತಿ ಸುಧಾರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಕಷ್ಟದ ದಿನಗಳು ಕಾದಿರಬಹುದು. ಆದರೆ ದೇಶದ ಗಾಲ್ಫ್ ಅಂಕಣಗಳಲ್ಲಿ, ದಿನದಿನದ ಪಾವತಿಯನ್ನೇ ನಂಬಿಕೊಂಡು ಕೆಲಸ ಮಾಡುವ ಕೆಲಸಗಾರರ ಪರಿಸ್ಥಿತಿ ಈಗಾಗಲೇ ಪಾತಾಳಕ್ಕೆ ಮುಟ್ಟಿದೆ. ಅವರನ್ನೆಲ್ಲ ಕ್ಯಾಡಿಗಳೆಂದು ಕರೆಯಲಾಗುತ್ತದೆ.

ಅವರು ಮನೆ ಬಾಡಿಗೆ ಕಟ್ಟಬೇಕು, ಸಂಸಾರ ಸಾಗಿಸಬೇಕು. ಅವೆಲ್ಲವನ್ನೂ ದಿನದಿನದ ಹಣ ನಂಬಿಕೊಂಡೇ ಮಾಡಬೇಕು. ಈಗ ದೇಶದ ಗಾಲ್ಫ್ ಕ್ಲಬ್‌ಗಳೆಲ್ಲ ಬಾಗಿಲು ಹಾಕಿರುವುದರಿಂದ ಅವರೆಲ್ಲ ಏನು ಮಾಡಬೇಕು?
ರಾಜಧಾನಿ ದಿಲ್ಲಿಯಲ್ಲೇ 2,500ರಿಂದ 3,000 ಕ್ಯಾಡಿಗಳು ಕೆಲಸ ಮಾಡುತ್ತಿದ್ದಾರೆ.

ಅದರಲ್ಲಿ ಎಲ್ಲೋ 100, 200 ಮಂದಿಯನ್ನು ಬಿಟ್ಟರೆ ಉಳಿದವರು ಪೂರ್ಣಕಾಲಿಕವಾಗಿ ಈ ಸಂಪಾದನೆಯನ್ನೇ ನಂಬಿಕೊಂಡವರು. ಇಡೀ ದೇಶದಲ್ಲಿ ಶೇ.95ರಷ್ಟು ಮಂದಿ ಕ್ಯಾಡಿಗಳು ಈಗ ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಐದರಷ್ಟು ಮಂದಿ ತಿಂಗಳಿಗೆ 20ರಿಂದ 25,000 ದುಡಿಯುತ್ತಿದ್ದವರು ಪರವಾಗಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ!

ಏಷ್ಯಾ ಟೂರ್‌ ವಿಜೇತ, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಎಲ್ಲ ಸಂಭಾವ್ಯತೆ ಹೊಂದಿರುವ ರಶೀದ್‌ ಖಾನ್‌ ಅವರೇ ಇದನ್ನು ಖಚಿತಪಡಿಸಿದ್ದಾರೆ. ಸ್ವತಃ ಅವರ ಕ್ಯಾಡಿ, ಸ್ವಲ್ಪ ಹಣಕಾಸಿನ ನೆರವು ನೀಡಿ ಎಂದು ಮನವಿ ಮಾಡಿದ್ದಾರಂತೆ.

ಕ್ಯಾಡಿಗಳು ಅಂದರೇನು?
ಇವರು ಗಾಲ್ಫರ್‌ಗಳ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ ಅದರಂತೆ ಆಟಗಾರರ ಬ್ಯಾಗ್‌ಗಳನ್ನು ಹೊತ್ತುಕೊಂಡು ಅವರ ಹಿಂದೆ ಹೋಗುತ್ತಾರೆ. ಮತ್ತು ಸ್ಪರ್ಧೆಗಳು ನಡೆಯುವಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ಗಾಲ್ಫರ್‌ಗಳಿಗೆ ಮಾಹಿತಿ ನೀಡುತ್ತಾರೆ. ಒಂದರ್ಥದಲ್ಲಿ ಕ್ಯಾಡಿಗಳು ಗಾಲ್ಫರ್‌ಗಳಿಗೆ ಕೋಚ್‌ಗಳಾಗಿ ಸಹಕರಿಸುತ್ತಾರೆ.

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.