ಡೆಲ್ಲಿ ಸೋತರೆ ಪ್ಲೇ ಆಫ್ ತೇರ್ಗಡೆ ದಾರಿ ದುರ್ಗಮ


Team Udayavani, May 2, 2018, 6:00 AM IST

a6.jpg

ಹೊಸದಿಲ್ಲಿ: ಆಡಿದ 8 ಪಂದ್ಯಗಳಲ್ಲಿ ಆರರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಪ್ಲೇ ಆಫ್ನಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. ಪ್ಲೇ ಆಫ್ ಹಾದಿಯನ್ನು ಜೀವಂತವಿರಿಸಿಕೊಳ್ಳಬೇಕಾದರೆ ನೂತನ ನಾಯಕ ಶ್ರೇಯಸ್‌ ಅಯ್ಯರ್‌ ಅವರ ಪಡೆ ಮುಂದಿನ ಪ್ರತಿಯೊಂದು ಪಂದ್ಯವನ್ನು ನಾಕೌಟ್‌ ಪಂದ್ಯವೆಂದು ಭಾವಿಸಿ ಹೋರಾಡಬೇಕಾ ಗಿದೆ. ಇನ್ನುಳಿದ ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಡೆಲ್ಲಿಗೆ ಮುನ್ನಡೆಯುವ ಅವಕಾಶ ಸಿಗುವ ಸಾಧ್ಯತೆಯಿದೆ.

ಸೋಮವಾರದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಹೋರಾಡಿ ಸೋತಿದ್ದ ಡೆಲ್ಲಿ ತಂಡ ಬುಧವಾರದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಎದುರಿಸಲಿದೆ. ರಾಜಸ್ಥಾನ ಕೂಡ ಈ ಕೂಟದಲ್ಲಿ ಸಾಧಾರಣ ನಿರ್ವಹಣೆ ನೀಡಿದೆ. ಹಾಗಾಗಿ ಉಭಯ ತಂಡಗಳು ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿ ಸುವ ಸಾಧ್ಯತೆಯಿದೆ. ಚೆನ್ನೈ ವಿರುದ್ಧ ಡೆಲ್ಲಿಯ ವೀರಾವೇಶದ ಆಟ ಗಮನಿಸಿದರೆ ಜಯಭೇರಿ ಹೊಡೆದರೂ ಸಂಶಯವಿಲ್ಲ.

ಸತತ ಸೋಲಿನ ಬಳಿಕ ಗೌತಮ್‌ ಗಂಭೀರ್‌ ನಾಯಕತ್ವ ತ್ಯಜಿಸಿದ ಅನಂತರ ಶ್ರೇಯಸ್‌ ಅಯ್ಯರ್‌ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದರಲ್ಲದೇ ಮೊದಲ ಪಂದ್ಯದಲ್ಲಿ 40 ಎಸೆತಗಳಿಂದ ಅಜೇಯ 93 ರನ್‌ ಸಿಡಿಸಿ ತಂಡಕ್ಕೆ ಪ್ರಚಂಡ ಜಯ ತಂದುಕೊಟ್ಟಿದ್ದರು. ಆದರೆ ಚೆನ್ನೈ ವಿರುದ್ಧ ತಂಡ 13 ರನ್ನಿನಿಂದ ಸೋತು ನಿರಾಶೆ ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ತಂಡ ಕೊನೆ ಕ್ಷಣದವ ರೆಗೂ ಗೆಲುವಿಗಾಗಿ ಹೋರಾಡಿದ್ದನ್ನು ಮರೆಯುವಂತಿಲ್ಲ. ಚೆನ್ನೈಯ 211 ರನ್ನಿಗೆ ಉತ್ತರವಾಗಿ ದಿಟ್ಟ ಉತ್ತರ ನೀಡಿದ ಡೆಲ್ಲಿ ತಂಡ 198 ರನ್‌ ಗಳಿಸಿ ಶರಣಾಯಿತು. ಶ್ರೇಯಸ್‌ ವಿಫ‌ಲರಾದರೂ ರಿಷಬ್‌ ಪಂತ್‌ 45 ಎಸೆತಗಳಿಂದ 79 ಮತ್ತು ವಿಜಯ್‌ ಶಂಕರ್‌ 31 ಎಸೆತಗಳಿಂದ 54 ರನ್‌ ಸಿಡಿಸಿದರು. 

ಅಯ್ಯರ್‌, ರಿಷಬ್‌ ಆಧಾರ
ಇಷ್ಟರವರೆಗಿನ ಪಂದ್ಯಗಳಲ್ಲಿ ಅಯ್ಯರ್‌ ಮತ್ತು ರಿಷಬ್‌ ಮಿಂಚಿದ್ದಾರೆ. ಅವರಿಬ್ಬರು ಅನುಕ್ರಮವಾಗಿ 306 ಮತ್ತು 257 ರನ್‌ ಪೇರಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾಗಿದ್ದಾರೆ. ಅವರಿಬ್ಬರು ಬುಧವಾರದ ಪಂದ್ಯದಲ್ಲೂ ಮಿಂಚಿದರೆ ಡೆಲ್ಲಿ ಗೆಲುವಿಗೆ ಪ್ರಯತ್ನಿಸಬಹುದು. ಡೆಲ್ಲಿಯ ಬೌಲಿಂಗ್‌ ಉತ್ತಮ ಮಟ್ಟದಲ್ಲಿದೆ. ಟ್ರೆಂಟ್‌ ಬೌಲ್ಟ್ 11 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ. ಆದರೆ ಅವರಿಗೆ ಉಳಿದವರು ಉತ್ತಮ ಸಹಕಾರ ನೀಡುತ್ತಿಲ್ಲ.

5ನೇ ಸ್ಥಾನದಲ್ಲಿ  ರಾಜಸ್ಥಾನ
ಆಡಿದ ಏಳು ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿರುವ ರಾಜಸ್ಥಾನ ರಾಯಲ್ಸ್‌ ಆರಂಕದೊಂದಿಗೆ ಐದನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನೇತೃತ್ವದ ತಂಡ ಸ್ಥಿರವಾದ ನಿರ್ವಹಣೆ ನೀಡುತ್ತಿಲ್ಲ. ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಗೆಲ್ಲಲು 151 ರನ್‌ ಸವಾಲಿದ್ದರೂ ರಾಜಸ್ಥಾನ 11 ರನ್ನಿನಿಂದ ಸೋತು ಆಘಾತಕ್ಕೆ ಒಳಗಾಗಿತ್ತು. ಈ ಪಂದ್ಯದಲ್ಲಿ ರಹಾನೆ 65 ಮತ್ತು ಸ್ಯಾಮ್ಸನ್‌ 40 ರನ್‌ ಗಳಿಸಿದ್ದರೂ ಉಳಿದ ಆಟಗಾರರು ಉತ್ತಮ ಬೆಃಬಲ ನೀಡಲಿಲ್ಲ. ಈ ಋತುವಿನಲ್ಲಿ ರಹಾನೆ ಮತ್ತು ಸ್ಯಾಮ್ಸನ್‌ ಮಾತ್ರ ಉತ್ತಮ ನಿರ್ವಹಣೆ ನೀಡಿದ್ದಾರೆ. ಉಳಿದಂತೆ ಬೆನ್‌ ಸ್ಟೋಕ್ಸ್‌, ಬಟ್ಲರ್‌ ಅವರ ಅಸ್ಥಿರ ನಿರ್ವಹಣೆ ಮುಂದುವರಿದಿದೆ. ಬೌಲಿಂಗ್‌ದಲ್ಲಿ ಜೋಫ್ರಾ ಆರ್ಚರ್‌ ಅವರನ್ನು ಬಿಟ್ಟರೆ ಉಳಿದ ಬೌಲರ್‌ಗಳು ವಿಫ‌ಲರಾಗಿದ್ದಾರೆ.

ತಂಡವಾಗಿ ಉತ್ತಮ ನಿರ್ವಹಣೆ
ನಾವು ತಂಡವಾಗಿ ಉತ್ತಮ ನಿರ್ವಹಣೆ ನೀಡುತ್ತಿದ್ದೇವೆ. ಆದರೆ ಚಿಕ್ಕಪುಟ್ಟ ವಿಷಯದಿಂದಾಗಿ ನಾವು ಪಂದ್ಯವನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ವಿಜಯ ಶಂಕರ್‌ ಹೇಳಿದರು. ನಾವು ಚೆನ್ನೈಯಂತಹ ಬಲಿಷ್ಠ ತಂಡದೆದುರು 6 ಓವರ್‌ಗಳಲ್ಲಿ 80 ರನ್‌ ಗಳಿಸುವ ಸಾಹಸಕ್ಕೆ ಪ್ರಯತ್ನಿಸಿದೆವು ಮತ್ತು ಸನಿಹದವರೆಗೆ ಬಂದು 13 ರನ್ನಿನಿಂದ ಸೋತೆವು. ನಾವು ಗೆಲುವಿಗಾಗಿ ಬಹಳಷ್ಟು ಪ್ರಯತ್ನ ಪಟ್ಟೆವು. ಮುಂದಿನ ಪಂದ್ಯಗಳಲ್ಲಿ ಒಳ್ಳೆಯ ತಂಡವಾಗಿ ಉತ್ತಮ ಹೋರಾಟ ನೀಡಲು ಪ್ರಯತ್ನಿಸಲಿದ್ದೇವೆ ಎಂದವರು ತಿಳಿಸಿದರು.

ಟಾಪ್ ನ್ಯೂಸ್

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು

ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

1-ewqew

KKR ಸೋಲಿನ ಮೇಲೆ ಬರೆ : ಶ್ರೇಯಸ್‌ ಅಯ್ಯರ್‌ಗೆ 12 ಲಕ್ಷ ರೂ. ದಂಡ

Hockey

Hockey; ಕುಂಡ್ಯೋಳಂಡ ಟೂರ್ನಿ: ಕಣ್ಣಂಡ ತಂಡಕ್ಕೆ ಜಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.