ನಿಷೇಧ ತೆರವಿಗೆ ಮನವಿ ಸಲ್ಲಿಸಿದ ದಾನಿಶ್ ಕನೇರಿಯ
Team Udayavani, Jun 16, 2020, 4:41 AM IST
ಕರಾಚಿ: ತನ್ನ ಮೇಲೆ ಹೇರಲಾಗಿ ರುವ ಆಜೀವ ಕ್ರಿಕೆಟ್ ನಿಷೇಧವನ್ನು ತೆರವು ಗೊಳಿಸಿ ದೇಶಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಲು ಅವಕಾಶ ನೀಡಬೇಕೆಂದು ಪಾಕಿಸ್ಥಾನದ ಸ್ಪಿನ್ನರ್ ದಾನಿಶ್ ಕನೇರಿಯ ಪಿಸಿಬಿಗೆ ಮನವಿ ಸಲ್ಲಿಸಿದ್ದಾರೆ.
“ನನಗೆ ದೇಶಿ ಕ್ರಿಕೆಟ್ ಕೂಟಗಳಲ್ಲಿ ಆಡಬೇಕೆಂಬ ಆಸೆ ಇದೆ. ನನ್ನ ಮೇಲಿನ ನಿಷೇಧ ವನ್ನು ಹಿಂದಕ್ಕೆ ಪಡೆದು, ಇದಕ್ಕೆ ಅವಕಾಶ ಮಾಡಿ ಕೊಡಬೇಕು’ ಎಂದು ಪಿಸಿಬಿ ಅಧ್ಯಕ್ಷ ಎಹಸಾನ್ ಮಣಿ ಅವರಿಗೆ ಕನೇರಿಯ ಪತ್ರ ಬರೆದಿದ್ದಾರೆ.
2012ರ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದು ಸಾಬೀತಾದ ಕಾರಣ ದಾನಿಶ್ ಕನೇರಿಯ ಅವರಿಗೆ ಪಿಸಿಬಿ ಆಜೀವ ಕ್ರಿಕೆಟ್ ನಿಷೇಧ ವಿಧಿಸಿತ್ತು.
ಪಾಕಿಸ್ಥಾನವನ್ನು ಪ್ರತಿನಿಧಿಸಿದ ಕೇವಲ ಎರಡನೇ ಹಿಂದೂ ಕ್ರಿಕೆಟಿಗನಾಗಿರುವ ದಾನಿಶ್ ಕನೇರಿಯ, 61 ಟೆಸ್ಟ್ಗಳಿಂದ 261 ವಿಕೆಟ್ ಉರುಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್