ಪಾಕ್‌ ವಿರುದ್ಧ 4-0 ಪರಾಕ್ರಮ

2020ರ ಕ್ವಾಲಿಫೈಯರ್ ಸುತ್ತಿಗೆ ತೇರ್ಗಡೆಯಾದ ಭಾರತ ; ಡಬಲ್ಸ್‌ ಗೆಲುವಿನ ದಾಖಲೆಯನ್ನು 44ಕ್ಕೆ ವಿಸ್ತರಿಸಿದ ಪೇಸ್‌

Team Udayavani, Dec 1, 2019, 5:18 AM IST

TENNIS

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ಪಾಕಿಸ್ಥಾನವನ್ನು 4-0 ಅಂತರದಿಂದ ಬಗ್ಗುಬಡಿದ ಭಾರತ, ಮುಂದಿನ ವರ್ಷದ ಡೇವಿಸ್‌ ಕಪ್‌ ಟೆನಿಸ್‌ ಕ್ವಾಲಿಫೈಯರ್ ಸುತ್ತಿಗೆ ತೇರ್ಗಡೆಯಾಗಿದೆ.ಪಾಕಿಸ್ಥಾನ,

ತಟಸ್ಥ ತಾಣ ನುರ್‌ ಸುಲ್ತಾನಲ್ಲಿ ನಡೆದ ಮೊದಲ ದಿನದ ಎರಡೂ ಸಿಂಗಲ್ಸ್‌ ಪಂದ್ಯಗಳನ್ನು ಜಯಿಸಿದ್ದ ಭಾರತ, ಶನಿವಾರದ ಡಬಲ್ಸ್‌ ಮತ್ತು ರಿವರ್ ಸಿಂಗಲ್‌ ಪಂದ್ಯಗಳಲ್ಲೂ ಸುಲಭ ಗೆಲುವು ಸಾಧಿಸಿತು. ಭಾರತವಿನ್ನು ಮುಂದಿನ ಮಾರ್ಚ್‌ನಲ್ಲಿ ವಿಶ್ವದ ನಂ.2 ತಂಡವಾದ ಕ್ರೊವೇಶಿಯಾವನ್ನು ಎದುರಿಸಲಿದೆ.

ಡಬಲ್ಸ್‌ ಪಂದ್ಯದಲ್ಲಿ ಅನುಭವಿ ಲಿಯಾಂಡರ್‌ ಪೇಸ್‌ ಮತ್ತು ಇದೇ ಮೊದಲ ಸಲ ಡೇವಿಸ್‌ ಕಪ್‌ ಆಡಲಿಳಿದ ಜೀವನ್‌ ನೆಡುಂಚೆಜಿಯನ್‌ ಸೇರಿಕೊಂಡು ಪಾಕಿಸ್ಥಾನದ ಯುವ ಆಟಗಾರರಾದ ಮೊಹಮ್ಮದ್‌ ಶೋಯಿಬ್‌-ಹುಫೈಜ ಅಬ್ದುಲ್‌ ರೆಹಮಾನ್‌ ಅವರನ್ನು 6-1, 6-3 ಅಂತರದಿಂದ ಮಣಿಸಿದರು. ಈ ಪಂದ್ಯ 63 ನಿಮಿಷಗಳಲ್ಲಿ ಮುಗಿಯಿತು. ರಿವರ್ ಸಿಂಗಲ್ಸ್‌ನಲ್ಲಿ ಸುಮಿತ್‌ ನಾಗಲ್‌ 6-1, 6-0 ಅಂತರದಿಂದ ಯೂಸುಫ್ ಖಲೀಲ್‌ ಅವರಿಗೆ ಸೋಲುಣಿಸಿದರು.

ಇದರೊಂದಿಗೆ ಭಾರತ 2014ರ ಬಳಿಕ ಡೇವಿಸ್‌ ಕಪ್‌ ಕೂಟದ ಎಲ್ಲ ಪಂದ್ಯಗಳನ್ನು ಜಯಿಸಿದ ಸಾಧನೆಗೈದಿತು. ಅಂದು ಚೈನೀಸ್‌ ತೈಪೆಯನ್ನು 5-0 ಅಂತರದಿಂದ ವೈಟ್‌ವಾಶ್‌ ಮಾಡಿತ್ತು.

ಲಿಯಾಂಡರ್‌ ಪೇಸ್‌ 44 ಗೆಲುವು
ಈ ಜಯದೊಂದಿಗೆ ಲಿಯಾಂಡರ್‌ ಡೇವಿಸ್‌ ಕಪ್‌ ಕೂಟದ ತಮ್ಮ ಸರ್ವಾಧಿಕ ಗೆಲುವಿನ ದಾಖಲೆಯನ್ನು 44 ಪಂದ್ಯ ಗಳಿಗೆ ವಿಸ್ತರಿಸಿದರು. ಕಳೆದ ವರ್ಷ ಅವರು 43ನೇ ಗೆಲುವು ಸಾಧಿಸಿದಾಗ ಇಟಲಿಯ ಖ್ಯಾತ ಟೆನಿಸಿಗ ನಿಕೋಲ ಪೀಟ್ರಾಂಜೆಲಿ ದಾಖಲೆಯನ್ನು ಮುರಿದು ಮುನ್ನುಗ್ಗಿದ್ದರು. 43 ಗೆಲುವಿಗಾಗಿ ಪೇಸ್‌ 56 ಪಂದ್ಯಗಳ ನ್ನಾಡಿದ್ದರೆ, ಪೀಟ್ರಾಂಜೆಲಿ 42 ಗೆಲುವಿಗೆ 66 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.

“ಇದು ನನ್ನ 44ನೇ ಡಬಲ್ಸ್‌ ಗೆಲುವು. ಆದರೆ ಮೊದಲ ಗೆಲುವಿನಂತೆ ಭಾಸವಾ ಗುತ್ತದೆ. ನನ್ನ ಪಾಲಿಗೆ ಎಲ್ಲ ಗೆಲುವುಗಳೂ ವಿಶೇಷವೇ. ನನ್ನಿಂದ ಭಾರತ ಡೇವಿಸ್‌ ಕಪ್‌ ದಾಖಲೆ ಪುಟಗಳನ್ನು ಅಲಂಕರಿಸಿದ್ದಕ್ಕೆ ಬಹಳ ಖುಷಿಯಾಗುತ್ತಿದೆ’ ಎಂದು 18 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯ ಲಿಯಾಂಡರ್‌ ಪೇಸ್‌ ಪ್ರತಿಕ್ರಿಯಿಸಿದ್ದಾರೆ.

ದಾಖಲೆಗೆ ಗಂಡಾಂತರವಿಲ್ಲ
ಸದ್ಯ ಲಿಯಾಂಡರ್‌ ಪೇಸ್‌ ಅವರ ಅತ್ಯಧಿಕ ಗೆಲುವಿನ ದಾಖಲೆಯನ್ನು ಮುರಿಯುವ ಯಾವ ಆಟಗಾರನೂ ಕಾಣಿಸುತ್ತಿಲ್ಲ. ಸಮಕಾಲೀನ ಟೆನಿಸ್‌ನಲ್ಲಿ ಅತ್ಯಧಿಕ ಡೇವಿಸ್‌ ಕಪ್‌ ಪಂದ್ಯಗಳನ್ನು ಗೆದ್ದ ಡಬಲ್ಸ್‌ ಆಟಗಾರರ ಟಾಪ್‌-10 ಯಾದಿಯಲ್ಲಿ ಯಾರೂ ಇಲ್ಲ. ಬೆಲರೂಸ್‌ನ ಮ್ಯಾಕ್ಸ್‌ ಮಿರ್ನಿ 36 ಗೆಲುವು ಸಾಧಿಸಿದರೂ 2018ರ ಬಳಿಕ ಯಾವುದೇ ಕೂಟದಲ್ಲಿ ಆಡಿಲ್ಲ.

ಡೇವಿಸ್‌ ಕಪ್‌ ಸೇರಿದಂತೆ ಲಿಯಾಂಡರ್‌ ಪೇಸ್‌ ಒಟ್ಟು 92-35 ಗೆಲುವು- ಸೋಲಿನ ದಾಖಲೆಯೊಂದಿಗೆ 5ನೇ ಸ್ಥಾನಿಯಾಗಿದ್ದಾರೆ. ಇದರಲ್ಲಿ 48 ಸಿಂಗಲ್ಸ್‌ ಗೆಲುವು ಕೂಡ ಸೇರಿದೆ. ಇನ್ನೊಂದು ಪಂದ್ಯ ಗೆದ್ದರೆ ಸ್ಪೇನಿನ ಮ್ಯಾನುಯೆಲ್‌ ಸಂಟಾನ (92-18) ಅವರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಲಿದ್ದಾರೆ.

ಈ ಗೆಲುವನ್ನು ಭಾರತೀಯ ಸೇನೆಗೆ ಹಾಗೂ ಗಡಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ಅರ್ಪಿಸುತ್ತಿದ್ದೇವೆ.
-ರೋಹಿತ್‌ ರಾಜ್‌ಪಾಲ್‌,ನಾಯಕ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.