ಡೇವಿಸ್ ಕಪ್: ಆಡುವ ಬಳಗದಲ್ಲಿ ಪೇಸ್
Team Udayavani, Feb 26, 2020, 12:37 AM IST
ಹೊಸದಿಲ್ಲಿ: ಹಿರಿಯ ಟೆನಿಸಿಗ ಲಿಯಾಂಡರ್ ಪೇಸ್ ಅವರನ್ನು ಡೇವಿಸ್ ಕಪ್ ಸರಣಿಗಾಗಿ ಭಾರತ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕ್ರೊವೇಶಿಯಾ ವಿರುದ್ಧ ಅವರದೇ ಅಂಗಳದಲ್ಲಿ ಮಾ. 6-7ರಂದು ಆಡಲಾಗುವ ಪಂದ್ಯಾವಳಿಗಾಗಿ ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ ಆಯ್ಕೆ ಸಮಿತಿ (ಎಐಟಿಎ) 5 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ದಿವಿಜ್ ಶರಣ್ ಮೀಸಲು ಆಟಗಾರನಾಗಿದ್ದಾರೆ.
ತಂಡದ ಉಳಿದ ಸದಸ್ಯರೆಂದರೆ ಸುಮಿತ್ ನಾಗಲ್, ಪ್ರಜ್ಞೆàಶ್ ಗುಣೇಶ್ವರನ್, ರಾಮ್ಕುಮಾರ್ ರಾಮನಾಥನ್ (ಸಿಂಗಲ್ಸ್) ಮತ್ತು ರೋಹನ್ ಬೋಪಣ್ಣ (ಡಬಲ್ಸ್). ರೋಹಿತ್ ರಾಜ್ಪಾಲ್ “ಆಡದ ನಾಯಕ’ರಾಗಿರುತ್ತಾರೆ. ಬೋಪಣ್ಣ ಗಾಯಾಳಾದ ಕಾರಣ ಪಾಕಿಸ್ಥಾನ ವಿರುದ್ಧದ ಡೇವಿಸ್ ಕಪ್ ಸ್ಪರ್ಧೆಯಿಂದ ಹೊರಗುಳಿದಿದ್ದರು. ದಿವಿಜ್ ಶರಣ್ ಮದುವೆಯ ಸಂಭ್ರಮದಲ್ಲಿದ್ದರು.
ಎಐಟಿಎ ಅಂತಿಮ ತಂಡವನ್ನು ಮಂಗಳವಾರದ ಒಳಗಾಗಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್ಗೆ (ಐಟಿಎಫ್) ಕಳುಹಿಸಿಕೊಡಬೇಕಿತ್ತು.
ಎರಡನೇ ಮುಖಾಮುಖೀ
24 ತಂಡಗಳ ಅರ್ಹತಾ ಸುತ್ತಿನಲ್ಲಿ ಕ್ರೊವೇಶಿಯಾ ಅಗ್ರಮಾನ್ಯ ತಂಡವಾಗಿದೆ. ಬೋರ್ನ ಕೋರಿಕ್, ಮರಿನ್ ಸಿಲಿಕ್ ಸ್ಟಾರ್ ಆಟಗಾರರಾಗಿದ್ದಾರೆ.
ಡೇವಿಸ್ ಕಪ್ನಲ್ಲಿ ಭಾರತ-ಕ್ರೊವೇಶಿಯಾ ಮುಖಾಮುಖೀ ಆಗುತ್ತಿರುವುದು ಇದು 2ನೇ ಸಲ. 1995ರ ಹೊಸದಿಲ್ಲಿ ಸ್ಪರ್ಧೆಯಲ್ಲಿ ಭಾರತ 3-2 ಅಂತರದ ಗೆಲುವು ಸಾಧಿಸಿತ್ತು. ಅಂದು ಪೇಸ್ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳೆರಡರಲ್ಲೂ ಜಯ ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
MUST WATCH
ಹೊಸ ಸೇರ್ಪಡೆ
PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ