ನೂರ್‌ ಸುಲ್ತಾನ್‌ನಲ್ಲಿ ಡೇವಿಸ್‌ ಕಪ್‌ ಸೆಣಸಾಟ


Team Udayavani, Nov 20, 2019, 12:01 AM IST

devis-cup

ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ ನಡುವಣ ಮುಂಬರುವ ಡೇವಿಸ್‌ ಕಪ್‌ ಹೋರಾಟವು ತಟಸ್ಥ ತಾಣವಾದ ಕಜಾಕ್‌ಸ್ಥಾನದ ರಾಜಧಾನಿ ನೂರ್‌ ಸುಲ್ತಾನ್‌ನಲ್ಲಿ ನಡೆಯಲಿದೆ ಎಂದು ಪ್ರಕಟಿಸಿದೆ.

ತಟಸ್ಥ ತಾಣಕ್ಕೆ ಸ್ಥಳಾಂತರಿಸಬೇಕೆಂಬ ಐಟಿಎಫ್ ಡೇವಿಸ್‌ ಕಪ್‌ ಸಮಿತಿಯ ನಿರ್ಧಾರವನ್ನು ಪರಿಶೀಲಿಸಬೇಕೆಂದು ಪಾಕಿಸ್ಥಾನ ಟೆನಿಸ್‌ ಫೆಡರೇಶನ್‌ (ಪಿಟಿಎಫ್) ಮೇಲ್ಮನವಿ ಸಲ್ಲಿಸಿತ್ತು. ಒಂದು ವೇಳೆ ಭಾರತೀಯ ಪ್ರವಾಸಿಗರು ಯಾವುದೇ ಭದ್ರತಾ ಭಯವಿಲ್ಲದೇ ಪಾಕಿಸ್ಥಾನಕ್ಕೆ ಭೇಟಿ ನೀಡಬಹುದಾದರೆ ಭಾರತೀಯ ಟೆನಿಸ್‌ ತಂಡಕ್ಕೆ ಇಸ್ಲಾಮಾಬಾದ್‌ನಲ್ಲಿ ಯಾಕೆ ಪಂದ್ಯ ಆಡಲು ಸಾಧ್ಯವಿಲ್ಲವೆಂದು ಪಿಟಿಎಫ್ ವಾದಿಸಿತ್ತು. ಆದರೆ ವಿಶ್ವ ಮಂಡಳಿಯ ಸ್ವತಂತ್ರ ಸಮಿತಿ ಪಿಟಿಎಫ್ ಮನವಿಯನ್ನು ನ. 18ರಂದು ತಿರಸ್ಕರಿಸಿತ್ತು.

ಡೇವಿಸ್‌ ಕಪ್‌ ನಿಯಮದಂತೆ ತಟಸ್ಥ ತಾಣವನ್ನು ಆಯ್ಕೆ ಮಾಡಬಾರದೆಂಬ ಪಿಟಿಎಫ್ ಮನವಿಯನ್ನು ಕೂಡ ಸಮಿತಿ ತಳ್ಳಿಹಾಕಿದೆ. ಬದಲಾಗಿ ತಟಸ್ಥ ತಾಣವಾದ ಕಜಾಕ್‌ಸ್ಥಾನದ ನೂರ್‌ ಸುಲ್ತಾನ್‌ (ಹಿಂದೆ ಅಸ್ತಾನಾ)ನಲ್ಲಿ ಡೇವಿಸ್‌ ಕಪ್‌ ಹೋರಾಟವು ನ. 29 ಮತ್ತು 30ರಂದು ನಡೆಯಲಿದೆ ಎಂದು ಪ್ರಕಟಿಸಿದೆ. ಹೊರಗಡೆ ಭಾರೀ ಚಳಿಯ ವಾತಾವರಣವಿರುವ ಕಾರಣ ಪಂದ್ಯಗಳು ಒಳಾಂಗಣ ಅಂಗಣದಲ್ಲಿ ನಡೆಯಲಿವೆ.

ಆಟಗಾರರಿಗೆ ಪ್ರಯೋಜನ
ಒಳಾಂಗಣದಲ್ಲಿ ಆಡುವ ಕಾರಣ ನಮ್ಮ ಆಟಗಾರರಿಗೆ ಪ್ರಯೋಜನವಾಗಲಿದೆ. ನಮ್ಮ ಆಟಗಾರರಿಗೆ ಇದರಿಂದ ಲಾಭವಾಗಲಿದೆ. ಇದರರ್ಥ ನಮ್ಮ ಆಟಗಾರರು ಹುಲ್ಲುಹಾಸು ಅಂಗಣದಲ್ಲಿ ಚೆನ್ನಾಗಿ ಆಡುವುದಿಲ್ಲ ಎಂದಲ್ಲ. ಆದರೆ ಹಾರ್ಡ್‌ ಕೋರ್ಟ್‌ ಅಂಗಣದಲ್ಲಿ ಆಟಗಾರರು ಆರಾಮವಾಗಿ ಆಡಬಲ್ಲರು. ಹವಾಮಾನ ಪರಿಸ್ಥಿತಿ ಕಠಿನವಾಗಿದೆ. ನಾವು ಒಳಾಂಗಣದಲ್ಲಿ ಆಡಲಿದ್ದರೂ ಚಳಿಯ ವಾತಾವರಣ ನಮ್ಮ ದೇಹಕ್ಕೆ ತೊಂದರೆ ನೀಡುತ್ತದೆ ಎಂದು ಭಾರತೀಯ ತಂಡದ ಕೋಚ್‌ ಜೀಶನ್‌ ಅಲಿ ಹೇಳಿದ್ದಾರೆ.

ಪರಿಪೂರ್ಣ ತಂಡ: ಇಸ್ಲಾಮಾಬಾದ್‌ನಲ್ಲಿ ಪ್ರಯಾಣಿಸಲು ನಿರಾಕರಿಸಿದ ಭಾರತೀಯ ಅಗ್ರ ಆಟಗಾರರೆಲ್ಲ ತಟಸ್ಥ ತಾಣದಲ್ಲಿ ಆಡಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಈ ಹೋರಾಟಕ್ಕಾಗಿ ಪರಿಪೂರ್ಣ ತಂಡವನ್ನು ಪ್ರಕಟಿಸಿದೆ. ಸಮಿತ್‌ ನಗಲ್‌ ಮತ್ತು ರಾಮ್‌ಕುಮಾರ್‌ ರಾಮನಾಥನ್‌ ಅವರು ಸಿಂಗಲ್ಸ್‌ ನಲ್ಲಿ ಆಡಲಿದ್ದರೆ ಲಿಯಾಂಡರ್‌ ಪೇಸ್‌ ಮತ್ತು ಜೀವನ್‌ ನೆಡುಂಚಿಜಿಯಾನ್‌ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಭುಜದ ಗಾಯದಿಂದಾಗಿ ಅಗ್ರ ಕ್ರಮಾಂಕದ ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ ಸೋಮವಾರ ಡೇವಿಸ್‌ ಕಪ್‌ನಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು.

ಪಾಕಿಸ್ಥಾನ ತಂಡವನ್ನು ಗಮನಿಸಿದರೆ ಭಾರತವೇ ಬಲಿಷ್ಠ ತಂಡವಾಗಿ ಕಾಣುತ್ತಿದೆ. ಪಾಕಿಸ್ಥಾನವನ್ನು ಎದುರಿಸಲು ಏನೂ ಕಷ್ಟವಾಗಲಿಕ್ಕಿಲ್ಲ. ಆದರೆ ಡೇವಿಸ್‌ ಕಪ್‌ನಲ್ಲಿ ಏನು ಬೇಕಾದರೂ ನಡೆಯಬಹುದು. ಹಾಗಾಗಿ ಪಾಕ್‌ ಆಟಗಾರರನ್ನು ಹಗುರವಾಗಿ ಕಾಣಲು ಸಾಧ್ಯವಿಲ್ಲ ಎಂದು ಜೀಶನ್‌ ತಿಳಿಸಿದರು.

ಹಿಂದೆ ಸರಿಯುವೆ: ಕುರೇಶಿ
ಒಂದು ವೇಳೆ ಹೋರಾಟದ ತಾಣವನ್ನು ಸ್ಥಳಾಂತರಿಸಿದರೆ ಕೂಟದಿಂದ ಹಿಂದೆ ಸರಿಯುವುದಾಗಿ ಪಾಕಿಸ್ಥಾನದ ಪ್ರಮುಖ ಆಟಗಾರ ಐಸಮ್‌ ಉಲ್‌ ಹಕ್‌ ಕುರೇಶಿ ಬೆದರಿಕೆ ಹಾಕಿದ್ದಾರೆ. ಇದರಿಂದ ಪಾಕಿಸ್ಥಾನ ತಂಡ ಇನ್ನಷ್ಟು ದುರ್ಬಲಗೊಳ್ಳಲಿದೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.