ಲಕ್ನೋ-ಡೆಲ್ಲಿ ಫೈಟ್‌; ಎರಡೂ ತಂಡಗಳು ಇನ್ನಷ್ಟು ಬಲಿಷ್ಠ

ಸ್ಟೋಯಿನಿಸ್‌, ನೋರ್ಜೆ, ವಾರ್ನರ್‌ ಎಂಟ್ರಿ

Team Udayavani, Apr 7, 2022, 8:05 AM IST

ರಾಹುಲ್‌ ಲಕ್ನೋ-ಪಂತ್‌ ಡೆಲ್ಲಿ ನಡುವೆ ಹೋರಾಟ

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ -ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳ ಗುರುವಾರದ ಮೇಲಾಟ ಹೆಚ್ಚು ಬಲಿಷ್ಠಗೊಳ್ಳಲಿದೆ. ಕಾರಣ, ಎರಡೂ ತಂಡಗಳಿಗೆ ಕೆಲವು ಸ್ಟಾರ್‌ ಆಟಗಾರರ ಸೇರ್ಪಡೆ.

ಲಕ್ನೋ ತಂಡಕ್ಕೆ ಮಾರ್ಕಸ್‌ ಸ್ಟಾಯಿನಿಸ್‌, ಡೆಲ್ಲಿ ತಂಡಕ್ಕೆ ಡೇವಿಡ್‌ ವಾರ್ನರ್‌ ಮತ್ತು ಅನ್ರಿಚ್‌ ನೋರ್ಜೆ ಸೇರಿಕೊಳ್ಳುವುದು ಖಾತ್ರಿಗೊಂಡಿರುವುದರಿಂದ ಇತ್ತಂಡಗಳ ಜೋಶ್‌ ಕೂಡ ಅಷ್ಟೇ ಮಟ್ಟದಲ್ಲಿ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕೆ.ಎಲ್‌.ರಾಹುಲ್‌-ರಿಷಭ್‌ ಪಂತ್‌ ತಂಡಗಳ ನಡುವಿನ ಮೇಲಾಟ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿಸಿದೆ.ಇವರಿಬ್ಬರೂ ಸ್ವಂತ ಬ್ಯಾಟಿಂಗ್‌ ಬಲದಿಂದ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದರೂ ತಾರಾ ಆಟಗಾರರ ಆಗಮನದಿಂದ ಇಡೀ ತಂಡದ ಮನೋಬಲವೇ ಬದಲಾಗುವುದರಲ್ಲಿ ಅನುಮಾನವಿಲ್ಲ.

ಇಲ್ಲಿ ಹೆಚ್ಚಿನ ಲಾಭವಾಗುವುದು ಡೆಲ್ಲಿ ತಂಡಕ್ಕೆ. ಎರಡರಲ್ಲಿ ಒಂದನ್ನಷ್ಟೇ ಗೆದ್ದಿರುವ ಪಂತ್‌ ಪಡೆಗೆ ಕಾಂಗರೂ ನಾಡಿನ ಇನ್‌ಫಾರ್ಮ ಬ್ಯಾಟರ್‌ ವಾರ್ನರ್‌ ಮತ್ತು ಹರಿಣಗಳ ದೇಶದ ಘಾತಕ ವೇಗಿ ನೋರ್ಜೆ ಸೇವೆ ಲಭಿಸಿವುದರಿಂದ ಎರಡೂ ವಿಭಾಗಗಳಲ್ಲೂ ತಂಡ ಬಲಿಷ್ಠಗೊಳ್ಳಲಿದೆ.

“ಡೇವಿಡ್‌ ವಾರ್ನರ್‌ ಅವರ ಕ್ವಾರಂಟೈನ್‌ ಪೂರ್ತಿಗೊಂಡಿದೆ. ಹೀಗಾಗಿ ಆಯ್ಕೆಗೆ ಲಭ್ಯರಾಗಿದ್ದಾರೆ. ಹಾಗೆಯೇ ನೋರ್ಜೆ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ. ಅವರೂ ಆಡಲು ಸಜ್ಜಾಗಿದ್ದಾರೆ’ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಶೇನ್‌ ವಾಟ್ಸನ್‌ ಹೇಳಿದ್ದಾರೆ. ಆಗ ವಾರ್ನರ್‌ಗಾಗಿ ಟಿಮ್‌ ಸೀಫರ್ಟ್‌, ಹಾಗೆಯೇ ನೋರ್ಜೆಗಾಗಿ ರೋವ¾ನ್‌ ಪೊವೆಲ್‌ ಅಥವಾ ಮುಸ್ತಫಿಜುರ್‌ ರೆಹಮಾನ್‌ ಜಾಗ ಬಿಡಬೇಕಾಗುತ್ತದೆ.

ಇತ್ತ ಸ್ಟಾಯಿನಿಸ್‌ ಅವರಿಗಾಗಿ ಆಂಡ್ರ್ಯೂ ಟೈ ಅಥವಾ ಎವಿನ್‌ ಲೆವಿಸ್‌ ಲಕ್ನೋ ತಂಡದಿಂದ ಹೊರಗುಳಿಯಬೇಕಾಗಬಹುದು. ಸ್ಟಾಯಿನಿಸ್‌ ಯಾವುದಾದರೊಂದು ವಿಭಾಗದಲ್ಲಿ ಕ್ಲಿಕ್‌ ಆದರೂ ರಾಹುಲ್‌ ಬಳಗಕ್ಕೆ ಅದರಿಂದ ಲಾಭವೇ ಆಗಲಿದೆ. ಕಳೆದ ಪಂದ್ಯದ ಮೂಲಕ ಜೇಸನ್‌ ಹೋಲ್ಡರ್‌ ಆಡಲಾರಂಭಿಸಿದ್ದು ಕೂಡ ಲಕ್ನೋದ ಅದೃಷ್ಟ ವನ್ನು ತೆರೆದಿರಿಸಿದೆ.

ಇದನ್ನೂ ಓದಿ:ಐಪಿಎಲ್‌ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್

ಲಕ್ನೋಗೆ ಒಲಿಯುತ್ತಿದೆ ಲಕ್‌
ಮೊದಲ ಪಂದ್ಯದಲ್ಲಿ ಮತ್ತೊಂದು ನೂತನ ತಂಡವಾದ ಗುಜರಾತ್‌ಗೆ ಶರಣಾಗಿದ್ದ ಲಕ್ನೋ, ಅನಂತರದ ಎರಡೂ ಮುಖಾಮುಖಿಗಳಲ್ಲಿ ತನ್ನ ಲಕ್‌ ಸಾಬೀತುಪಡಿಸಲಾರಂಭಿಸಿದೆ. ಚೆನ್ನೈ ವಿರುದ್ಧ 6 ವಿಕೆಟ್‌ ಹಾಗೂ ಕಳೆದ ಪಂದ್ಯದಲ್ಲಿ ಹೈದರಾಬಾದ್‌ ವಿರುದ್ಧ 12 ರನ್ನುಗಳ ರೋಚಕ ಜಯ ಸಾಧಿಸಿದೆ. ಆದರೆ ಡೆಲ್ಲಿ ಸವಾಲು ಇವೆರಡಕ್ಕಿಂತ ಮಿಗಿಲಾದುದು!

ಲಕ್ನೋಗೆ ಬ್ಯಾಟಿಂಗ್‌ ಚಿಂತೆ
ಲಕ್ನೋ ಬ್ಯಾಟಿಂಗ್‌ ವಿಭಾಗ ಕೆ.ಎಲ್‌. ರಾಹುಲ್‌, ದೀಪಕ್‌ ಹೂಡಾ ಮತ್ತು ಯುವ ಬ್ಯಾಟರ್‌ ಆಯುಷ್‌ ಬದೋನಿ ಅವರನ್ನು ಹೆಚ್ಚು ಅವಲಂಬಿಸಿದೆ. ಚೆನ್ನೈ ವಿರುದ್ಧ ಸಿಡಿದ ಡಿ ಕಾಕ್‌, ಲೆವಿಸ್‌ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆದರೆ ಮನೀಷ್‌ ಪಾಂಡೆ ಅವರ ಸತತ ವೈಫಲ್ಯ ಚಿಂತಿಸುವಂತೆ ಮಾಡಿದೆ. ಕೃಣಾಲ್‌ ಪಾಂಡ್ಯ ಬ್ಯಾಟ್‌ ಕೂಡ ಮುಷ್ಕರ ಹೂಡಿದೆ. ಒಟ್ಟಾರೆ ಲಕ್ನೋ ಬ್ಯಾಟಿಂಗ್‌ ಯೂನಿಟ್‌ ನೂತನ ಜೋಶ್‌ ಪಡೆದರೆ ಸ್ಪರ್ಧೆ ಹೆಚ್ಚು ರೋಚಕಗೊಳ್ಳಲಿದೆ.

ಬ್ಯಾಟಿಂಗ್‌ಗೆ ಹೋಲಿಸಿದರೆ ಲಕ್ನೋ ಬೌಲಿಂಗ್‌ ದುರ್ಬಲ. ಭರವಸೆಯ ದಾಳಿ ಸಂಘಟಿಸುತ್ತಿರುವುದು ರವಿ ಬಿಷ್ಣೋಯಿ ಮಾತ್ರ.

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.