ಸತತ 5 ಸೋಲು; ಕೆಕೆಆರ್‌ ಕತೆ ಮುಗಿಯಿತೇ?


Team Udayavani, Apr 30, 2022, 5:00 AM IST

ಸತತ 5 ಸೋಲು; ಕೆಕೆಆರ್‌ ಕತೆ ಮುಗಿಯಿತೇ?

ಮುಂಬಯಿ: ಶ್ರೇಯಸ್‌ ಅಯ್ಯರ್‌ ಸಾರಥ್ಯದಲ್ಲಿ ಮೊದಲ ಸಲ ಕಣಕ್ಕಿಳಿದ ಕೋಲ್ಕತಾ ನೈಟ್‌ರೈಡರ್ ತೀರಾ ಸಂಕಷ್ಟಕ್ಕೆ ಸಿಲುಕಿದೆ.

ಆಡಿದ 9 ಪಂದ್ಯಗಳಲ್ಲಿ ಆರನ್ನು ಸೋತು ಪ್ಲೇ ಆಫ್ ಮಾರ್ಗದಿಂದ ಬೇರ್ಪಡುವ ಸೂಚನೆಯನ್ನು ರವಾನಿಸಿದೆ.

ಈಗಾಗಲೇ ಮುಂಬೈ, ಚೆನ್ನೈ ನಿರ್ಗಮನ ಬಹುತೇಕ ಖಚಿತವಾಗಿದ್ದು, ಈ ಸಾಲಿಗೆ ಕೋಲ್ಕತಾ ಕೂಡ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಐಪಿಎಲ್‌ ಮುಕ್ತಾಯಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ 3 ಸ್ಟಾರ್‌ ತಂಡಗಳು ಹೊರಬೀಳುವುದು ಒಳ್ಳೆಯ ಲಕ್ಷಣವಂತೂ ಅಲ್ಲ.

ಗುರುವಾರ ಕೆಕೆಆರ್‌-ಡೆಲ್ಲಿ ನಡುವಿನ ಪಂದ್ಯ ಇಬ್ಬರ ಪಾಲಿಗೂ “ಡು ಆರ್‌ ಡೈ ಮ್ಯಾಚ್‌’ ಆಗಿತ್ತು. ಅಕಸ್ಮಾತ್‌ ಡೆಲ್ಲಿ ಸೋತಿದ್ದರೂ ಇದೇ ಸ್ಥಿತಿ ತಲುಪುತ್ತಿತ್ತು. ಆದರಲ್ಲಿ ಅಯ್ಯರ್‌ ಪಡೆಗೆ ನಸೀಬು ಕೈಕೊಟ್ಟಿತು. ಡೆಲ್ಲಿ ವಿರುದ್ಧ ಆಡಿದ ಈ ಋತುವಿನ ಎರಡೂ ಪಂದ್ಯಗಳಲ್ಲೂ ಎಡವಿತು.

ಈ ಸಂದರ್ಭದಲ್ಲಿ ಮಾತಾಡಿದ ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌, “ನಮ್ಮ ಆರಂಭ ಬಹಳ ನಿಧಾನ ಗತಿಯಿಂದ ಕೂಡಿತ್ತು. ಹಂತ ಹಂತವಾಗಿ ವಿಕೆಟ್‌ ಕಳೆದುಕೊಳ್ಳುತ್ತ ಹೋದೆವು. ಹೀಗಾಗಿ ದೊಡ್ಡ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕ್ಷಮೆ ಇಲ್ಲ’ ಎಂದರು.

“ಗಾಯಾಳುಗಳ ಸಮಸ್ಯೆ ನಮ್ಮ ತಂಡವನ್ನು ಕಾಡುತ್ತಿದೆ. ಹೀಗಾಗಿ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಆಗಾಗ ಬದಲಾವಣೆ ಸಂಭವಿಸುತ್ತಲೇ ಇದೆ. ಇದರಿಂದ ಆಟಗಾರರರಿಗೆ ಸೆಟ್‌ ಆಗಲು ಸಾಧ್ಯವಾಗುತ್ತಿಲ್ಲ. ಇನ್ನೂ 5 ಪಂದ್ಯಗಳನ್ನು ಆಡಲಿಕ್ಕಿದೆ. ಫ್ರಾಂಚೈಸಿ ನಮ್ಮ ಮೇಲೆ ನಂಬಿಕೆ ಇರಿಸಿದೆ. ಹಿಂದಿನದ್ದೆಲ್ಲವನ್ನೂ ಮರೆತು ಹೊಸ ಆರಂಭ ಪಡೆಯಬೇಕು…’ ಎಂದರು.

“ಸೋಲಿನ ಕುರಿತು ವಿಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಅತಿಯಾದ ಆತ್ಮವಿಶ್ವಾಸದ ಪರಿಣಾಮವೇನೂ ಅಲ್ಲ. ಇನ್ನಾದರೂ ನಮ್ಮ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ತೋರ್ಪಡಿಸಬೇಕು’ ಎಂದು ಅಯ್ಯರ್‌ ಮುಂದಿನ ಯೋಜನೆ ಕುರಿತು ಹೇಳಿದರು.

ಸತತ ಸೋಲಿನ ಆಟ
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಯನ್ನು ಮಣಿಸಿ ಭರವಸೆಯ ಆರಂಭ ಮಾಡಿದ್ದ ಕೆಕೆಆರ್‌, ಬಳಿಕ ಆರ್‌ಸಿಬಿಗೆ ಶರಣಾಯಿತು. ಆದರೆ ಪಂಜಾಬ್‌ ಮತ್ತು ಮುಂಬೈಯನ್ನು ಪರಾಭವಗೊಳಿಸಿ ಮತ್ತೆ ಓಟ ಬೆಳೆಸಿತು. ಅನಂತರ ಗೆಲುವಿನ ಮುಖವನ್ನೇ ಕಂಡಿಲ್ಲ. ಕೆಲವು ಸಣ್ಣ ಅಂತರದ ಸೋಲುಗಳಾದರೂ ಸೋಲು ಸೋಲೇ!

ಡೆಲ್ಲಿ ಎದುರಿನ ಮೊದಲ ಸುತ್ತಿನ ಪಂದ್ಯವನ್ನು 44 ರನ್ನುಗಳಿಂದ ಕಳೆದುಕೊಂಡಿತು. ಇಲ್ಲಿಂದ ಆರಂಭಗೊಂಡ ಸೋಲಿನ ಆಟ ಮತ್ತೆ ಡೆಲ್ಲಿ ಎದುರು 4 ವಿಕೆಟ್‌ಗಳಿಂದ ಎಡವುವ ತನಕವೂ ಮುಂದುವರಿದಿದೆ.

ಕೆಕೆಆರ್‌ ಒಂದು ತಂಡವಾಗಿಯೂ ಆಡುತ್ತಿಲ್ಲ, ಆಟಗಾರರು ವೈಯಕ್ತಿಕವಾಗಿಯೂ ಯಶಸ್ಸು ಕಾಣುತ್ತಿಲ್ಲ. ಆರನ್‌ ಫಿಂಚ್‌, ವೆಂಕಟೇಶ್‌ ಅಯ್ಯರ್‌, ಸುನೀಲ್‌ ನಾರಾಯಣ್‌, ಆ್ಯಂಡ್ರೆ ರಸೆಲ್‌, ಪ್ಯಾಟ್‌ ಕಮಿನ್ಸ್‌, ವರುಣ್‌ ಚಕ್ರವರ್ತಿ, ಟಿಮ್‌ ಸೌಥಿ… ಎಲ್ಲರದೂ ಫ್ಲಾಪ್‌ ಶೋ. ಈವರೆಗೆ ಉತ್ತಮ ನಿರ್ವಹಣೆಯನ್ನು ಕಾಯ್ದುಕೊಂಡು ಬಂದವರು ಶ್ರೇಯಸ್‌ ಅಯ್ಯರ್‌, ನಿತೀಶ್‌ ರಾಣಾ ಮತ್ತು ಉಮೇಶ್‌ ಯಾದವ್‌ ಮಾತ್ರ. ರನ್‌ರೇಟ್‌ -0.006ಕ್ಕೆ ಕುಸಿದಿರುವುದು ಕೂಡ ಕೆಕೆಆರ್‌ಗೆ ಎದುರಾಗಿರುವ ಭಾರೀ ಹಿನ್ನಡೆ.

ಕೋಲ್ಕತಾ ನೈಟ್‌ರೈಡರ್ ಪಂದ್ಯಗಳ ಫ‌ಲಿತಾಂಶ
ಎದುರಾಳಿ ಫ‌ಲಿತಾಂಶ
1. ಚೆನ್ನೈ 6 ವಿಕೆಟ್‌ ಜಯ
2. ಆರ್‌ಸಿಬಿ 3 ವಿಕೆಟ್‌ ಸೋಲು
3. ಮುಂಬೈ 6 ವಿಕೆಟ್‌ ಜಯ
4. ಪಂಜಾಬ್‌ 54 ರನ್‌ ಜಯ
5. ಡೆಲ್ಲಿ 44 ರನ್‌ ಸೋಲು
6. ಹೈದರಾಬಾದ್‌ 7 ವಿಕೆಟ್‌ ಸೋಲು
7. ರಾಜಸ್ಥಾನ್‌ 7 ರನ್‌ ಸೋಲು
8. ಗುಜರಾತ್‌ 8 ರನ್‌ ಸೋಲು
9. ಡೆಲ್ಲಿ 4 ವಿಕೆಟ್‌ ಸೋಲು

ಟಾಪ್ ನ್ಯೂಸ್

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.