ಡೇವಿಸ್‌ ಕಪ್‌ ಟೆನಿಸ್‌: ವಿಶ್ವ ಫೈನಲ್‌ಗೆ ಇಟಲಿ


Team Udayavani, Feb 3, 2019, 12:30 AM IST

pti222019000138b.jpg

ಕೋಲ್ಕತಾ: ಡೇವಿಸ್‌ ಕಪ್‌ನಲ್ಲಿ ಬಲಿಷ್ಠ ಇಟಲಿ ವಿರುದ್ಧ ಆತಿಥೇಯ ಭಾರತ ತಂಡ 3-1 ಅಂತರದಿಂದ ಸೋತಿದೆ. ಜಯದೊಂದಿಗೆ ವಿಶ್ವ 10ನೇ ಶ್ರೇಯಾಂಕಿತ ಇಟಲಿ ಇದೇ ಮೊದಲ ಸಲ ಡೇವಿಸ್‌ ಕಪ್‌ ವಿಶ್ವ ಫೈನಲ್‌ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಸೋತ ಭಾರತೀಯರು ಮುಂದಿನ ವರ್ಷ ನಡೆಯಲಿರುವ ‘ವಲಯ ಗುಂಪಿ’ಗೆ ಜಾರಿದರು.

ಡಬಲ್ಸ್‌ ಗೆದ್ದಿತು, ಸಿಂಗಲ್ಸ್‌ ಕೈಕೊಟ್ಟಿತು: ಶುಕ್ರವಾರ ಅರ್ಹತಾ ಪಂದ್ಯದ ಸಿಂಗಲ್ಸ್‌ ಆಟದಲ್ಲಿ ಭಾರತೀಯರು ಎರಡೂ ಪಂದ್ಯ ಕಳೆದುಕೊಂಡು 2-0 ಹಿನ್ನಡೆ ಅನುಭವಿಸಿದ್ದರು. ಭಾನುವಾರ ಕಲ್ಕತಾ ಸೌಥ್‌ ಕ್ಲಬ್‌ನಲ್ಲಿ ನಡೆದ ಡಬಲ್ಸ್‌ ಹಾಗೂ ರಿವರ್ಸ್‌ ಸಿಂಗಲ್ಸ್‌ನಲ್ಲಿ ಗೆಲ್ಲುವುದರ ಮೇಲೆ ಭಾರತೀಯರ ಮುಂದಿನ ಸುತ್ತಿನ ಕನಸು ನಿಂತಿತ್ತು. ನಿರೀಕ್ಷೆ ಹೊತ್ತು ಡಬಲ್ಸ್‌ನಲ್ಲಿ ಕಣಕ್ಕಿಳಿದ ರೋಹನ್‌ ಬೋಪಣ್ಣ -ದಿವಿಜ್‌ ಶರಣ್‌ ಜೋಡಿ ನಿರಾಶೆಗೊಳಿಸಲಿಲ್ಲ. 4-6, 6-3, 6-4 ಸೆಟ್‌ಗಳ ಅಂತರದಿಂದ ಸಿಮೋನ ಬೊಲೆಲಿ – ಮ್ಯಾಟಿಯೋ ಬಾರೆಟ್ಟಿನಿ ಜೋಡಿಯನ್ನು ಸೋಲಿಸಿದರು. 2-1ಕ್ಕೆ ಒಟ್ಟಾರೆ ಅಂತರವನ್ನು ತಗ್ಗಿಸಿದರು. ನಿರೀಕ್ಷೆ ಚಿಗುರಿಸಿದರು. ಈ ಹೋರಾಟ ಒಟ್ಟು 1 ಗಂಟೆ 43 ನಿಮಿಷ ನಡೆಯಿತು. ಆ ಬಳಿಕ ಭಾರತೀಯರು ತಿರುಗಿ ಬೀಳಲಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ ಅಂತಹ ಯಾವುದೇ ಪವಾಡ ನಡೆಯಲಿಲ್ಲ.

ಮೊದಲ ರಿವರ್ಸ್‌ ಸಿಂಗಲ್ಸ್‌ ಪಂದ್ಯದಲ್ಲಿ ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ 6-1, 6-4 ಸೆಟ್ ಅಂತರದಿಂದ ಆ್ಯಂಡ್ರಿಯಾಸ್‌ ಸೆಪ್ಪಿ ವಿರುದ್ಧ ಸೋಲು ಅನುಭವಿಸಿದರು. ವಿಶ್ವ 37ನೇ ಶ್ರೇಯಾಂಕಿತ ಸೆಪ್ಪಿ 102 ಶ್ರೇಯಾಂಕದ ಪ್ರಜ್ಞೇಶ್‌ ವಿರುದ್ಧ ಅತ್ಯುತ್ತಮ ಆಟ ಪ್ರದರ್ಶಿಸಿದರು. ಒಟ್ಟು 64 ನಿಮಿಷದಲ್ಲಿ ಗೆಲುವಿನ ನಗೆ ಬೀರಿದರು. ಅಲ್ಲಿಗೆ ಭಾರತದ ಕನಸು ಛಿದ್ರಗೊಂಡಿತು.

ಟಾಪ್ ನ್ಯೂಸ್

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

32

Politics: ಟಿಕೆಟ್‌ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.