ಆರ್ಸಿಬಿಗೆ ಮತ್ತೂಂದು “ಮಸ್ಟ್ ವಿನ್’ ಮ್ಯಾಚ್
Team Udayavani, May 17, 2018, 6:00 AM IST
ಬೆಂಗಳೂರು: ಸತತ 2 ಗೆಲುವಿನಿಂದ ಪ್ಲೇ-ಆಫ್ ರೇಸ್ನಲ್ಲಿ ತಾನೂ ಇದ್ದೇನೆ ಎಂದಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಗುರುವಾರ ಅಗ್ರಸ್ಥಾನಿ ಸನ್ರೈಸರ್ ಹೈದರಾಬಾದ್ ವಿರುದ್ಧ “ನಾಕೌಟ್’ ಮಹತ್ವದ ಪಂದ್ಯವನ್ನು ಆಡಲಿದೆ.
ಈ ಪಂದ್ಯ ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಇದು ಕೊಹ್ಲಿ ಪಡೆ ಬೆಂಗಳೂರಿನಲ್ಲಿ ಆಡಲಿರುವ ಪ್ರಸಕ್ತ ಋತುವಿನ ಕಟ್ಟಕಡೆಯ ಪಂದ್ಯವೂ ಆಗಿದೆ. ತವರಿನ ಅಭಿಮಾನಿಗಳಿಗೆ ಗೆಲುವನ್ನು ಅರ್ಪಿಸಿ ಆ ಮೂಲಕ ಪ್ಲೇ-ಆಫ್ ಬಾಗಿಲಿಗೆ ಹತ್ತಿರವಾಗುವುದು ಆರ್ಸಿಬಿಯ ಯೋಜನೆ.
ಹೈದರಾಬಾದ್ ಈಗಾಗಲೇ 12 ಪಂದ್ಯಗಳಿಂದ 18 ಅಂಕ ಗಳಿಸಿ “ಟೇಬಲ್ ಟಾಪರ್’ ಎನಿಸಿದೆ. ಅಗ್ರಸ್ಥಾನಿಯಾಗಿಯೇ ಲೀಗ್ ಹಂತ ಮುಗಿಸುವುದು ಕೇನ್ ವಿಲಿಯಮ್ಸನ್ ಪಡೆಯ ಗುರಿಯಾದರೆ ಅಚ್ಚರಿಯೇನಿಲ್ಲ. ಇತ್ತ ಆರ್ಸಿಬಿ ಇಷ್ಟೇ ಪಂದ್ಯಗಳಿಂದ ಕೇವಲ 10 ಅಂಕಗಳನ್ನಷ್ಟೇ ಸಂಪಾದಿಸಿದೆ. ಉಳಿದೆರಡೂ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದರೆ ಕೊಹ್ಲಿ ಪಡೆಗೂ ಪ್ಲೇ-ಆಫ್ ಟಿಕೆಟ್ ಲಭಿಸಲಿದೆ ಎಂಬುದು ಸದ್ಯದ ಲೆಕ್ಕಾಚಾರ. ಅಕಸ್ಮಾತ್ ಹೈದರಾಬಾದ್ಗೆ ಸೋತರೆ ಆರ್ಸಿಬಿ ತವರಿನಲ್ಲೇ ಕೂಟದಿಂದ ಹೊರಬೀಳಬೇಕಾದ ಅವಮಾನಕ್ಕೆ ಸಿಲುಕುತ್ತದೆ. ಹಾಗೆಯೇ ಮಳೆ ಸುರಿದು ಪಂದ್ಯ ರದ್ದಾದರೂ ಆರ್ಸಿಬಿಗೆ ಕಂಟಕ ತಪ್ಪಿದ್ದಲ್ಲ.
ಹೈದರಾಬಾದ್ಗೂ ಆಘಾತ!
ಹೈದರಾಬಾದ್ ಸಾಮರ್ಥ್ಯದ ಬಗ್ಗೆ ಅನುಮಾನವೇ ಇಲ್ಲ. ಕೊಹ್ಲಿಯಂತೆ ನಾಯಕ ವಿಲಿಯಮ್ಸನ್ ಕೂಡ ಐನೂರರ ಗಡಿ ದಾಟಿದ್ದಾರೆ. ಶಿಖರ್ ಧವನ್ 369 ರನ್ ಪೇರಿಸಿ ಆಪತಾºಂಧವರಾಗಿದ್ದಾರೆ. ಆದರೆ ಯೂಸುಫ್ ಪಠಾಣ್ (186), ಮನೀಷ್ ಪಾಂಡೆ (189), ಶಕಿಬ್ ಅಲ್ ಹಸನ್ (166) ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿಬಂದಿಲ್ಲ. ತಂಡದ ಬೌಲಿಂಗ್ ಕೂಟದಲ್ಲೇ ಅತ್ಯಂತ ಘಾತಕ. ಆದರೂ ಹಿಂದಿನ ಪಂದ್ಯದಲ್ಲಿ ಅದು ಚೆನ್ನೈ ವಿರುದ್ಧ ಪುಣೆಯಲ್ಲಿ 8 ವಿಕೆಟ್ಗಳ ಆಘಾತಕಾರಿ ಸೋಲುಂಡಿತ್ತು. ಇದು ಆರ್ಸಿಬಿ ಪಾಲಿಗೆ ತವರು ಪಂದ್ಯವಾದ್ದರಿಂದ ಹೈದರಾಬಾದ್ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
5 ರನ್ನಿನಿಂದ ಸೋತ ಆರ್ಸಿಬಿ
ಹೈದರಾಬಾದ್ನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಆತಿಥೇಯ ಸನ್ರೈಸರ್ 146 ರನ್ನುಗಳ ಸಣ್ಣ ಮೊತ್ತಕ್ಕೆ ಆಲೌಟಾಗಿಯೂ ಪಂದ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿತ್ತು. ಜವಾಬು ನೀಡತೊಡಗಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟಿಗೆ 141 ರನ್ ಗಳಿಸಿ 5 ರನ್ನಿನಿಂದ ಶರಣಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವುದು ಕೂಡ ಕೊಹ್ಲಿ ಪಡೆಯ ಯೋಜನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ